ದೇಶ

ಜಮ್ಮು-ಕಾಶ್ಮೀರ: ರಜೌರಿ ಬಳಿ ಗಡಿ ನುಸುಳಲು ಯತ್ನ, ಓರ್ವ ಉಗ್ರನನ್ನು ಸದೆಬಡಿದ ಸೇನೆ

Manjula VN

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯ ಗಡಿ ನಿಯಂತ್ರಣ ರೇಖೆ ಬಳಿ ಗಡಿ ನುಸುಳಲು ಯತ್ನಿಸುತ್ತಿದ್ದ ಓರ್ವ ಉಗ್ರನನ್ನು ಭಾರತೀಯ ಸೇನಾಪಡೆ ಹತ್ಯೆ ಮಾಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ರಜೌರಿಯ ಕರಿ ಎಂಬ ಪ್ರದೇಶದ ಗಡಿನಿಯಂತ್ರ ರೇಖೆ ಬಳಿ ಇಂದು ಬೆಳಗಿನ ಜಾವ 5.55ರ ಸುಮಾರಿಗೆ ಉಗ್ರನೊಬ್ಬ ಗುಂಡಿನ ದಾಳಿ ನಡೆಸಿ, ಗಡಿ ನುಸುಳಿ ಬಂದಿದ್ದಾನೆ.

ಈ ವೇಳೆ ಇದನ್ನು ಗಮನಿಸಿದ ಭದ್ರತಾಪಡೆಗಳು ಉಗ್ರನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಉಗ್ರನ ಸಂಚು ವಿಫಲಗೊಳ್ಳುವಂತೆ ಮಾಡಿದ್ದಾರೆ. ಹತ್ಯೆಯಾದ ಉಗ್ರರನಿಂದ ಸೇನಾಪಡೆಗಳು 1 ಎಕೆ 47 ಮತ್ತು ನಿಯತಕಾಲಿಕೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

SCROLL FOR NEXT