ಸಾಂಕೇತಿಕ ಚಿತ್ರ 
ದೇಶ

ಕೋಲ್ಕತಾ: ಕೋವಿಡ್-19 ಸೋಂಕಿತ ಹಿಂದೂ ಮಹಿಳೆಯ ನವಜಾತ ಶಿಶುಗಳನ್ನು ಆರೈಕೆ ಮಾಡಿದ ಮುಸ್ಲಿಂ ಮಹಿಳೆ!

ಮಾನವೀಯ ಮೌಲ್ಯದ ಮೇಲೆ ಜಾತಿ, ಧರ್ಮ ಯಾವುದೂ ಮುಖ್ಯವಲ್ಲ, ಮನುಷ್ಯ ಧರ್ಮ ಮುಖ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ.

ಕೋಲ್ಕತ್ತಾ: ಮಾನವೀಯ ಮೌಲ್ಯದ ಮೇಲೆ ಜಾತಿ, ಧರ್ಮ ಯಾವುದೂ ಮುಖ್ಯವಲ್ಲ, ಮನುಷ್ಯ ಧರ್ಮ ಮುಖ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ.

ಕೋವಿಡ್-19 ಪಾಸಿಟಿವ್ ಬಂದ ತಾಯಿಯೊಬ್ಬರು ತಮ್ಮ ಅವಳಿ ನವಜಾತ ಶಿಶುಗಳನ್ನು ನೋಡಿಕೊಳ್ಳಲು ಯಾರಾದರೂ ಬನ್ನಿ ಎಂದು ಅಂಗಲಾಚಿಕೊಂಡಾಗ 40 ಕಿಲೋ ಮೀಟರ್ ದೂರದಿಂದ ಮುಸ್ಲಿಂ ಮಹಿಳೆಯೊಬ್ಬರು ಬಂದು ಹಿಂದೂ ಕುಟುಂಬದ ಮಹಿಳೆಗೆ ಆಸರೆಯಾದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಕೋಲ್ಕತ್ತಾದಲ್ಲಿ ಹಿಂದೂ ಕುಟುಂಬವೊಂದರ ಮಹಿಳೆ ಅವಳಿ ಮಕ್ಕಳನ್ನು ಹೆತ್ತ ನಂತರ ಕೊರೋನಾ ಸೋಂಕಿನ ಲಕ್ಷಣಗಳಿಲ್ಲದಿದ್ದರೂ ವರದಿಯಲ್ಲಿ ಪಾಸಿಟಿವ್ ಎಂದು ಬಂತು. ಇದರಿಂದಾಗಿ ಆಕೆಯ ಪತಿ, ಅತ್ತೆ ಎಲ್ಲರೂ 14 ದಿನ ಕ್ವಾರಂಟೈನ್ ಆಗಬೇಕಾಗಿತ್ತು. ಪುಟ್ಟ ಮಕ್ಕಳನ್ನು ಯಾರು ನೋಡಿಕೊಳ್ಳುವುದು ಎಂದು ಸಮಸ್ಯೆಯಲ್ಲಿ ಸಿಲುಕಿದ್ದಾಗ ಅವರ ಕುಟುಂಬದಲ್ಲಿ, ಸಂಬಂಧಿಕರಲ್ಲಿ ಯಾರೂ ಸಿಗಲಿಲ್ಲ. ಕೊನೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯಾ ಮಾಡಿ ಹಾಕಿ ಯಾರಾದರೂ ಸಹಾಯ ಮಾಡಿ ಎಂದು ಮೊರೆಯಿಟ್ಟರು.

