ಸಂಗ್ರಹ ಚಿತ್ರ 
ದೇಶ

ಗಂಗಾನದಿಯನ್ನು ಸ್ವಚ್ಛಗೊಳಿಸದೇ ಹೋದರೆ ಗುಂಡು ಹಾರಿಸಿಕೊಳ್ಳುತ್ತೇನೆ: ಸರ್ಕಾರಕ್ಕೆ ಬೆದರಿಕೆ ಹಾಕಿದ ಸ್ವಾಮೀಜಿ

ಮುಂದಿನ 10 ದಿನಗಳೊಳಗಾಗಿ ಗಂಗಾ ನದಿಯನ್ನು ಸ್ವಚ್ಛತೆಗೊಳಿಸದೇ ಹೋದಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪುವುದಾಗಿ ಗುರು ಗೋಪಾಲ್ ದಾಸ್ ಎಂಬ ಸ್ವಾಮೀಜಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ. 

ಡೆಹ್ರಾಡೂನ್: ಮುಂದಿನ 10 ದಿನಗಳೊಳಗಾಗಿ ಗಂಗಾ ನದಿಯನ್ನು ಸ್ವಚ್ಛತೆಗೊಳಿಸದೇ ಹೋದಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪುವುದಾಗಿ ಗುರು ಗೋಪಾಲ್ ದಾಸ್ ಎಂಬ ಸ್ವಾಮೀಜಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ. 

ಕೇಂದ್ರ ಸರ್ಕಾರ ಹಾಗೂ ಉತ್ತರಾಖಂಡ ಸರ್ಕಾರಗಳು ನದಿ ಸ್ವಚ್ಛತೆಗೊಳಿಸುವುದನ್ನು ಮರೆತು ಹೋದಂತಿದೆ. ಕೇವಲ ಅಧಿಕಾರದ ಸಂತೋಷವನ್ನು ಅನುಭವಿಸುತ್ತಿದೆ. ಮುಂದಿನ 10 ದಿನಗಳಲ್ಲಿ ಸರ್ಕಾರ ಗಂಗಾ ನದಿಯನ್ನು ಸ್ವಚ್ಛಗೊಳಿಸುವಲ್ಲಿ ಯಾವುದೇ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ, ಪರಿಸರ ರಕ್ಷಣೆ ಮಾಡದೇ ಹೋದಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪುವುದಾಗಿ ಸ್ವಾಮೀಜಿ ಹೇಳಿದ್ದಾರೆ. 

ನದಿ ಸ್ವಚ್ಛಗೊಳಿಸುವುದರಲ್ಲಿ ಸರ್ಕಾರ ಗಂಭೀರವಾಗಿರದೇ ಹೋದಲ್ಲಿ ಪರಿಸರ ರಕ್ಷಣೆ ಕುರಿತ ಸಂಸ್ಥೆಗಳನ್ನು ಬಂದ್ ಮಾಡಲಿ. ಐಐಟಿ, ಅರಣ್ಯ ಸಂಶೋಧನಾ ಸಂಸ್ಥೆಗಳ ಅಗತ್ಯಗಳಿಲ್ಲ. ಜಿಡಿ ಅಗರ್ವಾಲ್ ಇಟ್ಟ ಹೆಜ್ಜೆಯಂತೆಯೇ ನಾನು ಹೆಜ್ಜೆ ಇಡುತ್ತೇನೆ. ಈ ಹಿಂದೆ ಅಗರ್ವಾಲ್ ಅವರು ಗಂಗಾ ನದಿ ಸ್ವಚ್ಛತೆಗೆ ಆಗ್ರಹಿಸಿ ಉಪವಾಸ ಮಾಡಿ ಅಸುನೀಗಿದ್ದರು. ಇದೀಗ ಅವರ ಹಾದಿಯನ್ನೇ ನಾನು ತುಳಿಯುತ್ತೇನೆ. ಈಗಾಗಲೇ ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ತೆರಳಿದ್ದೆ. ಆದರೆ, ನನಗೆ ಅವಕಾಶ ನೀಡಲಿಲ್ಲ. ನನ್ನ ವಿರುದ್ಧ ಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT