ಪಿಟೀಲು ವಾದಕ ಕೃಷ್ಣನ್ 
ದೇಶ

ಖ್ಯಾತ ಪಿಟೀಲು ವಾದಕ ಟಿಎನ್ ಕೃಷ್ಣನ್ ನಿಧನ; ಪ್ರಧಾನಿ ಮೋದಿ ಸಂತಾಪ

ಸುಪ್ರಸಿದ್ಧ ಪಿಟೀಲು ವಾದಕ ಟಿಎನ್ ಕೃಷ್ಣನ್ ನಿಧನರಾಗಿದ್ದು, ಅವರ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

ಚೆನ್ನೈ: ಸುಪ್ರಸಿದ್ಧ ಪಿಟೀಲು ವಾದಕ ಟಿಎನ್ ಕೃಷ್ಣನ್ ನಿಧನರಾಗಿದ್ದು, ಅವರ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

ಚೆನ್ನೈ ನಿವಾಸದಲ್ಲಿ ಟಿಎನ್ ಕೃಷ್ಣನ್ ಅವರು ನಿಧನರಾಗಿದ್ದು, ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಇಂದು ತಮ್ಮ ದೇಹತ್ಯಾಗ ಮಾಡಿದ್ದಾರೆ. 

ಇನ್ನು ಕೃಷ್ಣನ್ ಅವರ ಸಾವಿಗೆ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದು, ಈ ಬಗ್ಗೆ ಟ್ವೀಟ್ ಮೂಲಕ ಅಶ್ರುತರ್ಪಣ ಸಮರ್ಪಿಸಿದ್ದಾರೆ. 'ಖ್ಯಾತ ಪಿಟೀಲು ವಾದಕ ಶ್ರೀ ಟಿ.ಎನ್.ಕೃಷ್ಣನ್ ಅವರ ನಿಧನವು ಸಂಗೀತ ಜಗತ್ತಿನಲ್ಲಿ ದೊಡ್ಡ ನಷ್ಟವನ್ನುಂಟು ಮಾಡಿದೆ. ಅವರು ತಮ್ಮ ವಾದನದ ಮೂಲಕವೇ ನಮ್ಮ ಸಂಸ್ಕೃತಿಯ  ವ್ಯಾಪಕವಾದ ಭಾವನೆಗಳನ್ನು ಮತ್ತು ಎಳೆಗಳನ್ನು ಸುಂದರವಾಗಿ ಬಿಡಿಸಿದ್ದರು. ಅವರು ಯುವ ಸಂಗೀತಗಾರರಿಗೆ ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಅವರ ಸಾವಿನ ನೋವು ತಡೆಯುವ ಶಕ್ತಿ ದೊರೆಯಲಿ ಎಂದು ಮೋದಿ ಸಂತಾಪ ಸೂಚಿಸಿದ್ದಾರೆ. 

ಕೃಷ್ಣನ್ ಅವರು ಕೇರಳದ ತ್ರಿಪುನಿಥುರಾದಲ್ಲಿ ಜನಿಸಿದ್ದರು. ಅವರ ತಂದೆ ಎ.ನಾರಾಯಣ ಅಯ್ಯರ್ ಮತ್ತು ತಾಯಿ ಅಮ್ಮಿನಿ ಅಮ್ಮಲ್. ಕೃಷ್ಣನ್  ಅವರು ತಮ್ಮ ತಂದೆಯಿಂದ ಸಂಗೀತವನ್ನು ಕಲಿತರು ಮತ್ತು ನಂತರ ಅಲೆಪ್ಪಿ ಕೆ.ಪರ್ಥಸಾರಥಿ ಅವರು ಸಂಗೀತದ ಶ್ರೇಷ್ಠ ಪೋಷಕ ಮತ್ತು ಅರಿಯಕುಡಿ ರಾಮಾನುಜ  ಅಯ್ಯಂಗಾರ್ ಅವರ ಶಿಷ್ಯರಿಂದ ಮಾರ್ಗದರ್ಶನ ಪಡೆದರು ಮತ್ತು ನಂತರ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರೊಂದಿಗೆ ಸೇರಿದರು.

ಚೆನ್ನೈನ ಸಂಗೀತ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿದ್ದ ಅವರು ನಂತರ ದೆಹಲಿ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲೆಗಳ ಶಾಲೆಯ ಡೀನ್  ಆಗಿದ್ದರು.ಟಿ.ಎನ್.ಕೃಷ್ಣನ್ ಅವರು ಕಮಲಾ ಕೃಷ್ಣನ್ ಅವರನ್ನು ವಿವಾಹವಾದರು ಮತ್ತು ವಿಜಿ ಕೃಷ್ಣನ್ ನಟರಾಜನ್ ಮತ್ತು ಶ್ರೀರಾಮ್ ಕೃಷ್ಣನ್ ಎಂಬ ಇಬ್ಬರು ಮಕ್ಕಳಿದ್ದಾರೆ. ವಿಜಿ ಕೃಷ್ಣನ್ ನಟರಾಜನ್ ಮತ್ತು ಶ್ರೀರಾಮ್ ಕೃಷ್ಣನ್ ಇಬ್ಬರೂ ಪ್ರಸಿದ್ಧ ಪಿಟೀಲು ವಾದಕರು ಮತ್ತು ಅವರ ತಂದೆಯ ಹೆಜ್ಜೆಗಳನ್ನು  ಅನುಸರಿಸುತ್ತಾರೆ. ಟಿ ಎನ್ ಕೃಷ್ಣನ್ ಅವರ ಸಹೋದರಿ ಎನ್.ರಾಜಮ್ ಹಿಂದೂಸ್ಥಾನಿ ಸಂಪ್ರದಾಯದ ಪ್ರಸಿದ್ಧ ಪಿಟೀಲು ವಾದಕಿಯಾಗಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT