ದೇಶ

ಫೆ.8ರಂದು ದೆಹಲಿ ಜನ ಪ್ರೀತಿಯಿಂದ ಮತಯಂತ್ರದ ಬಟನ್ ಒತ್ತಲಿದ್ದಾರೆ: ಅಮಿತ್ ಶಾಗೆ ಪ್ರಶಾಂತ್ ಕಿಶೋರ್ ಟಾಂಗ್

Srinivasamurthy VN

ನವದೆಹಲಿ: ಫೆಬ್ರವರಿ 8ರಂದು ದೆಹಲಿ ಜನತೆ ಪ್ರೀತಿಯಿಂದ ಮತಯಂತ್ರದ ಬಟನ್ ಒತ್ತಲ್ಲಿದ್ದಾರೆ ಎಂದು ಜೆಡಿಯು ನಾಯಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರ ಮುಂದುವರೆದಿದೆ. ಈ ಹಿಂದೆ ಸಿಎಎ ವಿಚಾರವಾಗಿ ಬಿಜೆಪಿ, ಕೇಂದ್ರ ಸರ್ಕಾರ ಮತ್ತು ಅಮಿತ್ ಶಾ ವಿರುದ್ಧ ಕಿಡಿಕಾರಿದ್ದ ಪ್ರಶಾಂತ್ ಕಿಶೋರ್ ಅವರು ಇದೀಗ ದೆಹಲಿ ಚುನಾವಣೆ ಕುರಿತಂತೆ ಅಮಿತ್ ಶಾ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

'ಫೆಬ್ರವರಿ 8ರಂದು ದೆಹಲಿ ಜನತೆ ಪ್ರೀತಿಯಿಂದ ಮತಯಂತ್ರದ ಬಟನ್ ಒತ್ತಲ್ಲಿದ್ದಾರೆ. ಸಣ್ಣ ಪ್ರಮಾಣದಲ್ಲಿ ದೊಡ್ಡ ಆಘಾತಕ್ಕೆ ಸಿದ್ಧರಾಗಿ. ಸಹೋದರತ್ವ ಮತ್ತು ಒಗ್ಗಟ್ಟು ಅಳಿವಿನಂಚಿನಲ್ಲಿಲ್ಲ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಭಾನುವಾರ ದಹೆಲಿಯಲ್ಲಿ ಚುನಾವಣಾ ಭಾಷಣ ಮಾಡಿದ್ದ ಅಮಿತ್ ಶಾ ಅವರು, ಶಾಹೀನ್ ಬಾಗ್ ಪ್ರತಿಭಟನೆ ಹೊರತಾಗಿಯೂ ದೆಹಲಿ ಜನತೆ ಬಿಜೆಪಿ ಪರವಾಗಿ ಮತದಾನ ಮಾಡಲಿದ್ದಾರೆ ಎಂದು ಹೇಳಿದ್ದರು.

ಬಿಜೆಪಿ ಸರ್ಕಾರದ ಸಿಎಎ ಕಾಯ್ದೆಯನ್ನು ವಿರೋಧಿಸಿದ್ದ ಪ್ರಶಾಂತ್ ಕಿಶೋರ್ ಅದನ್ನು ರಾಜ್ಯಸಭೆಯಲ್ಲಿ ಬೆಂಬಲಿಸಿದ್ದ ತಮ್ಮದೇ ಪಕ್ಷದ ಕಾರ್ಯ ವೈಖರಿ ಕುರಿತೂ ಟೀಕೆ ಮಾಡಿ ಸುದ್ದಿಯಾಗಿದ್ದರು.

SCROLL FOR NEXT