ಜೋಯಲ್ ಪಿಂಟೊ 
ದೇಶ

ಕೋವಿಡ್-19 ಸೋಂಕಿತ ತಂದೆಯನ್ನು ಉಳಿಸುವ ಔಷಧ ತರಲು 1,000 ಕಿ.ಮೀ. ಕಾರು ಡ್ರೈವ್ ಮಾಡಿದ ಪುತ್ರ

ಕೋವಿಡ್-19 ರಿಂದ ತಂದೆಯನ್ನು ಉಳಿಸುವ ಔಷಧ ತರುವುದಕ್ಕಾಗಿ ತಮಿಳುನಾಡಿನ ಜೋಯಲ್ ಪಿಂಟೊ ಎಂಬ ವ್ಯಕ್ತಿ 1,000 ಕಿ.ಮೀ ಕಾರು ಡ್ರೈವ್ ಮಾಡಿದ್ದಾರೆ. 

ಚೆನ್ನೈ: ಕೋವಿಡ್-19 ರಿಂದ ತಂದೆಯನ್ನು ಉಳಿಸುವ ಔಷಧ ತರುವುದಕ್ಕಾಗಿ ತಮಿಳುನಾಡಿನ ಜೋಯಲ್ ಪಿಂಟೊ ಎಂಬ ವ್ಯಕ್ತಿ 1,000 ಕಿ.ಮೀ ಕಾರು ಡ್ರೈವ್ ಮಾಡಿದ್ದಾರೆ. 

"ಟೋಸಿಲಿಜುಮಾಬ್ ಎಂಬ ಔಷಧವನ್ನು ನೀಡಿದರೆ ಮಾತ್ರ ನಿಮ್ಮ ತಂದೆ ಕೋವಿಡ್-19 ನಿಂದ ಚೇತರಿಸಿಕೊಳ್ಳುವುದಕ್ಕೆ ಸಾಧ್ಯ ಎಂದು ಜೋಯಲ್ ಪಿಂಟೋಗೆ ಹೇಳಿದ್ದೇ ತಡ, ಆತ ಚೆನ್ನೈ ನಲ್ಲಿರುವ ಎಲ್ಲಾ ಫಾರ್ಮಸಿಗಳಿಗೂ ಸುತ್ತಿದ್ದಾರೆ. ಆದರೆ ಈ ಔಷಧದ ದಾಸ್ತಾನು ಮುಗಿದು 15 ದಿನಗಳಿಂದಲೂ ಅಲಭ್ಯತೆ ಕಾಡುತ್ತಿದೆ ಎಂಬುದು ಬಹಳ ಹೊತ್ತಿನ ಬಳಿಕ ತಿಳಿದುಬಂದಿದೆ.

ಇನ್ಫ್ಲಾಮೇಷನ್ ನ್ನು ಕಡಿಮೆ ಮಾಡುವುದಕ್ಕಾಗಿ ಟೋಸಿಲಿಜುಮಾಬ್ ಎಂಬ ಔಷಧ ನೀಡಲಾಗುತ್ತದೆ, ಈ ಔಷಧ ತಯಾರಿಕೆಗೆ ಪೇಟೆಂಟ್ ಪಡೆದಿರವುದು ಕೇವಲ ಒಂದೇ ಒಂದು ಸಂಸ್ಥೆಯಾಗಿದ್ದು, 75,000-95,000 ರೂಪಾಯಿಗಳಷ್ಟಾಗಲಿದೆ.

