ದೇಶ

ಕಾಶ್ಮೀರ ಪಂಡಿತರಿಗೆ ಶಸ್ತ್ರಾಸ್ತ್ರ ತರಬೇತಿ ಒದಗಿಸಿ ; ಜಮ್ಮು ಕಾಶ್ಮೀರ  ಮಾಜಿ ಡಿಜಿಪಿ ಸಲಹೆ 

Srinivas Rao BV

ಶ್ರೀನಗರ: ಕಾಶ್ಮೀರದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳು ಕುರಿತು ಜಮ್ಮು ಮತ್ತು ಕಾಶ್ಮೀರ ಮಾಜಿ ಡಿಜಿಪಿ ಶೇಷ್ ಪಾಲ್ ವೈದ್ ಸಂಚಲನ ಹೇಳಿಕೆ ನೀಡಿದ್ದಾರೆ. 

ಕಾಶ್ಮೀರ ಕಣಿವೆಯಲ್ಲಿ ಅಲ್ಪಸಂಖ್ಯಾತರಾಗಿರುವ ಕಾಶ್ಮೀರ ಪಂಡಿತರಿಗೆ ಸೂಕ್ತ ತರಬೇತಿ ನೀಡಿ, ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು ಎಂದು ಶೇಷ ಪಾಲ್ ವೈದ್ ಸರ್ಕಾರವನ್ನು ಕೋರಿದ್ದಾರೆ. 

ಅನಂತ್ ನಾಗ್ ಜಿಲ್ಲೆಯಲ್ಲಿ ಕಾಶ್ಮೀರ ಪಂಡಿತ ಸರಪಂಚ ಅಜಯ್ ಪಂಡಿತ ಅವರನ್ನು ಭಯೋತ್ಪಾದಕರು ಹತ್ಯೆ  ನಡೆಸಿದ್ದ ಹಿನ್ನಲೆಯಲ್ಲಿ ಮಾಜಿ ಡಿಜಿಪಿ ಈ ಸಲಹೆಯನ್ನು ನೀಡಿದ್ದಾರೆ.

SCROLL FOR NEXT