ಪ್ರಶಾಂತ್ ಕಿಶೋರ್ 
ದೇಶ

ಜ್ಯೋತಿರಾದಿತ್ಯ ಸಿಂಧಿಯಾದು ವಂಶವಾಹಿ ರಾಜಕಾರಣವಲ್ಲವೆ?: ಬಿಜೆಪಿಗೆ ಪ್ರಶಾಂತ್ ಕಿಶೋರ್ ಪ್ರಶ್ನೆ

ಕಾಂಗ್ರೆಸ್ ಹಿರಿಯ  ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ  ಎಂಬ ವರದಿಗಳ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಅವರು, ಕಾಂಗ್ರೆಸ್  ಅನ್ನು   ವಂಶವಾಹಿ...

ನವದೆಹಲಿ: ಕಾಂಗ್ರೆಸ್ ಹಿರಿಯ  ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ  ಎಂಬ ವರದಿಗಳ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಅವರು, ಕಾಂಗ್ರೆಸ್  ಅನ್ನು   ವಂಶವಾಹಿ ರಾಜಕಾರಣದ ಪಕ್ಷ ಎಂದು ಸದಾ ಟೀಕಿಸುವ ಬಿಜೆಪಿ, ಇದೀಗ ರಾಜ ಮನೆತನದ ಹೆಸರನ್ನು ಬಂಡವಾಳಮಾಡಿಕೊಂಡಿರುವ ಸಿಂಧಿಯಾ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿದೆ  ಎಂದು   ಲೇವಡಿ ಮಾಡಿದ್ದಾರೆ.

ಗಾಂಧಿ ಉಪನಾಮ ಹೊಂದಿರುವ ಸೋನಿಯಾ ಗಾಂಧಿ ಕುಟುಂಬವನ್ನು ಆಗಾಗ್ಗೆ ಜರಿಯುವ ಬಿಜೆಪಿ,  "ಸಿಂಧಿಯಾ" ಎಂಬ   ಮನೆತನದ ಹೆಸರಿರುವ ಜ್ಯೋತಿರಾದಿತ್ಯ ಅವರನ್ನು ನಾಯಕ ಎಂದು ಗುರುತಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೀಗೆ  ಕಾಂಗ್ರೆಸ್  ಪಕ್ಷದ್ದು, ವಂಶವಾಹಿ  ರಾಜಕಾರಣ ಎಂಬುದಾದರೆ, ಸಿಂಧಿಯಾ ಅವರದ್ದು  ಏನು ..?  ಎಂದು ಪ್ರಶಾಂತ್ ಕಿಶೋರ್ ಪ್ರಶ್ನಿಸಿದ್ದಾರೆ.  ಸಿಂಧಿಯಾ ಅವರ ತಂದೆ ಮಾಧವ್ ರಾವ್ ಸಿಂಧಿಯಾ ಕೂಡ ಕಾಂಗ್ರೆಸ್ ನಲ್ಲಿದ್ದವರು. ಅಲ್ಲದೇ, ಸಿಂಧಿಯಾ ರಾಜ ಮನೆತನ ಶತಮಾನಗಳ ಕಾಲ ಮಧ್ಯಪ್ರದೇಶವನ್ನು ಆಳಿದೆ ಎಂದು ಪ್ರಶಾಂತ್ ಕಿಶೋರ್  ವ್ಯಂಗ್ಯವಾಡಿದ್ದಾರೆ.

ಕೇವಲ ತಮ್ಮ ರಾಜ ಮನೆತನದ ಹೆಸರು ಬಳಸಿಕೊಂಡು ಜ್ಯೋತಿರಾದಿತ್ಯ ಸಿಂಧಿಯಾ ರಾಜಕಾರಣ ಮಾಡಿದ್ದಾರೆ. ಅವರು   ಜನಸಮೂಹವನ್ನು ಸೆಳೆಯ ಬಲ್ಲ, ರಾಜಕಾರಣ ದಿಕ್ಕು ಬದಲಿಸಬಲ್ಲ ಸಮರ್ಥನಾಯಕನಲ್ಲ ಎಂದು ಕಿಶೋರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT