ಮುಸ್ಲಿಂ ಮಹಿಳೆಯೊಬ್ಬರು ದೇವಾಲಯವನ್ನು ಸ್ವಚ್ಛಗೊಳಿಸುತ್ತಿರುವುದು 
ದೇಶ

ಸಹಜ ಸ್ಥಿತಿಯತ್ತ ಮರಳುತ್ತಿರುವ ಈಶಾನ್ಯ ದೆಹಲಿ: ಶಾಂತಿ,ಸೌಹಾರ್ದಯುತ ಬದುಕಿನತ್ತ ಜನರ ಚಿತ್ತ!

ಕಳೆದ ಮೂರು ದಿನಗಳಿಂದ ಹಿಂಸಾಚಾರದಿಂದ ನಲುಗಿದ್ದ ರಾಷ್ಟ್ ರಾಜಧಾನಿ ನವದೆಹಲಿ ಸಹಜ ಸ್ಥಿತಿಯತ್ತ ಮರಳಿದೆ. ಈಶಾನ್ಯ ದೆಹಲಿಯ ವಿವಿಧ ಕಡೆಗಳಲ್ಲಿ ನಡೆದ ಹಿಂಸಾಚಾರದಲ್ಲಿ 38 ಜನರು ಸಾವನ್ನಪ್ಪಿದ್ದು,  ಪೊಲೀಸರು ಸೇರಿದಂತೆ ಸುಮಾರು 200 ಮಂದಿ ಗಾಯಗೊಂಡಿದ್ದಾರೆ.

ನವದೆಹಲಿ: ಕಳೆದ ಮೂರು ದಿನಗಳಿಂದ ಹಿಂಸಾಚಾರದಿಂದ ನಲುಗಿದ್ದ ರಾಷ್ಟ್ ರಾಜಧಾನಿ ನವದೆಹಲಿ ಸಹಜ ಸ್ಥಿತಿಯತ್ತ ಮರಳಿದೆ. ಈಶಾನ್ಯ ದೆಹಲಿಯ ವಿವಿಧ ಕಡೆಗಳಲ್ಲಿ ನಡೆದ ಹಿಂಸಾಚಾರದಲ್ಲಿ 38 ಜನರು ಸಾವನ್ನಪ್ಪಿದ್ದು,  ಪೊಲೀಸರು ಸೇರಿದಂತೆ ಸುಮಾರು 200 ಮಂದಿ ಗಾಯಗೊಂಡಿದ್ದಾರೆ.

ಶಾಂತಿ ಹಾಗೂ ಸೌಹಾರ್ದತೆ ಮೂಡಬೇಕಿದೆ  ಆದರೆ, ಘರ್ಷಣೆ ವೇಳೆಯಲ್ಲಿ ಪೊಲೀಸರು ನಿಷ್ಕ್ರೀಯತೆ ಬಗ್ಗೆ ಹಿಂಸಾಚಾರ ಪೀಡಿತ ಪ್ರದೇಶದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಶಾನ್ಯ ದೆಹಲಿಯ ಭಾಜನ್ ಪುರ, ಕುರೆಜಿ ಖಾಸ್, ಚಾಂದ್ ಬಾಗ್, ಮೊಂಗಾ ನಗರ್ ಮತ್ತು ಕಾರವಾಲ್ ನಗರಗಳಲ್ಲಿ ವಾಹನಗಳು ಸಂಚರಿಸುತ್ತಿದ್ದು, ಅಂಗಡಿ ಮುಂಗಟ್ಟುಗಳು ತೆರಿದಿವೆ. ಅನೇಕ ಅಂಗಡಿಗಳು ಕಳೆದ ರಾತ್ರಿಯವರೆಗೂ ತೆರೆದಿದ್ದವು. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಶಾಂತಿ ಮತ್ತು ಸೌಹಾರ್ದತೆ ಬಗ್ಗೆ ಹಲವು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವಿಶೇಷ ಪೊಲೀಸ್ ಆಯುಕ್ತ ಎಸ್. ಎನ್. ಶ್ರೀವಾಸ್ತವ ಹೇಳಿದ್ದಾರೆ. 

ಹಿಂಸಾಚಾರದಿಂದ ನಮ್ಮ ಬಟ್ಟೆ ಅಂಗಡಿಗೆ ಬೆಂಕಿ ಹಚ್ಚಿ ಸುಡಲಾಗಿತ್ತು. ಅಂತಹ ಸಂದರ್ಭದಲ್ಲಿ ನೆರವು ನೀಡಿದ ನೆರೆಹೊರೆಯವರಿಗೆ ಧನ್ಯವಾದ ಹೇಳುವುದಾಗಿ ಭಾಜನಪುರದ ಸಹನಾ ಹೇಳುತ್ತಾರೆ. ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಈವರೆಗೂ ಸುರಕ್ಷಿತವಾಗಿರುವುದಾಗಿ ಸಬಾನಾ ಹೇಳುತ್ತಾರೆ. 

ಎಲ್ಲರೂ ಜೊತೆಯಾಗಿ ಸೌಹಾರ್ದತೆಯಿಂದ ಬದುಕು ಸಾಗಿಸಬೇಕಾಗಿದೆ. ನೆರೆಹೊರೆಯವೊಂದಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಹಿಂಸಾಚಾರಕ್ಕೆ ಕಾರಣರಾದವರನ್ನು ಪೊಲೀಸರು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜೈನಾಬ್ ಹೇಳಿದರು. 

ಚಾಂದ್ ಬಾಗ್ ಪ್ರದೇಶದ ಕೌನ್ಸಿಲರ್ ತಹೀರ್ ಹುಸೇನ್ ಮನೆ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಡಜನ್ ವಾಹನಗಳಿಗೆ ಬೆಂಕಿ ಹಚ್ಚಿರುವ ದೃಶ್ಯ ಕಂಡುಬಂದಿತ್ತು. ಬಾಜನ್ ಪುರ ದಿಂದ ಕಾರವಾಲ್ ನಗರದವರೆಗೂ  ಕಲ್ಲು, ಗಾಜುಗಳು, ಇಟ್ಟಿಗೆಗಳು, ಬೆಂಕಿ ಹಚ್ಚಿದ ವಾಹನಗಳು ಕಂಡುಬಂದವು. 

ಪೌರತ್ವ ತಿದ್ದುಪಡಿ ಕಾಯ್ದೆ ಪರವಾದ ಹಾಗೂ ವಿರೋಧವಾದ ಪ್ರತಿಭಟನಾಕಾರರ ಘರ್ಷಣೆಯಿಂದಾಗಿ ಭಾನುವಾರ ಹಿಂಸಾಚಾರ ಉಂಟಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT