ದೇಶ

ಕಾನ್ಪುರ: ಬಿಎಸ್ ಪಿ ನಾಯಕನನ್ನು ಗುಂಡಿಟ್ಟು ಕೊಂದ ಅಪರಿಚಿತ ದುಷ್ಕರ್ಮಿಗಳು

Shilpa D

ಕಾನ್ಪುರ: ಬಹುಜನ ಸಮಾಜವಾದಿ ಪಕ್ಷದ ನಾಯಕನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಜೂನ್ 20 ರಂದು ಬಿಎಸ್ ಪಿ ನಾಯಕ ಪಿಂಟು ಸೆಂಗರ್ ಎಂಬಾತನನ್ನು  ಚಾಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಎಸ್ಎಸ್ ಪಿ ತಿಳಿಸಿದ್ದಾರೆ.

ಸೆಂಗರ್ ಆಸ್ತಿ ವ್ಯಾಪಾರಿಯಾಗಿದ್ದು, ಎರಡು ಬೈಕ್ ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಕುಳಿತಿದ್ದ ಆತನನ್ನು ಹೊರಗೆಳೆದು ಶೂಟ್ ಮಾಡಿದ್ದಾರೆ, ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಅತ ಸಾವನ್ನಪ್ಪಿದ್ದ, ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.

SCROLL FOR NEXT