ದೇಶ

ಔತಣಕೂಟಕ್ಕೆ ಮನ್ ಮೋಹನ್ ಸಿಂಗ್ ಗೈರು

Srinivas Rao BV

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗೌರವಾರ್ಥ ರಾಷ್ಟ್ರಪತಿ  ರಾಮ್ ನಾಥ್ ಕೋವಿಂದ್ ಅವರು ಮಂಗಳವಾರ ಆಯೋಜಿಸಿರುವ ಔತಣಕೂಟದಿಂದ  ದೂರವಿರಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. 

ಔತಣ ಕೂಟದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾಗವಹಿಸುವುದಿಲ್ಲ ಎಂದು ಪಕ್ಷದ ಉನ್ನತ  ಮೂಲಗಳು ತಿಳಿಸಿವೆ. ಸಿಂಗ್ ಈ ಮೊದಲು ಆಹ್ವಾನವನ್ನು ಸ್ವೀಕರಿಸಿದ್ದರು ಆದರೆ ಸೋಮವಾರ ಅದಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಔತಣಕೂಟಕ್ಕೆ ಆಗಮಿಸಲು ತಮ್ಮ ಅನನುಕೂಲತೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಮಾಜಿ ಪ್ರಧಾನಿ ಸಿಂಗ್ ರಾಷ್ಟ್ರಪತಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಇದೇ ವೇಳೆ ರಾಜ್ಯಸಭೆ ಸದಸ್ಯ ಗುಲಾಮ್ ನಬಿ ಆಜಾದ್ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ನೀಡದೇ ಇರುವ ಕಾರಣದಿಂದ ತಾವೂ ಸಹ ಔತಣಕೂಟದಿಂದ ದೂರವಿರುವುದಾಗಿ ತಿಳಿಸಿದ್ದಾರೆ. 

ವಿದೇಶಿ ನಾಯಕನಿಗೆ ಏರ್ಪಡಿಸಿರುವ ಅಧಿಕೃತ ಔತಣ ಕೂಟದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಪ್ರತಿಪಕ್ಷಗಳ ನಾಯಕರು ಗೈರಾಗಲಿದ್ದಾರೆ. 

SCROLL FOR NEXT