ಸಂಗ್ರಹ ಚಿತ್ರ 
ದೇಶ

ಮುಸ್ಲಿಮರ ಸಮಾಧಿಗಳ ಮೇಲೆ ರಾಮ ಮಂದಿರವೇ..? ಟ್ರಸ್ಟ್‌ಗೆ ಮುಸ್ಲಿಮರ ಪತ್ರ!

ರಾಮಮಂದಿರ ನಿರ್ಮಿಸಲು ಹಂಚಿಕೆ ಮಾಡಿರುವ ಭೂಮಿಯಲ್ಲಿ ಗೋರಿಗಳಿವೆ ಎಂದು ಕೆಲ ಅಯೋಧ್ಯ ಮುಸ್ಲಿಮರು ದೇಗುಲ ನಿರ್ಮಾಣ ಸಂಬಂಧ ರಚಿಸಲಾಗಿರುವ ಟ್ರಸ್ಟ್‌ಗೆ ಪತ್ರ ಬರೆದಿದ್ದಾರೆ.

ಅಯೋಧ್ಯ: ರಾಮಮಂದಿರ ನಿರ್ಮಿಸಲು ಹಂಚಿಕೆ ಮಾಡಿರುವ ಭೂಮಿಯಲ್ಲಿ ಗೋರಿಗಳಿವೆ ಎಂದು ಕೆಲ ಅಯೋಧ್ಯ ಮುಸ್ಲಿಮರು ದೇಗುಲ ನಿರ್ಮಾಣ ಸಂಬಂಧ ರಚಿಸಲಾಗಿರುವ ಟ್ರಸ್ಟ್‌ಗೆ ಪತ್ರ ಬರೆದಿದ್ದಾರೆ.

ಗೋರಿಗಳ ಮೇಲೆ ದೇವಾಲಯ ನಿರ್ಮಿಸಿದರೆ “ಸನಾತನ ಧರ್ಮ” ಉಲ್ಲಂಘನೆಯಾಗುವುದಿಲ್ಲವೇ..? ಮುಸ್ಲಿಮರ ಸಮಾಧಿಗಳ ಮೇಲೆ ಹೇಗೆ ರಾಮಮಂದಿರ ನಿರ್ಮಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಅಯೋಧ್ಯೆ ವಿವಾದ ಪ್ರಕರಣದಲ್ಲಿ ಮುಸ್ಲಿಮರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಂ ಆರ್ ಶಂಷದ್ ದೇವಾಲಯ ಟ್ರಸ್ಟ್ ನಾಯಕತ್ವ ವಹಿಸಿರುವ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕೆ.ಕೆ. ಪರಾಶರನ್ ಅವರಿಗೆ ಈ ಪತ್ರ ರವಾನಿಸಿದ್ದಾರೆ.

ಬಾಬ್ರಿ ಮಸೀದಿ ನೆಲಸಮವಾದ ಸ್ಥಳದ ಸುತ್ತ ಸ್ಮಶಾನವಿದೆ ... 1885ರ ಗಲಭೆಯಲ್ಲಿ ಮೃತಪಟ್ಟ 75 ಮುಸ್ಲಿಮರನ್ನು ಅಲ್ಲಿಯೇ ಸಮಾಧಿ ಮಾಡಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ದಾಖಲೆಗಳ ಪ್ರಕಾರ, ಮೃತ ಮುಸ್ಲಿಮರ ಎಲ್ಲಾ ಗೋರಿಗಳು ಈಗಿನ ಮಸೀದಿಯ ಸುತ್ತಮುತ್ತಲ ಪ್ರದೇಶಗಳಲ್ಲಿವೆ. ಈ ಸ್ಥಳವನ್ನು ಸಮಾಧಿಗಾಗಿ ಬಳಸಲಾಗುತ್ತಿತ್ತು ಎಂದು ಸ್ಥಳೀಯ ಮುಸ್ಲಿಮರು ಹೇಳುತ್ತಿದ್ದಾರೆ. ಮುಸ್ಲಿಮರ ಸಮಾಧಿಯ ಮೇಲೆ ರಾಮ ಮಂದಿರ ನಿರ್ಮಿಸುವುದು ಸ್ವೀಕಾರಾರ್ಹವೇ ಎಂದು ಪರಿಗಣಿಸುವಂತೆ ಪತ್ರದಲ್ಲಿ ಕೋರಲಾಗಿದೆ. 67 ಎಕರೆಗಳ ಭೂಮಿ ವಿಷಯದಲ್ಲಿ ಸರ್ಕಾರ ಮುಸ್ಲಿಮರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ವಕೀಲ ಶಂಷದ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

SCROLL FOR NEXT