ಕೊರೋನಾ ಗೆದ್ದುಬಂದ ಅಜ್ಜಿ 
ದೇಶ

ಕೊರೋನಾಗೆ ಮಗನನ್ನು ಕಳೆದುಕೊಂಡು 17 ದಿನಗಳ ನಂತರ ವೈರಸ್ ನ್ನು ಗೆದ್ದುಬಂದ ಇಂದೋರ್ ನ ಶತಾಯುಷಿ ಅಜ್ಜಿ!

17 ದಿನಗಳ ಹಿಂದೆ ಮಗನನ್ನು ಕಳೆದುಕೊಂಡ ಶತಾಯುಷಿ ಅಜ್ಜಿ ಕೊರೋನಾ ಸೋಂಕಿನಿಂದ ಗೆದ್ದು ಬಂದಿದ್ದಾರೆ ಎಂದರೆ ನಂಬಲೇಬೇಕು.

ಭೋಪಾಲ್: 17 ದಿನಗಳ ಹಿಂದೆ ಮಗನನ್ನು ಕಳೆದುಕೊಂಡ ಶತಾಯುಷಿ ಅಜ್ಜಿ ಕೊರೋನಾ ಸೋಂಕಿನಿಂದ ಗೆದ್ದು ಬಂದಿದ್ದಾರೆ ಎಂದರೆ ನಂಬಲೇಬೇಕು.

ಮಧ್ಯ ಪ್ರದೇಶದ ಇಂದೋರ್ ನ ನೆಹರೂ ನಗರ ನಿವಾಸಿ 100 ವರ್ಷದ ಅಜ್ಜಿ ಕಳೆದ ಗುರುವಾರ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಗೆದ್ದುಬಂದ 67 ರೋಗಿಗಳಲ್ಲಿ ಒಬ್ಬರು.

ಮೂರು ಗಂಡು ಮಕ್ಕಳ ತಾಯಿಯಾಗಿರುವ 100 ವರ್ಷದ ಈ ಅಜ್ಜಿ ತನ್ನ ಎರಡನೇ ಮಗನನ್ನು ಕಲೆದ ಮೇ 4ರಂದು ಕೊರೋನಾ ಸೋಂಕಿಗೆ ಕಳೆದುಕೊಂಡಿದ್ದರು. ಎರಡು ದಿನಗಳ ಬಳಿಕ 16 ಸದಸ್ಯರ ಕುಟುಂಬದವರನ್ನೆಲ್ಲಾ ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಯಿತು.

ಆಗ ಈ ಶತಾಯುಷಿ ಅಜ್ಜಿ, ಆಕೆಯ ಕಿರಿಮಗ, ಮೊಮ್ಮಗ, ಮೊಮ್ಮಗನ ಪತ್ನಿ, ಇಬ್ಬರು ಮೊಮ್ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಅವರನ್ನೆಲ್ಲಾ ಇಂದೋರ್ ನ ಶ್ರೀ ಅರಬಿಂದೊ ವೈದ್ಯಕೀಯ ವಿಜ್ಞಾನ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಅವರಲ್ಲಿ ಅಜ್ಜಿ ಜೊತೆಗೆ ಇತರ ನಾಲ್ವರು ಗುಣಮುಖ ಹೊಂದಿ ಬಿಡುಗಡೆಯಾಗಿದ್ದಾರೆ.

ಈ ಅಜ್ಜಿಗೆ ಸಣ್ಣಮಟ್ಟಿಗೆ ಜ್ವರ ಬಿಟ್ಟರೆ ಬೇರೆ ಯಾವ ಲಕ್ಷಣವೂ ಇರಲಿಲ್ಲ. ಬೇರೆ ಹಿರಿಯ ವಯಸ್ಸಿನವರಿಗಾದರೆ ಆಕ್ಸಿಜನ್ ಬೇಕಾಗುತ್ತದೆ. ಆದರೆ ಈ ಅಜ್ಜಿ ಕೆಲ ದಿನಗಳು ಮಾತ್ರ ಆಕ್ಸಿಜನ್ ನೆರವಲ್ಲಿ ಇದ್ದರು. ಅವರ ದೃಢ ಮನಸ್ಸಿನಿಂದಾಗಿಯೇ ಇಷ್ಟು ಗುಣಮುಖರಾಗಿ ಹೊರಬಂದರು ಎಂದು ಆಸ್ಪತ್ರೆಯ ವೈದ್ಯ ಡಾ ರವಿ ದೊಸಿ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT