ದೇಶ

ಪಶ್ಚಿಮ ಬಂಗಾಳ: ಪಕ್ಷದ ಕಾರ್ಯಕರ್ತರ ಸಾವು ಪ್ರತಿಭಟಿಸಿ 12 ಗಂಟೆ ಬಂದ್ ಗೆ ಬಿಜೆಪಿ ಕರೆ

Nagaraja AB

ಕೊಲ್ಕತ್ತಾ: ಪಕ್ಷದ ಕಾರ್ಯಕರ್ತರ ಮೇಲಿನ ಹಲ್ಲೆ, ಸಾವನ್ನು ಪ್ರತಿಭಟಿಸಿ ರಾಜ್ಯ ಬಿಜೆಪಿಯಿಂದ 12 ಗಂಟೆಗಳ ಕಾಲ ಬಂದ್ ಗೆ ಕರೆ ನೀಡಲಾಗಿದೆ. ಕೋಚ್ ಬೆಹಾರ್ ನಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆದು ಸಾವನ್ನಪ್ಪಿದ ನಂತರ ಈ ಬಂದ್ ನಡೆಸಲಾಗುತ್ತಿದೆ. 

ಬೆಳಂಬೆಳಿಗ್ಗೆ ರಸ್ತೆಗಿಳಿದ ಬಿಜೆಪಿ ಕಾರ್ಯಕರ್ತರು, ಟೈರುಗಳಿಗೆ ಬೆಂಕಿ ಹಚ್ಚಿ ಟಿಎಂಸಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಕ್ಷದ ಕಾರ್ಯಕರ್ತರನ್ನು ನಿರಂತರವಾಗಿ ಟಿಎಂಸಿ ಪಕ್ಷದವರು ಹತ್ಯೆ ಮಾಡುತ್ತಿದ್ದರೂ ಪೊಲೀಸರು ಏನನ್ನು ಮಾಡುತ್ತಿಲ್ಲ. ಇಂತಹ ಹತ್ಯೆಗಳನ್ನು ಪ್ರತಿಭಟಿಸಿ ಇಂದು ಬಂದ್ ನಡೆಸಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

SCROLL FOR NEXT