ಕೊರೋನಾ ಗೆದ್ದುಬಂದ ಅಜ್ಜಿ 
ದೇಶ

ಕೊರೋನಾಗೆ ಮಗನನ್ನು ಕಳೆದುಕೊಂಡು 17 ದಿನಗಳ ನಂತರ ವೈರಸ್ ನ್ನು ಗೆದ್ದುಬಂದ ಇಂದೋರ್ ನ ಶತಾಯುಷಿ ಅಜ್ಜಿ!

17 ದಿನಗಳ ಹಿಂದೆ ಮಗನನ್ನು ಕಳೆದುಕೊಂಡ ಶತಾಯುಷಿ ಅಜ್ಜಿ ಕೊರೋನಾ ಸೋಂಕಿನಿಂದ ಗೆದ್ದು ಬಂದಿದ್ದಾರೆ ಎಂದರೆ ನಂಬಲೇಬೇಕು.

ಭೋಪಾಲ್: 17 ದಿನಗಳ ಹಿಂದೆ ಮಗನನ್ನು ಕಳೆದುಕೊಂಡ ಶತಾಯುಷಿ ಅಜ್ಜಿ ಕೊರೋನಾ ಸೋಂಕಿನಿಂದ ಗೆದ್ದು ಬಂದಿದ್ದಾರೆ ಎಂದರೆ ನಂಬಲೇಬೇಕು.

ಮಧ್ಯ ಪ್ರದೇಶದ ಇಂದೋರ್ ನ ನೆಹರೂ ನಗರ ನಿವಾಸಿ 100 ವರ್ಷದ ಅಜ್ಜಿ ಕಳೆದ ಗುರುವಾರ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಗೆದ್ದುಬಂದ 67 ರೋಗಿಗಳಲ್ಲಿ ಒಬ್ಬರು.

ಮೂರು ಗಂಡು ಮಕ್ಕಳ ತಾಯಿಯಾಗಿರುವ 100 ವರ್ಷದ ಈ ಅಜ್ಜಿ ತನ್ನ ಎರಡನೇ ಮಗನನ್ನು ಕಲೆದ ಮೇ 4ರಂದು ಕೊರೋನಾ ಸೋಂಕಿಗೆ ಕಳೆದುಕೊಂಡಿದ್ದರು. ಎರಡು ದಿನಗಳ ಬಳಿಕ 16 ಸದಸ್ಯರ ಕುಟುಂಬದವರನ್ನೆಲ್ಲಾ ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಯಿತು.

ಆಗ ಈ ಶತಾಯುಷಿ ಅಜ್ಜಿ, ಆಕೆಯ ಕಿರಿಮಗ, ಮೊಮ್ಮಗ, ಮೊಮ್ಮಗನ ಪತ್ನಿ, ಇಬ್ಬರು ಮೊಮ್ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಅವರನ್ನೆಲ್ಲಾ ಇಂದೋರ್ ನ ಶ್ರೀ ಅರಬಿಂದೊ ವೈದ್ಯಕೀಯ ವಿಜ್ಞಾನ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಅವರಲ್ಲಿ ಅಜ್ಜಿ ಜೊತೆಗೆ ಇತರ ನಾಲ್ವರು ಗುಣಮುಖ ಹೊಂದಿ ಬಿಡುಗಡೆಯಾಗಿದ್ದಾರೆ.

ಈ ಅಜ್ಜಿಗೆ ಸಣ್ಣಮಟ್ಟಿಗೆ ಜ್ವರ ಬಿಟ್ಟರೆ ಬೇರೆ ಯಾವ ಲಕ್ಷಣವೂ ಇರಲಿಲ್ಲ. ಬೇರೆ ಹಿರಿಯ ವಯಸ್ಸಿನವರಿಗಾದರೆ ಆಕ್ಸಿಜನ್ ಬೇಕಾಗುತ್ತದೆ. ಆದರೆ ಈ ಅಜ್ಜಿ ಕೆಲ ದಿನಗಳು ಮಾತ್ರ ಆಕ್ಸಿಜನ್ ನೆರವಲ್ಲಿ ಇದ್ದರು. ಅವರ ದೃಢ ಮನಸ್ಸಿನಿಂದಾಗಿಯೇ ಇಷ್ಟು ಗುಣಮುಖರಾಗಿ ಹೊರಬಂದರು ಎಂದು ಆಸ್ಪತ್ರೆಯ ವೈದ್ಯ ಡಾ ರವಿ ದೊಸಿ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT