ಪ್ರಿಯಾಂಕ ಗಾಂಧಿ ವಾದ್ರಾ 
ದೇಶ

ಸರ್ಕಾರಿ ಬಂಗಲೆ ಖಾಲಿ ಮಾಡುವ ಮುನ್ನ ಹೊಸದಾಗಿ ಬರುವ ಬಿಜೆಪಿ ನಾಯಕನನ್ನು ಚಹಾ ಸೇವನೆಗೆ ಕರೆದ ಪ್ರಿಯಾಂಕ ಗಾಂಧಿ!

ಸರ್ಕಾರಿ ಬಂಗಲೆಯನ್ನು ತ್ಯಜಿಸುವುದಕ್ಕೆ ಮೊದಲು ಆ ಮನೆಗೆ ಪ್ರವೇಶಿಸಿ ವಾಸ್ತವ್ಯ ಹೂಡಲಿರುವ ಬಿಜೆಪಿ ನಾಯಕ ಅನಿಲ್ ಬಲುನಿಯವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಚಹಾ ಸೇವನೆಗೆ ಕರೆದಿದ್ದಾರೆ.

ನವದೆಹಲಿ: ಸರ್ಕಾರಿ ಬಂಗಲೆಯನ್ನು ತ್ಯಜಿಸುವುದಕ್ಕೆ ಮೊದಲು ಆ ಮನೆಗೆ ಪ್ರವೇಶಿಸಿ ವಾಸ್ತವ್ಯ ಹೂಡಲಿರುವ ಬಿಜೆಪಿ ನಾಯಕ ಅನಿಲ್ ಬಲುನಿಯವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಚಹಾ ಸೇವನೆಗೆ ಕರೆದಿದ್ದಾರೆ.

ದೆಹಲಿಯ 35 ಲೋಧಿ ಎಸ್ಟೇಟ್ ಬಂಗಲೆಯಲ್ಲಿ 1997ರಿಂದ ಪ್ರಿಯಾಂಕಾ ಗಾಂಧಿ ವಾಸವಾಗಿದ್ದರು. ಅವರ ವಿಶೇಷ ರಕ್ಷಣಾ ಗುಂಪು(ಎಸ್ ಪಿಜಿ) ಭದ್ರತೆಯನ್ನು ಗೃಹ ಸಚಿವಾಲಯ ವಾಪಸ್ ಪಡೆದ ನಂತರ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೊಟೀಸ್ ಜಾರಿ ಮಾಡಿತ್ತು.

ಜುಲೈ ಒಂದರಿಂದ ಅವರ ಸರ್ಕಾರಿ ನಿವಾಸದ ಸೌಲಭ್ಯ ರದ್ದಾಗಿರುವುದರಿಂದ ಆಗಸ್ಟ್ 1ರೊಳಗೆ ಮನೆ ಖಾಲಿ ಮಾಡಬೇಕೆಂದು ನೊಟೀಸ್ ನಲ್ಲಿ ಸೂಚಿಸಲಾಗಿತ್ತು.

ಬರುವ ಆಗಸ್ಟ್ 1ರೊಳಗೆ ಪ್ರಿಯಾಂಕಾ ಅವರು ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲಿದ್ದು ಬಿಟ್ಟು ಹೋಗುವ ಸಂದರ್ಭದಲ್ಲಿ ಅಲ್ಲಿ ವಾಸಿಸಲು ಬರುತ್ತಿರುವ ಬಿಜೆಪಿ ನಾಯಕ ಅನಿಲ್ ಬಲುನಿ ಮತ್ತು ಅವರ ಪತ್ನಿಗೆ ಚಹಾ ಸೇವನೆಗೆ ಬರುವಂತೆ ಆಹ್ವಾನಿಸಿದ್ದಾರೆ. ಇದಕ್ಕೆ ಅನಿಲ್ ಬಲುನಿ ಅವರ ಕಡೆಯಿಂದ ಪ್ರತಿಕ್ರಿಯೆ ಬರಬೇಕಷ್ಟೆ.

ಸದ್ಯ ಪ್ರಿಯಾಂಕಾ ಅವರು ಗುರುಗ್ರಾಮ್ ನ ತಮ್ಮ ನಿವಾಸದಲ್ಲಿ ವಾಸಿಸುತ್ತಿದ್ದು ನಂತರದ ದಿನಗಳಲ್ಲಿ ದೆಹಲಿಯಲ್ಲಿ ಮನೆ ಮಾಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT