ದೇಶ

ನಿರ್ಭಯಾ ಅಪರಾಧಿಗಳ ಗಲ್ಲು ವಿಳಂಬಕ್ಕೆ ಅರವಿಂದ್ ಕೇಜ್ರಿವಾಲ್ ಸರ್ಕಾರದ ನಿರ್ಲಕ್ಷ್ಯ ಕಾರಣ: ಪ್ರಕಾಶ್ ಜಾವಡೇಕರ್

Vishwanath S

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆ  ವಿಳಂಬಕ್ಕೆ  ದೆಹಲಿಯ ಆಮ್ ಆದ್ಮಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ  ಪ್ರಕಾಶ್ ಜಾವ್ಡೇಕರ್ ಆರೋಪಿಸಿದ್ದಾರೆ. 

2017ರಲ್ಲಿ ಗಲ್ಲುಶಿಕ್ಷೆ ವಿರುದ್ಧದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬಳಿಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಪರಾಧಿಗಳಿಗೆ ನೋಟಿಸ್ ನೀಡಲು ಎರಡೂವರೆ ವರ್ಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ ಎಂದು ದೂರಿದರು.

ಸುಪ್ರೀಂ ಕೋರ್ಟ್ ಆದೇಶ ಬಂದ ಒಂದು ವಾರದಲ್ಲಿ ಅತ್ಯಾಚಾರಿಗಳಿಗೆ ಎಎಪಿ ಸರ್ಕಾರ ನೋಟಿಸ್ ನೀಡಿದ್ದರೆ, ದೋಷಿಗಳನ್ನು ಈಗ ಗಲ್ಲಿಗೇರಿಸಬಹುದಿತ್ತು ಮತ್ತು ದೇಶಕ್ಕೆ, ಮಹಿಳಾ ಸಮುದಾಯಕ್ಕೆ  ನ್ಯಾಯ ಸಿಗುತ್ತಿತ್ತು ಎಂದರು.

SCROLL FOR NEXT