ಕೆ ಪಿ ಶರ್ಮ ಒಲಿ 
ದೇಶ

ನೇಪಾಳದ ಹೊಸ ರಾಜಕೀಯ ಮ್ಯಾಪ್ ಗೆ ತಡೆ, ಪ್ರಧಾನಿ ಕೆ ಪಿ ಶರ್ಮ ಒಲಿಗೆ ಹಿನ್ನಡೆ

ಕೇಂದ್ರದ ಕಾರ್ಯಕಾರಿ ಸಮಿತಿ ನಿರ್ಧಾರ ತೆಗೆದುಕೊಂಡ ಮೇಲಷ್ಟೇ ಈ ವಿವಾದದಲ್ಲಿ ನಿಲುವು ತೆಗೆದುಕೊಳ್ಳಬಹುದು ಎಂದು ನೇಪಾಳ ಕಾಂಗ್ರೆಸ್ ಹೇಳಿದ್ದರಿಂದ ಮೂರು ಭಾರತೀಯ ಪ್ರಾಂತ್ಯಗಳನ್ನು ತನ್ನ ಹೊಸ ರಾಜಕೀಯ ಮ್ಯಾಪ್ ನಲ್ಲಿ ಸೇರಿಸಬೇಕೆಂಬ ನೇಪಾಳ ಪ್ರಧಾನಿ ಕೆ ಪಿ ಶರ್ಮ ಒಲಿಗೆ ತೀವ್ರ ಹಿನ್ನಡೆಯಾದಂತಾಗಿದೆ.

ನವದೆಹಲಿ: ಕೇಂದ್ರದ ಕಾರ್ಯಕಾರಿ ಸಮಿತಿ ನಿರ್ಧಾರ ತೆಗೆದುಕೊಂಡ ಮೇಲಷ್ಟೇ ಈ ವಿವಾದದಲ್ಲಿ ನಿಲುವು ತೆಗೆದುಕೊಳ್ಳಬಹುದು ಎಂದು ನೇಪಾಳ ಕಾಂಗ್ರೆಸ್ ಹೇಳಿದ್ದರಿಂದ ಮೂರು ಭಾರತೀಯ ಪ್ರಾಂತ್ಯಗಳನ್ನು ತನ್ನ ಹೊಸ ರಾಜಕೀಯ ಮ್ಯಾಪ್ ನಲ್ಲಿ ಸೇರಿಸಬೇಕೆಂಬ ನೇಪಾಳ ಪ್ರಧಾನಿ ಕೆ ಪಿ ಶರ್ಮ ಒಲಿಗೆ ತೀವ್ರ ಹಿನ್ನಡೆಯಾದಂತಾಗಿದೆ.

ಕಲಪಾಣಿ, ಲಿಪುಲೇಖ್, ಲಿಂಪಿಯಾಧುರಗಳನ್ನು ನೇಪಾಳ ಪ್ರಾಂತ್ಯದೊಳಗೆ ಸೇರಿಸಬೇಕೆಂದು ಹೊಸ ರಾಜಕೀಯ ಮ್ಯಾಪನ್ನು ಇತ್ತೀಚೆಗೆ ನೇಪಾಳ ಸಂಸತ್ತಿನಲ್ಲಿ ಮಂಡಿಸಲಾಯಿತು. ಇದನ್ನು ನಿನ್ನೆ ಬಿಡುಗಡೆ ಮಾಡಲಾಗಿದ್ದು ರಾಷ್ಟ್ರೀಯವಾದಿ ಭಾವನೆಯನ್ನು ಪ್ರಲೋಭಿಸಿದಂತಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ವೈಯಕ್ತಿಕ ಲಾಭಕ್ಕಾಗಿ ಒಲಿಯವರು ಈ ರೀತಿ ಮಾಡುತ್ತಿದ್ದಾರೆ ಎಂದು ಬಹುತೇಕ ನೇಪಾಳೀಯರೇ ಹೇಳುತ್ತಿದ್ದು ನೇಪಾಳದಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.

ಕಳೆದ ಮೇ 8ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಿಪುಲೇಖ್ ನಲ್ಲಿ ರಸ್ತೆ ಉದ್ಘಾಟಿಸಿದ ನಂತರ ಗಡಿ ವಿವಾದ ಮುನ್ನೆಲೆಗೆ ಬಂದಿತ್ತು. ಈ ಪ್ರಾಂತ್ಯ ತಮಗೆ ಸೇರಿದ್ದು ಎಂಬುದು ನೇಪಾಳ ಸರ್ಕಾರದ ವಾದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT