ವಿದೇಶಾಂಗ ಸಚಿವ ಎಸ್. ಜೈಶಂಕರ್ 
ದೇಶ

ಪಾಕಿಸ್ತಾನ ನಾಗರೀಕರನ್ನು ಸ್ಥಳಾಂತರಿಸಲು ಭಾರತ ಸಿದ್ದ.!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಕೇಂದ್ರ  ಸರ್ಕಾರ  ಮಹತ್ವದ  ನಿರ್ಧಾರ ಕೈಗೊಂಡಿದೆ.ಮಾರಣಾಂತಿಕ ಕರೋನಾ  ವೈರಸ್  ಪೀಡಿತ  ಚೈನಾದ  ವುಹಾನ್  ನಗರದಿಂದ   ಪಾಕಿಸ್ತಾನಿ    ನಾಗರೀಕರನ್ನು  ಇಸ್ಲಾಮಾಬಾದ್ ಗೆ     ಸ್ಥಳಾಂತರಿಸಲು   ತಾನು ಸಿದ್ಧ  ಎಂದು ಪ್ರಕಟಿಸಿದೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಕೇಂದ್ರ  ಸರ್ಕಾರ  ಮಹತ್ವದ  ನಿರ್ಧಾರ ಕೈಗೊಂಡಿದೆ.ಮಾರಣಾಂತಿಕ ಕರೋನಾ  ವೈರಸ್  ಪೀಡಿತ  ಚೈನಾದ  ವುಹಾನ್  ನಗರದಿಂದ   ಪಾಕಿಸ್ತಾನಿ    ನಾಗರೀಕರನ್ನು  ಇಸ್ಲಾಮಾಬಾದ್ ಗೆ     ಸ್ಥಳಾಂತರಿಸಲು   ತಾನು ಸಿದ್ಧ  ಎಂದು ಪ್ರಕಟಿಸಿದೆ

ನೆರೆ ಹೊರೆ ಮೊದಲು ಎಂಬ ತನ್ನ ದೇಶದ   ನೀತಿಯಂತೆ  ಪಾಕಿಸ್ತಾನಕ್ಕೆ  ಈ ವಿಷಯದಲ್ಲಿ  ಸಹಕರಿಸಲು ಮುಂದಾಗಿದೆ. ಈ ಸಂಬಂಧ  ವಿದೇಶಾಂಗ ವ್ಯವಹಾರಗಳ ಸಚಿವ  ಎಸ್.  ಜೈಶಂಕರ್  ರಾಜ್ಯಸಭೆಯಲ್ಲಿ  ಹೇಳಿಕೆ ನೀಡಿದ್ದಾರೆ. ವುಹಾನ್‌ನಲ್ಲಿರುವ ಭಾರತೀಯರೊಂದಿಗೆ ಎಲ್ಲಾ ನೆರೆಹೊರೆ ದೇಶದ ನಾಗರೀಕರನ್ನು  ಸ್ಥಳಾಂತರಿಸಲಾಗುವುದು  ಎಂದು ಹೇಳಿದ್ದಾರೆ.
 
ವಾಸ್ತವವಾಗಿ ಚೈನಾದಿಂದ  ಭಾರತ  ಇತ್ತೀಚೆಗೆ ತನ್ನ ನಾಗರಿಕರನ್ನು ವಿಶೇಷ  ವಿಮಾನದ  ಮೂಲಕ  ವಾಪಸ್ಸು ಕರೆಸಿಕೊಂಡಿದೆ.   ಇಂಡೋನೇಷ್ಯಾ ಮತ್ತು ಸುಡಾನ್ ಕೂಡ ತಮ್ಮ  ನಾಗರೀಕರನ್ನು   ಹಿಂದೆಕರೆಸಿಕೊಂಡಿದೆ.  ಆದರೆ,  ಪಾಕಿಸ್ತಾನ  ಮಾತ್ರ  ಈ ವಿಷಯದಲ್ಲಿ  ತನ್ನ  ಅಸಹಾಯಕತೆ ವ್ಯಕ್ತಪಡಿಸಿದ್ದು,  ಕರೋನಾ ವೈರಸ್ ವಿರುದ್ಧ ಹೋರಾಡುವ ಶಕ್ತಿ ಇಲ್ಲದ ಕಾರಣ ಪಾಕಿಸ್ತಾನದ  ವಿದ್ಯಾರ್ಥಿಗಳು  ವುಹಾನ್‌ನಲ್ಲಿ ಉಳಿಯುವಂತೆ ಸೂಚಿಸಿದೆ

 ಇಮ್ರಾನ್ ಸರ್ಕಾರದ ನಿರ್ಧಾರದಿಂದ  ವುಹಾನ್ ನಲ್ಲಿರುವ  ಪಾಕ್ ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದಾರೆ. ಈ ನಿರ್ಧಾರದಿಂದ  ಪಾಕಿಸ್ತಾನ  ವಿಶ್ವದಾದ್ಯಂತ  ತೀವ್ರ ಟೀಕೆಗೊಳಗಾಗಿದೆ. ಆದರೆ, ಸಂಕಷ್ಟದಲ್ಲಿರುವ ಪಾಕಿಸ್ತಾನಿ ವಿದ್ಯಾರ್ಥಿಗಳನ್ನು ರಕ್ಷಿಸುವ  ಭಾರತದ ಪ್ರಸ್ತಾಪಕ್ಕೆ  ಮೆಚ್ಚುಗೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

SCROLL FOR NEXT