ಸಾಂಕೇತಿಕ ಚಿತ್ರ 
ದೇಶ

ಕೋಲ್ಕತಾ: ಕೋವಿಡ್-19 ಸೋಂಕಿತ ಹಿಂದೂ ಮಹಿಳೆಯ ನವಜಾತ ಶಿಶುಗಳನ್ನು ಆರೈಕೆ ಮಾಡಿದ ಮುಸ್ಲಿಂ ಮಹಿಳೆ!

ಮಾನವೀಯ ಮೌಲ್ಯದ ಮೇಲೆ ಜಾತಿ, ಧರ್ಮ ಯಾವುದೂ ಮುಖ್ಯವಲ್ಲ, ಮನುಷ್ಯ ಧರ್ಮ ಮುಖ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ.

ಕೋಲ್ಕತ್ತಾ: ಮಾನವೀಯ ಮೌಲ್ಯದ ಮೇಲೆ ಜಾತಿ, ಧರ್ಮ ಯಾವುದೂ ಮುಖ್ಯವಲ್ಲ, ಮನುಷ್ಯ ಧರ್ಮ ಮುಖ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ.

ಕೋವಿಡ್-19 ಪಾಸಿಟಿವ್ ಬಂದ ತಾಯಿಯೊಬ್ಬರು ತಮ್ಮ ಅವಳಿ ನವಜಾತ ಶಿಶುಗಳನ್ನು ನೋಡಿಕೊಳ್ಳಲು ಯಾರಾದರೂ ಬನ್ನಿ ಎಂದು ಅಂಗಲಾಚಿಕೊಂಡಾಗ 40 ಕಿಲೋ ಮೀಟರ್ ದೂರದಿಂದ ಮುಸ್ಲಿಂ ಮಹಿಳೆಯೊಬ್ಬರು ಬಂದು ಹಿಂದೂ ಕುಟುಂಬದ ಮಹಿಳೆಗೆ ಆಸರೆಯಾದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಕೋಲ್ಕತ್ತಾದಲ್ಲಿ ಹಿಂದೂ ಕುಟುಂಬವೊಂದರ ಮಹಿಳೆ ಅವಳಿ ಮಕ್ಕಳನ್ನು ಹೆತ್ತ ನಂತರ ಕೊರೋನಾ ಸೋಂಕಿನ ಲಕ್ಷಣಗಳಿಲ್ಲದಿದ್ದರೂ ವರದಿಯಲ್ಲಿ ಪಾಸಿಟಿವ್ ಎಂದು ಬಂತು. ಇದರಿಂದಾಗಿ ಆಕೆಯ ಪತಿ, ಅತ್ತೆ ಎಲ್ಲರೂ 14 ದಿನ ಕ್ವಾರಂಟೈನ್ ಆಗಬೇಕಾಗಿತ್ತು. ಪುಟ್ಟ ಮಕ್ಕಳನ್ನು ಯಾರು ನೋಡಿಕೊಳ್ಳುವುದು ಎಂದು ಸಮಸ್ಯೆಯಲ್ಲಿ ಸಿಲುಕಿದ್ದಾಗ ಅವರ ಕುಟುಂಬದಲ್ಲಿ, ಸಂಬಂಧಿಕರಲ್ಲಿ ಯಾರೂ ಸಿಗಲಿಲ್ಲ. ಕೊನೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯಾ ಮಾಡಿ ಹಾಕಿ ಯಾರಾದರೂ ಸಹಾಯ ಮಾಡಿ ಎಂದು ಮೊರೆಯಿಟ್ಟರು.

ಮನೆಗೆಲಸದವರನ್ನು ಪೂರೈಸುವ ವೃತ್ತಿಪರ ಕೇಂದ್ರಗಳು ಕೊರೋನಾ ಸೋಂಕಿತರ ಮನೆ ಎಂದು ಕೆಲಸದವರನ್ನು ಕಳುಹಿಸಲು ಹಿಂದೇಟು ಹಾಕಿತು. ಆಗ ನೆರವಿಗೆ ಬಂದವರೇ ಫರ್ಡೌಸ್ ಮೂನ್ ಎಂಬ 36 ವರ್ಷದ ಖಾಸಗಿ ಶಾಲೆ ಶಿಕ್ಷಕಿ.

ಫೇಸ್ ಬುಕ್ ನಲ್ಲಿ ಅವರ ಕಷ್ಟವನ್ನು ಕೇಳಿದಾಗ ನವಜಾತ ಅವಳಿ ಶಿಶುಗಳ ಆರೈಕೆಗೆ ಹೋಗಬೇಕೆಂದು ಮಾನವೀಯ ನೆಲೆಯಲ್ಲಿ ಯೋಚಿಸಿದೆ. ನನಗೆ ಇಲ್ಲಿ ಧರ್ಮ ಮುಖ್ಯವಲ್ಲ, ಮನುಷ್ಯತ್ವ ಮುಖ್ಯ.ನನ್ನ ಪೋಷಕರು ಅದಕ್ಕೆ ಒಪ್ಪಲಿಲ್ಲ. ಕೋವಿಡ್-19 ರೋಗಿಯ ಮನೆಗೆ ಹೋಗಬೇಕಾಗಿದ್ದರಿಂದ ಅವರು ಒಪ್ಪಲಿಲ್ಲ. ಆದರೆ ಧೈರ್ಯ ಮಾಡಿ ಮನಸ್ಸಿನ ಮಾತು ಕೇಳಿ ಕಳೆದ ಭಾನುವಾರ ಹೋದೆ ಎನ್ನುತ್ತಾರೆ ಫರ್ಡೌಸ್.

ಹಿಂದೂ ಮಹಿಳೆಯ ಮನೆ ಇರುವುದು ಡಮ್ ಡಮ್ ನಲ್ಲಿ. ಮುಸ್ಲಿಂ ಮಹಿಳೆಯಿರುವುದು ಸೌತ್ 24 ಪರ್ಗಾನ್ಸ್ ಜಿಲ್ಲೆಯಲ್ಲಿ, ನವಜಾತ ಶಿಶುಗಳನ್ನು ಆರೈಕೆ ಮಾಡಿ ಅಭ್ಯಾಸ ಇಲ್ಲ, ಆದರೆ ಅಲ್ಲಿಗೆ ಹೋಗಿ ಮೂರು ದಿನಗಳಲ್ಲಿ ಕಲಿತುಕೊಂಡರು. ಈಗ ಪ್ರತಿ 3 ಗಂಟೆಗೊಮ್ಮೆ ಶಿಶುಗಳಿಗೆ ಹಾಲುಣಿಸಿ, ಅವರು ಗಲೀಜು ಮಾಡಿದಾಗ ಅದನ್ನು ಸ್ವಚ್ಛಗೊಳಿಸಿ, ಪುಟ್ಟ ಕಂದಮ್ಮಗಳು ಎಚ್ಚರಗೊಂಡಾಗ ಆಟವಾಡಿ ಕಳೆಯುತ್ತಾರೆ.

ಮಹಿಳೆ ಹೆರಿಗೆಯಾಗಿ ಮನೆಗೆ ಬಂದ ಕೂಡಲೇ ಆಕೆಯ ಪತಿಗೆ ಬೇರೆ ಅನಾರೋಗ್ಯವಿದ್ದು ಮಕ್ಕಳಿಗೆ ಏನೂ ತೊಂದರೆಯಾಗಬಾರದೆಂದು ದೂರವುಳಿದಿದ್ದಾರೆ. ಇನ್ನಿರುವುದು ವೃದ್ಧೆ, ಆಕೆಗೆ ಪುಟ್ಟ ಮಕ್ಕಳನ್ನು ನೋಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಅವರು ನೆರವು ಕೋರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT