ದೇಶ

ನಾನು ನಿಮ್ಮ'ರಕ್ಷಕಿ' ಜನರ ಹಕ್ಕುಗಳನ್ನು ಯೊರೊಬ್ಬರು ಕಸಿದುಕೊಳ್ಳಲು ಬಿಡಲ್ಲ- ಮಮತಾ

Nagaraja AB

ಕೊಲ್ಕತ್ತಾ: ತಾನು ಜನರ ಹಕ್ಕುಗಳ ರಕ್ಷಕಿ ಎಂದು ಹೇಳಿಕೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅವರ ಹಿತಾಸಕ್ತಿಯನ್ನು ಹಾಳು ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ಪ್ರತಿಭಟನೆಯನ್ನು ಮುಂದುವರೆಸಬೇಕಾದ ಅಗತ್ಯವಿದೆ. ರಾಜ್ಯದ ಜನರನ್ನು ರಕ್ಷಿಸಲು ಏನು ಬೇಕಾದರೂ ಮಾಡುವುದಾಗಿ ಹೇಳಿದ್ದಾರೆ.

ಯಾರೊಬ್ಬರ ದಯೆಯಿಂದ ನಾವು ಬದುಕುತ್ತಿಲ್ಲ. ಯಾರಿಂದಲೂ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಬಿಡಲ್ಲ, ನಾನು ನಿಮ್ಮ ರಕ್ಷಕಿ ಎಂದರು.

ಒಂದು ವೇಳೆ ಯಾರಾದರೂ ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಬಂದರೆ ಅದು ನಾನು ಸತ್ತ ಮೇಲೆ.ಅಲ್ಲಿಯವರೆಗೂ ಯಾರೊಬ್ಬರಿಗೂ ಹಕ್ಕುಗಳನ್ನು ಕಿತ್ತುಕೊಳ್ಳಲು ಬಿಡಲ್ಲ ಎಂದು ಹೇಳಿದರು.

SCROLL FOR NEXT