ಲಾಕ್ ಡೌನ್ ನಂತರ ವಿಮಾನ ಪ್ರಯಾಣದ ವೇಳೆ ಪಾಲಿಸಲೇಬೇಕಾದ ನಿಯಗಳ ಬಗ್ಗೆ ಮಾಹಿತಿ ಇಲ್ಲಿದೆn 
ದೇಶ

ಲಾಕ್ ಡೌನ್ ನಂತರ ವಿಮಾನ ಪ್ರಯಾಣದ ವೇಳೆ ಪಾಲಿಸಲೇಬೇಕಾದ ನಿಯಗಳ ಬಗ್ಗೆ ಮಾಹಿತಿ ಇಲ್ಲಿದೆ

ಲಾಕ್ ಡೌನ್ ನಂತರದ ದಿನಗಳಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳು ಪುನಾರಂಭಗೊಳ್ಳಬೇಕಿದ್ದು, ವಿಮಾನಯಾನ ಕ್ಷೇತ್ರ ಈಗಾಗಲೇ ತಯಾರಿ ನಡೆಸಿಕೊಳ್ಳುತ್ತಿದೆ. 

ನವದೆಹಲಿ: ಲಾಕ್ ಡೌನ್ ನಂತರದ ದಿನಗಳಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳು ಪುನಾರಂಭಗೊಳ್ಳಬೇಕಿದ್ದು, ವಿಮಾನಯಾನ ಕ್ಷೇತ್ರ ಈಗಾಗಲೇ ತಯಾರಿ ನಡೆಸಿಕೊಳ್ಳುತ್ತಿದೆ. 

ವಿಮಾನಯಾನ ಪುನಾರಂಭಗೊಂಡ ನಂತರ ಪ್ರಯಾಣಿಕರು ಪಾಲಿಸಬೇಕಾದ ಅಂಶಗಳ ಕರಡು ಪ್ರತಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಈಗಾಗಲೇ ಸಿದ್ಧಪಡಿಸಿದೆ. 

ಪಿಟಿಐ ನಲ್ಲಿ ಪ್ರಕಟಗೊಂಡಿರುವ ಈ ಕುರಿತ ಮಾಹಿತಿಯ ಪ್ರಕಾರ ಲಾಕ್ ಡೌನ್ ನಂತರ ವಿಮಾನದಲ್ಲಿ ಪ್ರಯಾಣಿಸುವ ಯಾವುದೇ ವ್ಯಕ್ತಿ ಕ್ಯಾಬಿನ್ ಬ್ಯಾಗೇಜ್ ನ್ನು ತೆಗೆದುಕೊಂಡು ಹೋಗುವಂತಿಲ್ಲ. ಅಂತೆಯೇ ಆರೋಗ್ಯ ಸೇತು ಆಪ್ ನ್ನು ಬಳಸಬೇಕಿದ್ದು, ವಿಮಾನ ಟೇಕ್ ಆಫ್ ಆಗುವುದಕ್ಕೂ ಎರಡು ಗಂಟೆಗಳಿಗೂ ಮುನ್ನ ವಿಮಾನ ನಿಲ್ದಾಣ ತಲುಪಬೇಕಾಗುತ್ತದೆ. 

ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಒಪಿ) ಯ ಪ್ರಕಾರ ಆರೋಗ್ಯ ಆಪ್ ನಲ್ಲಿರುವ ಗ್ರೀನ್ ಸ್ಟೇಟಸ್, ವೆಬ್ ಚೆಕ್-ಇನ್ ಗಳ ಬಗ್ಗೆಯೂ ಇದರಲ್ಲಿ ಪ್ರಸ್ತಾಪ ಮಾಡಲಾಗಿದೆ. 

ಕೇವಲ ಪ್ರಯಾಣಿಕರಿಗಷ್ಟೇ ಅಲ್ಲದೇ ಎಸ್ಒಪಿಯ ಕರಡುಪ್ರತಿಯಲ್ಲಿರುವ ಅಂಶಗಳನ್ನು ಭದ್ರತಾ ಸಿಬ್ಬಂದಿಗಳು, ಪೈಲಟ್ ಗಳು, ಸಹ ಇದನ್ನು ಪಾಲಿಸಲು ಸಲಹೆ ನೀಡಿದ್ದಾರೆ. 

ಗುರುತಿನ ಚೀಟಿ ಮೂಲಕ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನೂ ಕೈ ಬಿಡಲಾಗಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ. ಮತ್ತೊಂದು ಸಲಹೆಯಲ್ಲಿ ವೈದ್ಯಕೀಯ ತುರ್ತು ಅಗತ್ಯವಿದ್ದಲ್ಲಿ ಆ ನಿರ್ದಿಷ್ಟ ರೋಗಿಗೆ ಸಹಕಾರಿಯಾಗುವಂತೆ  ವಿಮಾನದ 3 ಸಾಲುಗಳನ್ನೂ ಖಾಲಿಯಾಗಿಯೇ ಇಟ್ಟಿರಲು ಕ್ರಮ ಕೈಗೊಳ್ಳಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT