ಸಂಗ್ರಹ ಚಿತ್ರ 
ದೇಶ

ಕೊರೋನಾ ಭೀತಿ: ಕುಟುಂಬ ಸದಸ್ಯರ ಪ್ರಯಾಣಕ್ಕೆ 180 ಸೀಟ್ ಗಳ ವಿಮಾನ ಬುಕ್ ಮಾಡಿದ ಉದ್ಯಮಿ

ಲಾಕ್ ಡೌನ್ ನಿಂದಾಗಿ ಭೋಪಾಲ್ ನಲ್ಲಿ ಸಿಲುಕಿದ್ದ ಕುಟುಂಬ ಸದಸ್ಯರನ್ನು ವಾಪಸ್ ಕರೆಸಿಕೊಳ್ಳಲು ಉದ್ಯಮಿಯೋರ್ವ ಒಂದು ಇಡೀ ವಿಮಾನವನ್ನು ಬುಕ್ ಮಾಡಿದ್ದಾರೆ.

ಭೋಪಾಲ್: ಲಾಕ್ ಡೌನ್ ನಿಂದಾಗಿ ಭೋಪಾಲ್ ನಲ್ಲಿ ಸಿಲುಕಿದ್ದ ಕುಟುಂಬ ಸದಸ್ಯರನ್ನು ವಾಪಸ್ ಕರೆಸಿಕೊಳ್ಳಲು ಉದ್ಯಮಿಯೋರ್ವ ಒಂದು ಇಡೀ ವಿಮಾನವನ್ನು ಬುಕ್ ಮಾಡಿದ್ದಾರೆ.

ಹೌದು.. ಭೋಪಾಲ್ ಮೂಲದ ಲಿಕ್ಕರ್ ಉದ್ಯಮಿಯೊಬ್ಬರು ಮೂರು ಕುಟುಂಬಗಳ ಪ್ರಯಾಣಕ್ಕಾಗಿ 180 ಸೀಟ್ ಗಳ ಎ320 ವಿಮಾನವನ್ನು ಬುಕ್ ಮಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ. ಪ್ರಸ್ತುತ ದೇಶಾದ್ಯಂತ ಆರ್ಭಟ ನಡೆಸುತ್ತಿರುವ ಕೊರೋನಾ ವೈರಸ್ ಹಿನ್ನಲೆಯಲ್ಲಿ ಉದ್ಯಮಿ  ಜನ ಸಮೂಹದಿಂದ ತಮ್ಮ ಕುಟುಂಬ ಸದಸ್ಯರನ್ನು ರಕ್ಷಿಸಲು ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಉದ್ಯಮಿಯ ಪುತ್ರಿ ಮತ್ತು ಆಕೆಯ ಇಬ್ಬರು ಮಕ್ಕಳು ಮತ್ತು ಅವರ ಕೆಲಸಗಾರರು ಲಾಕ್ ಡೌನ್ ನಿಂದಾಗಿ 2 ತಿಂಗಳಿಂದ ಭೋಪಾಲ್ ನಲ್ಲಿ ಸಿಲುಕಿದ್ದರು. ಕೇಂದ್ರ ಸರ್ಕಾರ ಖಾಸಗಿ ವಿಮಾನ ಸಂಚಾರಕ್ಕೆ ಅವಕಾಶ ನೀಡುತ್ತಿದ್ದಂತೆಯೇ ಉದ್ಯಮಿ ತಮ್ಮ ಕುಟುಂಬ  ಸದಸ್ಯರನ್ನು ದೆಹಲಿಗೆ ಕರೆಸಿಕೊಳ್ಳಲನ ವಿಮಾನ ಬುಕ್ ಮಾಡಿದ್ದಾರೆ. ಮೇ 25ರಂದು ವಿಮಾನ ಕುಟುಂಬ ಸದಸ್ಯರನ್ನು ಹೊತ್ತು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ವಿಮಾನದ ಕೆಲವೇ ಸಿಬ್ಬಂದಿ ಮತ್ತು ಅವರ ಕುಟುಂಬದ ನಾಲ್ಕು ಮಂದಿ ಪ್ರಯಾಣಿಕರು ಮಾತ್ರ ಇದ್ದರು ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ವಿಮಾನ ನಿಲ್ದಾಣದ ಸಿಬ್ಬಂದಿ ಮೇ 25ರಂದು ವಿಮಾನ ಬಂದಿಳಿದಿದೆ. ವಿಮಾನದಲ್ಲಿ ಕೇವಲ 4 ಮಂದಿ ಪ್ರಯಾಣಿಕರು ಮಾತ್ರ ಇದ್ದರು. ಬಹಶಃ ಅವರೆಲ್ಲರೂ ಕುಟುಂಬ ಸದಸ್ಯರಿರಬೇಕು. ಕೊರೋನಾ ಭೀತಿಯಿಂದ ಕುಟುಂಬ ಸದಸ್ಯರಿಗಾಗಿ ಇಡೀ ವಿಮಾನ ಬುಕ್  ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಂತೆಯೇ ವಿಮಾನಯಾನ ತಜ್ಞರು ಅಭಿಪ್ರಾಯಪಟ್ಟಿರುವಂತೆ ಭೋಪಾಲ್ ನಿಂದ ದೆಹಲಿಗೆ ವಿಮಾನ ಪ್ರಯಾಣಿಸಲು ಕನಿಷ್ಠ 20 ಲಕ್ಷ ರೂ ತಗುಲುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶ್ರೀಲಂಕಾಗೆ ವೈಟ್ ವಾಷ್ ಭೀತಿ; ಸರಣಿ ಗೆದ್ದ ಭಾರತದ ಮಹಿಳಾ ಪಡೆ

36 ಗಂಟೆಗಳಲ್ಲಿ 80 ಡ್ರೋನ್‌; ಪಾಕ್‌ನ ನೂರ್ ಖಾನ್ ವಾಯುನೆಲೆ ನಾಶ: Operation Sindoor ಒಪ್ಪಿಕೊಂಡ Pak

ಭಾರತ ವಿಶ್ವಗುರು ಆಗುವುದು ನಮ್ಮ ಮಹತ್ವಾಕಾಂಕ್ಷೆಯಲ್ಲ; ಆದರೆ ಅದು ಜಗತ್ತಿಗೆ ಅವಶ್ಯಕ: RSS ಮುಖ್ಯಸ್ಥ ಭಾಗವತ್

ಉಸ್ಮಾನ್ ಹಾದಿ ಹತ್ಯೆ: ಇಬ್ಬರು ಪ್ರಮುಖ ಶಂಕಿತರು ಮೇಘಾಲಯ ಮೂಲಕ ಭಾರತಕ್ಕೆ ಪರಾರಿ- ಬಾಂಗ್ಲಾದೇಶ ಪೊಲೀಸ್

ಬೆಂಗಳೂರಿನ ಕೋಗಿಲು ಬಡಾವಣೆ ಅಕ್ರಮ ಮನೆಗಳ ತೆರವು: ಸ್ಥಳಕ್ಕೆ ಕೇರಳ ಸಂಸದ ಆಯ್ತು ಈಗ ಶಾಸಕನ ಭೇಟಿ

SCROLL FOR NEXT