ಸಿಬಿಐ ವಶದಲ್ಲಿದ್ದ 400 ಕೆ.ಜಿ ಪೈಕಿ 100 ಕೆ.ಜಿ ಚಿನ್ನ ಮಾಯ!: ತನಿಖಾ ಸಂಸ್ಥೆ ವಿರುದ್ಧವೇ ಕಳ್ಳತನದ ಆರೋಪ!? 
ದೇಶ

ಸಿಬಿಐ ವಶದಲ್ಲಿದ್ದ 400 ಕೆ.ಜಿ. ಪೈಕಿ 100 ಕೆ.ಜಿ. ಚಿನ್ನ ಮಾಯ!: ತನಿಖಾ ಸಂಸ್ಥೆ ವಿರುದ್ಧವೇ ಕಳ್ಳತನದ ಆರೋಪ?

ಕಾನೂನಿನ ಕಣ್ಣೆದುರೇ ಕಳ್ಳತನ, ಅಪರಾಧಗಳು ನಡೆಯುವು ಹೊಸತೇನಲ್ಲ. ಆದರೆ 400 ಕೆ.ಜಿ ಪೈಕಿ 100 ಕೆ.ಜಿ ಚಿನ್ನದ ಗಟ್ಟಿ, ಆಭರಣಗಳು ಮಾಯವಾಗಿದೆ. 

ಚೆನ್ನೈ: ಕಾನೂನಿನ ಕಣ್ಣೆದುರೇ ಕಳ್ಳತನ, ಅಪರಾಧಗಳು ನಡೆಯುವು ಹೊಸತೇನಲ್ಲ. ಆದರೆ 400 ಕೆ.ಜಿ ಪೈಕಿ 100 ಕೆ.ಜಿ ಚಿನ್ನದ ಗಟ್ಟಿ, ಆಭರಣಗಳು ಮಾಯವಾಗಿದೆ. 

ಈ ಸಂಬಂಧ ಸಿಬಿ-ಸಿಐಡಿ ತನಿಖೆಗೆ ಮದ್ರಾಸ್ ಹೈಕೋರ್ಟ್ ತನಿಖೆಗೆ ಆದೇಶ ನೀಡಿದೆ. 2012 ರಲ್ಲಿ ಖಾಸಗಿ ಆಮದುದಾರರಿಂದ ಸಿಬಿಐ ವಶಕ್ಕೆ ಪಡೆದಿದ್ದ 400 ಕೆ.ಜಿಯಷ್ಟು ಚಿನ್ನವನ್ನು ಇರಿಸಲಾಗಿದ್ದ ನೆಲಮಾಳಿಗೆಯನ್ನು ತೆರೆದಾಗ ಈ "ಕಳ್ಳತನ" ಬೆಳಕಿಗೆ ಬಂದಿದೆ. 

ಘಟನೆಗೆ ಸಂಬಂಧಿಸಿದಂತೆ ಸಿಬಿಐ ವಿರುದ್ಧವೇ ಏಕೆ ಕಳ್ಳತನದ ಆರೋಪದಡಿ ಪ್ರಕರಣ ದಾಖಲಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಈ ಸಂಬಂಧ ಪ್ರಶ್ನಿಸಿದೆ. ಆದರೆ ಸಿಬಿಐ ತನ್ನ ವಿರುದ್ಧ ಸ್ಥಳೀಯ ಪೊಲೀಸರು ತನಿಖೆ ನಡೆಸಿದರೆ ತನ್ನ ತನಿಖಾ ಸಂಸ್ಥೆಯ ಘನತೆಗೆ ಧಕ್ಕೆಯಾಗುತ್ತದೆ ಎಂದು ಕೋರ್ಟ್ ಮುಂದೆ ವಾದ ಮಂಡಿಸಿತ್ತು. ಆದರೆ ನ್ಯಾ.ಪಿ.ಎನ್ ಪ್ರಕಾಶ್ "ಸಿಬಿಐ ಆದರೆ ಅದಕ್ಕೇನು ಕೋಡಿದೆಯೇ? ಕಾನೂನಿನಲ್ಲಿ ಈ ರೀತಿಯ ವಿನಾಯ್ತಿಗೆ ಅವಕಾಶವಿಲ್ಲ ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದ್ದಾರೆ. 

ಚಿನ್ನದ ಪ್ರಮಾಣ ಕಡಿಮೆಯಾಗಿರುವುದಕ್ಕೂ ಸಮರ್ಥನೆ ನೀಡಿರುವ ಸಿಬಿಐ, ಚಿನ್ನವನ್ನು ಲನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ ನ ಲಿಕ್ವಿಡೇಟರ್ ಗೆ ಹಸ್ತಾಂತರಿಸುವಾಗ ಪ್ರತ್ಯೇಕವಾಗಿ ತೂಕ ಮಾಡಲಾಗಿದ್ದು, ಅದು ಕಾರಣ ಚಿನ್ನದ ಪ್ರಮಾಣ 296 ಕೆ.ಜಿಯಷ್ಟೇ ಪತ್ತೆಯಾಗಿ ಕಡಿಮೆಯಾಗಿದೆ ಎಂದು ಹೇಳಿತ್ತು. 

ಈ ವಾದವನ್ನು ಆಲಿಸಿದ ಸಿಬಿಐ ಕೋರ್ಟ್ ವ್ಯತ್ಯಾಸ ಕಂಡುಬರುತ್ತಿರುವುದು ಕೆಲವೇ ಗ್ರಾಮ್ ಗಳಷ್ಟು ಅಲ್ಲ. ಬರೊಬ್ಬರಿ 1 ಲಕ್ಷ ಗ್ರಾಮ್ ನಷ್ಟು ಕಾಣೆಯಾಗಿದೆ, 103.864 ಕೆ.ಜಿಯಷ್ಟು ಚಿನ್ನ ಏನಾಯಿತು ಎಂಬುದಕ್ಕೆ ಸಿಬಿಐ ಉತ್ತರವಿಲ್ಲ ಎಂದು ಹೇಳಿದೆ.

ಎಂಎಂಟಿಸಿ ಅಧಿಕಾರಿಗಳು ಹಾಗೂ ಸುರಾನಾ ಕಾರ್ಪೊರೇಷನ್ ಲಿಮಿಟೆಡ್ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರದ ಆರೋಪದಲ್ಲಿ 2012 ರಲ್ಲಿ ಚೆನ್ನೈ ನ ಸುರಾನ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ನಡೆಸಿದ್ದ ಶೋಧಕಾರ್ಯದಲ್ಲಿ 400 ಕೆ.ಜಿ ಚಿನ್ನ ಪತ್ತೆಯಾಗಿತ್ತು. ಎಂಎಂಟಿಸಿ ಸುರಾನ ಸಂಸ್ಥೆಗೆ ಚಿನ್ನ-ಬೆಳ್ಳಿಯನ್ನು ಆಮದು ಮಾಡಿಕೊಳ್ಳುವುದಕ್ಕೆ ಅಕ್ರಮವಾಗಿ ಬೆಂಬಲ ನೀಡಿತ್ತು ಎಂಬ ಆರೋಪವೂ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕುರ್ಚಿ ಕಾಳಗ: ಸಿದ್ದರಾಮಯ್ಯ, ಡಿಕೆಸಿ ಜತೆ ರಾಹಲ್ ಗಾಂಧಿ ಪ್ರತ್ಯೇಕ ಚರ್ಚೆ; ಕುತೂಹಲ ಮೂಡಿಸಿದೆ ಚುಟುಕು ಮಾತುಕತೆ! Video

ಇರಾನ್ ಪ್ರತಿಭಟನೆಯಲ್ಲಿ 2000 ಜನ ಸಾವು; ಇದಕ್ಕೆ ಉಗ್ರರು ಕಾರಣ ಎಂದ ಅಧಿಕಾರಿಗಳು

Toxic Teaserನಲ್ಲಿ 'ಟೂ ಮಚ್ ಸೆಕ್ಸ್' ಇದೆಯೇ? CBFCಗೆ ಮತ್ತೊಂದು ದೂರು!

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

IPL 2026: RCB ತವರು ಮೈದಾನ ಕೊನೆಗೂ ಬಹುತೇಕ ಫಿಕ್ಸ್, ಈ ಎರಡು ಮೈದಾನಗಳಲ್ಲೇ ಪಂದ್ಯ!

SCROLL FOR NEXT