ಮನೆಗೆಲಸದವರನ್ನು ಪೂರೈಸುವ ವೃತ್ತಿಪರ ಕೇಂದ್ರಗಳು ಕೊರೋನಾ ಸೋಂಕಿತರ ಮನೆ ಎಂದು ಕೆಲಸದವರನ್ನು ಕಳುಹಿಸಲು ಹಿಂದೇಟು ಹಾಕಿತು. ಆಗ ನೆರವಿಗೆ ಬಂದವರೇ ಫರ್ಡೌಸ್ ಮೂನ್ ಎಂಬ 36 ವರ್ಷದ ಖಾಸಗಿ ಶಾಲೆ ಶಿಕ್ಷಕಿ.

ಫೇಸ್ ಬುಕ್ ನಲ್ಲಿ ಅವರ ಕಷ್ಟವನ್ನು ಕೇಳಿದಾಗ ನವಜಾತ ಅವಳಿ ಶಿಶುಗಳ ಆರೈಕೆಗೆ ಹೋಗಬೇಕೆಂದು ಮಾನವೀಯ ನೆಲೆಯಲ್ಲಿ ಯೋಚಿಸಿದೆ. ನನಗೆ ಇಲ್ಲಿ ಧರ್ಮ ಮುಖ್ಯವಲ್ಲ, ಮನುಷ್ಯತ್ವ ಮುಖ್ಯ.ನನ್ನ ಪೋಷಕರು ಅದಕ್ಕೆ ಒಪ್ಪಲಿಲ್ಲ. ಕೋವಿಡ್-19 ರೋಗಿಯ ಮನೆಗೆ ಹೋಗಬೇಕಾಗಿದ್ದರಿಂದ ಅವರು ಒಪ್ಪಲಿಲ್ಲ. ಆದರೆ ಧೈರ್ಯ ಮಾಡಿ ಮನಸ್ಸಿನ ಮಾತು ಕೇಳಿ ಕಳೆದ ಭಾನುವಾರ ಹೋದೆ ಎನ್ನುತ್ತಾರೆ ಫರ್ಡೌಸ್.

ಹಿಂದೂ ಮಹಿಳೆಯ ಮನೆ ಇರುವುದು ಡಮ್ ಡಮ್ ನಲ್ಲಿ. ಮುಸ್ಲಿಂ ಮಹಿಳೆಯಿರುವುದು ಸೌತ್ 24 ಪರ್ಗಾನ್ಸ್ ಜಿಲ್ಲೆಯಲ್ಲಿ, ನವಜಾತ ಶಿಶುಗಳನ್ನು ಆರೈಕೆ ಮಾಡಿ ಅಭ್ಯಾಸ ಇಲ್ಲ, ಆದರೆ ಅಲ್ಲಿಗೆ ಹೋಗಿ ಮೂರು ದಿನಗಳಲ್ಲಿ ಕಲಿತುಕೊಂಡರು. ಈಗ ಪ್ರತಿ 3 ಗಂಟೆಗೊಮ್ಮೆ ಶಿಶುಗಳಿಗೆ ಹಾಲುಣಿಸಿ, ಅವರು ಗಲೀಜು ಮಾಡಿದಾಗ ಅದನ್ನು ಸ್ವಚ್ಛಗೊಳಿಸಿ, ಪುಟ್ಟ ಕಂದಮ್ಮಗಳು ಎಚ್ಚರಗೊಂಡಾಗ ಆಟವಾಡಿ ಕಳೆಯುತ್ತಾರೆ.

ಮಹಿಳೆ ಹೆರಿಗೆಯಾಗಿ ಮನೆಗೆ ಬಂದ ಕೂಡಲೇ ಆಕೆಯ ಪತಿಗೆ ಬೇರೆ ಅನಾರೋಗ್ಯವಿದ್ದು ಮಕ್ಕಳಿಗೆ ಏನೂ ತೊಂದರೆಯಾಗಬಾರದೆಂದು ದೂರವುಳಿದಿದ್ದಾರೆ. ಇನ್ನಿರುವುದು ವೃದ್ಧೆ, ಆಕೆಗೆ ಪುಟ್ಟ ಮಕ್ಕಳನ್ನು ನೋಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಅವರು ನೆರವು ಕೋರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT