ವಿಡಿಯೋ ರೆನ್ಸ್ ಮೂಲಕ ಸಂಸದರ ಬಹುಮಹಡಿ ಫ್ಲ್ಯಾಟ್‌ಗಳ ಉದ್ಘಾಟಿಸಿದ ಪ್ರಧಾನಿ ಮೋದಿ 
ದೇಶ

ಸಂಸದರಿಗಾಗಿ ಬಹುಮಹಡಿ ಫ್ಲ್ಯಾಟ್‌ಗಳ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿಯಲ್ಲಿ ಸಂಸದರಿಗೆ ನಿರ್ಮಾಣಗೊಂಡಿರುವ ಬಹು ಮಹಡಿಯ ಫ್ಲ್ಯಾಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ್ದಾರೆ. 

ನವದೆಹಲಿ: ನವದೆಹಲಿಯಲ್ಲಿ ಸಂಸದರಿಗೆ ನಿರ್ಮಾಣಗೊಂಡಿರುವ ಬಹು ಮಹಡಿಯ ಫ್ಲ್ಯಾಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ್ದಾರೆ. 

ಬಹು ಮಹಡಿಯ ಫ್ಲ್ಯಾಟ್‌ಗಳ ಉದ್ಘಾಟನೆ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಉಪಸ್ಥಿತರಿದ್ದರು. 

ಬಹುಮಹಡಿ ಫ್ಲ್ಯಾಟ್'ಗಳ ಉದ್ಘಾಟನೆ ಬಳಿಕ ಮಾತನಾಡಿರುವ ಮೋದಿಯವರು, ಸಂಸದರ ವಸತಿಯ ಬಹು ಸಮಯದ ಸಮಸ್ಯೆ ಈಗ ಪರಿಹಾರಗೊಂಡಿದೆ. ದಶಕಗಳ ಹಿಂದಿನ ಸಮಸ್ಯೆಗಳು ನಿರ್ಲಕ್ಷ್ಯಿಸುವುದರಿಂದಲ್ಲ, ಪರಿಹಾರ ಕಂಡುಕೊಳ್ಳುವುದರಿಂದ ಬಗೆಹರಿಯುತ್ತವೆ ಎಂದರು.

ಜೊತೆಗೆ, ದೆಹಲಿಯಲ್ಲಿ ಹಲವು ವರ್ಷಗಳಿಂದ ಬಾಕಿ ಇರುವ ಯೋಜನೆಗಳ ಪಟ್ಟಿ ನೀಡಿದ ಮೋದಿ, ಸರ್ಕಾರ ಅವುಗಳ ಕಾಮಕಾರಿಯನ್ನು ಕೈಗೆತ್ತಿಕೊಂಡಿದ್ದು, ನಿಗದಿತ ಅವಧಿಯಲ್ಲಿ ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಈ ಫ್ಲ್ಯಾಟ್‌ಗಳು ನವದೆಹಲಿಯ ಡಾ ಬಿ ಡಿ ಮಾರ್ಗದಲ್ಲಿವೆ. 80 ವರ್ಷಗಳಿಗಿಂತ ಹಳೆಯದಾದ ಎಂಟು ಹಳೆಯ ಬಂಗಲೆಗಳನ್ನು 76 ಫ್ಲ್ಯಾಟ್‌ಗಳನ್ನು ನಿರ್ಮಿಸಲು ಪುನರಾಭಿವೃದ್ಧಿ ಮಾಡಲಾಗಿದೆ.

ಈ ಫ್ಲ್ಯಾಟ್‌ಗಳ ನಿರ್ಮಾಣವು ಮಂಜೂರಾದ ವೆಚ್ಚಕ್ಕಿಂತಲೂ ಶೇಕಡಾ 14 ರಷ್ಟು ಉಳಿತಾಯದೊಂದಿಗೆ ಪೂರ್ಣಗೊಂಡಿದ್ದು, ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಸಮಯ ವ್ಯರ್ಥಗೊಳ್ಳದೆ, ನಿಗದಿತ ಸಮಯದಲ್ಲಿಯೇ ನಿರ್ಮಾಣಗೊಂಡಿದೆ ಎಂದು ಪ್ರಧಾನಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. 

ನಿರ್ಮಾಣವಾಗಿರುವ ಕಟ್ಟಡಗಲ್ಲಿ ಪರಿಸರ ರಕ್ಷಣೆಯ ಹಲವು ಉಪಕ್ರಮಗಳಿಂದ ನಿರ್ಮಾಣ ಮಾಡಲಾಗಿದೆ. ಕಡಿಮೆ ವಿದ್ಯುತ್ ಬಳಕೆಗಾಗಿ ವಿಆರ್'ವಿ ವ್ಯವಸ್ಥೆ, ನೀರಿನ ಕಡಿಮೆ ಬಳಕೆಗಾಗಿ ಹಲವು ವ್ಯವಸ್ಥೆಗಳು, ಮಳ ನೀರು ಕೊಯ್ಲು ವ್ಯವಸ್ಥೆ, ಸೌರ ಸ್ಥಾಪರಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

SCROLL FOR NEXT