ಹಾವು 
ದೇಶ

ಯುವಕನ ಪ್ಯಾಂಟಿನೊಳಗೆ ಹಾವು ತೂರಿ ಇಡೀ ರಾತ್ರಿ ಜಾಗರಣೆ!

ಗಾಢ ನಿದ್ರೆಯಲ್ಲಿದ್ದ ಯುವಕನ ಪ್ಯಾಂಟಿನೊಳಗೆ ತೂರಿದ ಹಾವು ಆತನಿಗೆ ನರಕ ದರ್ಶನ ಮಾಡಿಸಿದ್ದು, ಏಳು ಗಂಟೆಗಳ ಕಾಲ ಹಾವು ಪ್ಯಾಂಟಿನೊಳಗಿದ್ದ ಕಾರಣ ರಾತ್ರಿ ಪೂರ್ತಿ ಸ್ವಲ್ಪವೂ ಕದಲದೆ ನಿಲ್ಲುವಂತಾಗಿದ್ದು, ಕೊನೆಗೆ ಬೆಳಕರಿದ ನಂತರ ಹಾವು ಹಿಡಿಯುವ ವ್ಯಕ್ತಿ ಬಂದು ಚಾಕಚಕ್ಯತೆಯಿಂದ ಅದನ್ನು ಹೊರಗೆಳೆದ ನಂತರ ಪ್ರಮಾದ ತಪ್ಪಿದೆ.

ಲಖನೌ: ಗಾಢ ನಿದ್ರೆಯಲ್ಲಿದ್ದ ಯುವಕನ ಪ್ಯಾಂಟಿನೊಳಗೆ ತೂರಿದ ಹಾವು ಆತನಿಗೆ ನರಕ ದರ್ಶನ ಮಾಡಿಸಿದ್ದು, ಏಳು ಗಂಟೆಗಳ ಕಾಲ ಹಾವು ಪ್ಯಾಂಟಿನೊಳಗಿದ್ದ ಕಾರಣ ರಾತ್ರಿ ಪೂರ್ತಿ ಸ್ವಲ್ಪವೂ ಕದಲದೆ ನಿಲ್ಲುವಂತಾಗಿದ್ದು, ಕೊನೆಗೆ ಬೆಳಕರಿದ ನಂತರ ಹಾವು ಹಿಡಿಯುವ ವ್ಯಕ್ತಿ ಬಂದು ಚಾಕಚಕ್ಯತೆಯಿಂದ ಅದನ್ನು ಹೊರಗೆಳೆದ ನಂತರ ಪ್ರಮಾದ ತಪ್ಪಿದೆ.

ಉತ್ತರ ಪ್ರದೇಶ ಮಿರ್ಜಾಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆ ರಾ ತ್ರಿ ತಾನು ಅನುಭವಿಸಿದ ನರಕ ಯಾತನೆ ನೆನೆಸಿಕೊಂಡು ಯುವಕ ಕಣ್ಣೀರು ಹಾಕಿದ್ದಾನೆ.

ಸಿಕಂದರ್ ಪುರ್ ಗ್ರಾಮದಲ್ಲಿ ವಿದ್ಯುತ್ ಕಂಬ, ವೈರ್ ಅಳವಡಿಸುವ ಕಾಮಗಾರಿ ನಡೆಯುತ್ತಿತ್ತು. ಲವ್ಲೇಶ್ ಎಂಬ ವ್ಯಕ್ತಿ ಕೆಲಸ ಮಾಡಿದ ನಂತರ ಸಹ ಕಾರ್ಮಿಕರೊಂದಿಗೆ ಅಂಗನವಾಡಿ ಕೇಂದ್ರದಲ್ಲಿ ರಾತ್ರಿ ಮಲಗಿಕೊಂಡಿದ್ದ.

ಅನಿರೀಕ್ಷಿತವಾಗಿ ಸರ್ಪವೊಂದು ಆತನ ಪ್ಯಾಂಟಿನೊಳಗೆ ಸೇರಿಕೊಂಡಿತು. ಕೂಡಲೇ ಏನೂ ತೂರಿದೆ ಎಂದು ಎಚ್ಚರಗೊಂಡು ನೋಡಿದಾಗ ಹಾವು ಕಾಣಿಸಿದ್ದರಿಂದ ಭಯಗೊಂಡ ಯುವಕ ಸ್ವಲ್ಪವೂ ಕದಲದೆ ಕಂಬವೊಂದನ್ನು ಆಸರೆಯಾಗಿ ಹಿಡಿದುಕೊಂಡು ರಾತ್ರಿಯಿಡೀ ನಿಂತುಕೊಂಡು ಸಂಕಷ್ಟ ಅನುಭವಿಸಿದ. 

ವಿಷಯ ತಿಳಿದು ಸ್ಥಳೀಯರು ಹಾವು ಹಿಡಿಯುವ ವ್ಯಕ್ತಿಯನ್ನು ಕರೆಸಿ ಹಾವನ್ನು ಹೊರೆಗೆ ತೆಗೆಸಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಅಂಬುಲೆನ್ಸ್ ಕೂಡಾ ಸ್ಥಳಕ್ಕೆ ಕರೆಸಿದ್ದರು. ಆದರೆ, ಅದೃಷ್ಟವಶಾತ್ ಹಾವು ಯುವಕನನ್ನು ಕಚ್ಚಿಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

Biggboss Kannada ಅಗ್ನಿಪರೀಕ್ಷೆ: ಗೆಟ್ ಔಟ್, ಇದೆಲ್ಲಾ ಬೇಡ ಬ್ರೇ; ವಿನಯ್ ಗೌಡಗೆ ಸ್ಪರ್ಧಿ ತಿರುಗೇಟು, Video ವೈರಲ್!

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ಕೊಲಂಬೊ ಟೆಸ್ಟ್‌ನಲ್ಲಿ ಭಾರತದ ಅಬ್ಬರ: 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್, ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ

ಬೆಂಗಳೂರಿನಲ್ಲಿ ಜಪಾನಿಗನ ಬಂಧನ: 19 ದಿನ ಜೈಲುವಾಸ, 7 ವರ್ಷಗಳ ಬಳಿಕ ಕರ್ನಾಟಕ ಸರ್ಕಾರದಿಂದ 75 ಸಾವಿರ ಪರಿಹಾರ!