ದೇಶ

ಮಧ್ಯಪ್ರದೇಶ: ನಾಳೆ ವಿಶ್ವಾಸಮತ ಯಾಚನೆ ಹಿನ್ನೆಲೆ, ರಾಜ್ಯಪಾಲ ಲಾಲ್ ಜೀ ಟಂಡನ್ ಭೇಟಿಯಾದ ಕಮಲ್ ನಾಥ್ 

Nagaraja AB

ಭೋಪಾಲ್: ಮಧ್ಯಪ್ರದೇಶ ರಾಜಕೀಯ ಹೈಡ್ರಾಮದ ನಡುವೆ ಮುಖ್ಯಮಂತ್ರಿ ಕಮಲ್ ನಾಥ್ ಇಂದು ರಾಜಭವನದಲ್ಲಿ ರಾಜ್ಯಪಾಲ ಲಾಲ್ ಜೀ ಟಂಡನ್ ಅವರನ್ನು ಭೇಟಿಯಾಗಿದ್ದಾರೆ.

ಮಂಗಳವಾರವೇ ವಿಶ್ವಾಸಮತ ಯಾಚಿಸಬೇಕು, ಇಲ್ಲದಿದ್ದರೆ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಪರಿಗಣಿಸಬೇಕಾಗುತ್ತದೆ ಎಂದು ರಾಜ್ಯಪಾಲರು ಕಮಲ್ ನಾಥ್ ಅವರಿಗೆ ಸೂಚಿಸಿದ್ದರು. 

ಈ ಹಿಂದೆ  ರಾಜ್ಯಪಾಲರ ಪತ್ರಕ್ಕೆ ಉತ್ತರವಾಗಿ ಕಮಲ್ ನಾಥ್  ನೀಡಿರುವ ವಾದಗಳು ಆಧಾರರಹಿತವಾಗಿವೆ ಮತ್ತು ಅದರಲ್ಲಿ ಬಳಸಿದ ಭಾಷೆ ಸಂಸದೀಯವಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಸಂವಿಧಾನ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಮೇಲೆ ಗೌರವ ಇದ್ದರೆ ಮಾರ್ಚ್ 17 ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಬೇಕು, ಇಲ್ಲದಿದ್ದರೆ ನಿಮಗೆ ಬಹುಮತ ಇಲ್ಲ ಎಂಬುದು ಸಾಬೀತು ಆಗಲಿದೆ ಎಂದು ರಾಜ್ಯಪಾಲರು ಕಮಲ್ ನಾಥ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
 

SCROLL FOR NEXT