ನವದೆಹಲಿ: ಪ್ರಸ್ತುತ ನಡೆಯುತ್ತಿರುವ “ಚಾಧರ್ ಟ್ರೆಕ್” ನ ಭಾಗವಾಗಿದ್ದ ಲಡಾಖ್ನಲ್ಲಿ ಹೆಪ್ಪುಗಟ್ಟಿದ ಜನ್ಸ್ಕರ್ ನದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ 9 ವಿದೇಶಿ ಪ್ರಜೆಗಳು ಸೇರಿದಂತೆ 107 ಚಾರಣಿಗರನ್ನು ಭಾರತೀಯ ವಾಯುಪಡೆ (ಐಎಎಫ್) ಗುರುವಾರ ರಕ್ಷಿಸಿದೆ.
ಹಿಮ ಕರಗುವಿಕೆಯಿಂದಾಗಿ ನೀರಿನ ಹರಿವು ಹೆಚ್ಚಾದ ಕಾರಣ, ಚಾರಣಿಗರು ಕಾಲ್ನಡಿಗೆಯಲ್ಲಿ ನದಿಗೆ ಅಡ್ಡಲಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ ಎಂದು ಐಎಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಳು ಚೀನಿಯರು ಮತ್ತು 2 ಫ್ರೆಂಚ್ ಪ್ರಜೆಗಳು ಸೇರಿದಂತೆ 107 ಚಾರಣಿಗರನ್ನು ಭಾರತೀಯ ವಾಯುಪಡೆ ಯಶಸ್ವಿಯಾಗಿ ರಕ್ಷಿಸಿದೆ.