ದೇಶ

ಸರ್ಕಾರದ್ದು ಅಪವಿತ್ರ ಹಣ, ರಾಮ ಮಂದಿರ ನಿರ್ಮಿಸಲು ಯೋಗ್ಯವಲ್ಲ; ಪುರಿ ಶಂಕರಾಚಾರ್ಯ

Nagaraja AB

ಭೋಪಾಲ್ : ಕೇಂದ್ರ ಸರ್ಕಾರದ ವಿರುದ್ದ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸ್ವಾಮೀಜಿ ಸಂವೇದನಾಶೀಲ ಪ್ರತಿಕ್ರಿಯೆ ನೀಡಿದ್ದಾರೆ. 
  
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರದ ಹಣ  ಯೋಗ್ಯವಾಗಿಲ್ಲ ಮತ್ತು ಅದು ಅಪವಿತ್ರ ಹಣ ಎಂದು ಅವರು ಹೇಳಿದ್ದಾರೆ. ಭವ್ಯ ರಾಮಮಂದಿರ ಕೇವಲ ಜನರ ಹಣ ಹಾಗೂ ಅವರ  ಬೆಂಬಲದಿಂದ  ಮಾತ್ರ ನಿರ್ಮಾಣ ವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
  
ರಾಮ ಮಂದಿರ ನಿರ್ಮಾಣ  ಕಾರ್ಯವನ್ನು ಕೇಂದ್ರ ಸರ್ಕಾರ ಕೂಡಲೇ ರಾಮ ಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಬೇಕು ಎಂದು ಅವರು ಒತ್ತಾಯಿಸಿದರು.  
  
ದೇಗುಲ ನಿರ್ಮಾಣದ ಭೂಮಿಯನ್ನು ಕೂಡಲೇ ಜನರಿಗೆ ಹಸ್ತಾಂತರಿಸುವಂತೆ  ಆಗ್ರಹಿಸಿ ತಾವು ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು ಬರೆದಿರುವುದಾಗಿ ಶ್ರೀಗಳು ತಿಳಿಸಿದ್ದಾರೆ.

SCROLL FOR NEXT