ದೇಶ

ದೆಹಲಿಯಲ್ಲಿ ಬೆಳ್ಳಂಬೆಳಗ್ಗೆಯೇ ಎನ್ ಕೌಂಟರ್: ಪೊಲೀಸರಿಂದ ಇಬ್ಬರು ಕ್ರಿಮಿನಲ್ ಗಳ ಹತ್ಯೆ 

Sumana Upadhyaya

ನವದೆಹಲಿ: ಸೋಮವಾರ ಬೆಳ್ಳಂಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ದೆಹಲಿ ಪೊಲೀಸರು ಇಬ್ಬರು ಕ್ರಿಮಿನಲ್ ಗಳಾದ ರಾಜಾ ಖುರೇಷಿ ಮತ್ತು ರಮೇಶ್ ಬಹದ್ದೂರ್ ಎಂಬುವವರನ್ನು ಕೊಂದು ಹಾಕಿದ್ದಾರೆ.


ಹಲವು ಕೇಸುಗಳಲ್ಲಿ ಪೊಲೀಸರ ಸೆರೆಗೆ ಸಿಗಬೇಕಾಗಿದ್ದ ಈ ಇಬ್ಬರು ಕ್ರಿಮಿನಲ್ ಗಳು ಇತ್ತೀಚೆಗಷ್ಟೇ ಕರವಾಲ್ ನಗರ್ ಕೊಲೆ ಕೇಸಿನಲ್ಲಿ ಪೊಲೀಸರಿಗೆ ಬೇಕಾದವರಾಗಿದ್ದರು. 


ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ದೆಹಲಿಯ ಪುಲ್ ಪ್ರಹ್ಲಾದ್ ಪುರ್ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕದ ಪೊಲೀಸರು ಆರೋಪಿಗಳನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದಾರೆ. 

SCROLL FOR NEXT