"ಪ್ರಾರಂಭದಲ್ಲಿ ವೈದ್ಯರು ಈ ಔಷಧವನ್ನು ಎರಡು ದಿನಗಳಲ್ಲಿ ತಾವೇ ತರಿಸುವುದಾಗಿ ಹೇಳಿದರು. ಆದರೆ ಅದು ಬಂದು ತಲುಪುವ ವಿಷಯದಲ್ಲಿ ಅನಿಶ್ಚಿತತೆ ಎದುರಾಗುತ್ತಿದ್ದಂತೆಯೇ ಈ ಔಷಧ ತರಲು ನನಗೇ ಹೇಳಿದರು. ವೈದ್ಯರು ಹೇಳುತ್ತಿದ್ದಂತೆಯೇ ನೂರಾರು ಫಾರ್ಮಸಿಗಳಿಗೆ ಕರೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಔಷಧಿಯ ಅಗತ್ಯತೆ ಬಗ್ಗೆ ಹಾಕಿದೆ. ಆದರೆ ನನ್ನಂತೆಯೇ ಹಲವಾರು ಜನರು ಟೋಸಿಲಿಜುಮಾಬ್ ಔಷಧಕ್ಕಾಗಿ ಬೇಡಿಕೆ ಇಟ್ಟಿದ್ದರು. ಎಲ್ಲೂ ಸಿಗಲಿಲ್ಲ. ಸೋಮವಾರದ ವೇಳೆಗೆ ನನ್ನ ತಂದೆ ಆಸ್ಪತ್ರೆಗೆ ದಾಖಲಾಗಿ 13 ನೇ ದಿನವಾಗಿತ್ತು. ವೈದ್ಯರು ಸಮಯ ಕಡಿಮೆ ಇದೆ, ಟೋಸಿಲಿಜುಮಾಬ್ ಔಷಧ ಸಿಗದೇ ಇದ್ದರೆ ಚಿಕಿತ್ಸೆ ಮುಂದುವರೆಸಲು ಸಾಧ್ಯವಿಲ್ಲ ಎಂದುಬಿಟ್ಟರು. ಕೊನೆಗೆ ಒಟ್ಟೇರಿ ಪ್ರದೇಶದಲ್ಲಿ ಒಬ್ಬರು ಈ ಔಷಧ ಹೈದರಾಬಾದ್ ನಲ್ಲಿ ಸಿಗುತ್ತದೆ ಎಂದರು, ಆಸ್ಪತ್ರೆಗೆ ಪತ್ರವಿದ್ದಿದ್ದರಿಂದ 45 ನಿಮಿಷಗಳಲ್ಲಿ ಪಾಸ್ ಸಿಕ್ಕಿತು ತಕ್ಷಣವೇ ಚೆನ್ನೈ ನಿಂದ ಹೈದರಾಬಾದ್ ಗೆ ಹೋದೆ, ಫಾರ್ಮಸಿಯಲ್ಲಿ 92,000 ರೂಪಾಯಿ ತೆಗೆದುಕೊಂಡರು, ಅದನ್ನು ನಂಬಬೇಕೋ ಬಿಡಬೇಕೋ ಎಂಬುದನ್ನು ನೋಡುವುದಕ್ಕೂ ಸಮಯವಿರಲಿಲ್ಲ. ಔಷಧ ತಂದುಕೊಡಲಾಗಿದ್ದು, ತಂದೆ ಗುಣಮುಖರಾಗುತ್ತಾರೆಂಬ ವಿಶ್ವಾಸದಲ್ಲಿದ್ದೇವೆ ಎನ್ನುತ್ತಾರೆ ಜೋಯಲ್ ಪಿಂಟೋ. 

"ಟೋಸಿಲಿಜುಮಾಬ್ ಔಷಧಕ್ಕಾಗಿ ಹಲವಾರು ಜನರು ಹುಡುಕುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಹಾಗೂ ಆಸ್ಪತ್ರೆಗಳು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಔಷಧಗಳ ದಾಸ್ತಾನನ್ನು ಸಾಕಷ್ಟು ಇಟ್ಟುಕೊಳ್ಳಬೇಕು. ಇನ್ನೂ ವಿಳಂಬವಾಯಿತೆಂದರೆ ಎಷ್ಟು ಜನ ಜೀವಕಳೆದುಕೊಳ್ಳುತ್ತಾರೋ ಗೊತ್ತಿಲ್ಲ" ಎನ್ನುತ್ತಾರೆ ಜೋಯಲ್ ಪಿಂಟೊ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT