ಚೀನಾ ರಾಯಭಾರಿ 
ದೇಶ

ಗಡಿ ವಿವಾದ ಸೂಕ್ಷ್ಮ, ಸಂಕೀರ್ಣವಾದದ್ದು- ಚೀನಾ ರಾಯಭಾರಿ

ಗಡಿ ವಿವಾದ ಸೂಕ್ಷ್ಮ ಹಾಗೂ ಸಂಕೀರ್ಣವಾಗಿದ್ದು, ಪರಸ್ಪರ ಮಾತುಕತೆ ಹಾಗೂ ಸಮಾಲೋಚನೆ ಮೂಲಕ ನ್ಯಾಯಯುತವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ  ಸನ್ ವೀಡಾಂಗ್ ಹೇಳಿದ್ದಾರೆ.

ನವದೆಹಲಿ:  ಗಡಿ ವಿವಾದ ಸೂಕ್ಷ್ಮ ಹಾಗೂ ಸಂಕೀರ್ಣವಾಗಿದ್ದು, ಪರಸ್ಪರ ಮಾತುಕತೆ ಹಾಗೂ ಸಮಾಲೋಚನೆ ಮೂಲಕ ನ್ಯಾಯಯುತವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರಿ  ಸನ್ ವೀಡಾಂಗ್ ಹೇಳಿದ್ದಾರೆ.

ಭಿನ್ನಾಭಿಪ್ರಾಯಗಳನ್ನು ಸೂಕ್ತವಾಗಿ ಬಗೆಹರಿಸಿಕೊಂಡು  ಭಾರತ ಹಾಗೂ ಚೀನಾ ನಡುವಣ ಸಂಬಂಧಗಳು ಸರಿಯಾದ ಹಾದಿಗೆ ಬರಬೇಕು ಎಂಬ ಶೀರ್ಷಿಕೆಯಲ್ಲಿ ಚೀನಾ ರಾಯಬಾರಿ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿರುವ ಸನ್ ವೀಡಾಂಗ್,  ಉಭಯ ರಾಷ್ಟ್ರಗಳ ನಡುವಣ ಸಂಬಂಧದಲ್ಲಿ ಅಡೆತಡೆ ಬಗ್ಗೆ ಮಾತನಾಡಿದ್ದು,  ಐದು  ಹಂತಗಳಲ್ಲಿ ಕೆಲ ಮೂಲಭೂತ ಅಂಶಗಳನ್ನು ಸ್ಪಷ್ಟೀಕರಿಸಿದ್ದಾರೆ.

ಚೀನಾ ಮತ್ತು ಭಾರತಕ್ಕೆ ಮುಖಾಮುಖಿಯಾಗುವದಕ್ಕಿಂತಲೂ ಶಾಂತಿ ಬೇಕಾಗಿದೆ. ಶೂನ್ಯ ಮೊತ್ತದ ಆಟಕ್ಕಿಂತಲೂ ಗೆಲುವಿನ ಸಹಕಾರ ಬೇಕಾಗಿದೆ.ನಂಬಿಕೆಯನ್ನು ಬೆಳೆಸಬೇಕಾಗಿದೆ. ಸಂಬಂಧಗಳು ಹಿಂದೆ ಆಗುವ ಬದಲು ಮುಂದುವರೆಯಬೇಕು ಎಂದು ಅವರು ಹೇಳಿದ್ದಾರೆ.

ಶಾಂತಿ ಮತ್ತು ಸಂಯಮದಿಂದ ಭಾರತ ಹಾಗೂ ಚೀನಾ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಸನ್ ವೀಡಾಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Namma Metro ಗೆ 'ಬಸವ ಮೆಟ್ರೋ' ಎಂದು ಮರುನಾಮಕರಣ: ಸಿಎಂ ಸಿದ್ದರಾಮಯ್ಯ

'ಮತ್ತೆ ದುಸ್ಸಾಹಸಕ್ಕೆ ಇಳಿದರೆ' India ತನ್ನ ಯುದ್ಧ ವಿಮಾನಗಳ ಅವಶೇಷಗಳ ಅಡಿಯಲ್ಲಿ ಹೂತುಹೋಗುತ್ತದೆ: Pak ರಕ್ಷಣಾ ಸಚಿವ ಧಮ್ಕಿ!

BBK 12: 'ಸಿಂಪಥಿ ಗಿಟ್ಟಿಸಲು ಜಾಹ್ನವಿ ಆರೋಪ, ನನ್ನ ಕೆಲಸ ಹೋದಾಗ ಆಕೆ ವರ್ತನೆ ಬದಲು, ಬೇರೊಬ್ಬ ಗಂಡಸಿನೊಂದಿಗೆ..': ಪತಿ ಕಾರ್ತಿಕ್ ಕೆಂಡಾಮಂಡಲ!

ಚಾಮರಾಜನಗರ: Hindu ಯುವಕನ ಜೊತೆ Muslim ಯುವತಿ ಪರಾರಿ?: ಪೊಲೀಸ್ ಠಾಣೆ ಎದುರೇ ಚೂರಿ ಇರಿತ!

ಎಲ್ಲಾ ಬೋಯಿಂಗ್ 787 ವಿಮಾನಗಳ ವಿದ್ಯುತ್ ವ್ಯವಸ್ಥೆ ಪರಿಶೀಲಿಸಿ: DGCAಗೆ ಪೈಲಟ್‌ಗಳ ಮನವಿ

SCROLL FOR NEXT