ಶಬ್ದಾತೀತ ಪರಮಾಣು ಸಾಮರ್ಥ್ಯದ ಕ್ಷಿಪಣಿ 'ಶೌರ್ಯ' 
ದೇಶ

ಶಬ್ದಾತೀತ ಪರಮಾಣು ಸಾಮರ್ಥ್ಯದ ಕ್ಷಿಪಣಿ 'ಶೌರ್ಯ' ಉಡಾವಣೆ ಯಶಸ್ವಿ 

ಭಾರತದ ಅತ್ಯಾಧುನಿಕ ಪರಮಾಣು ಸಾಮರ್ಥ್ಯದ  "ಶೌರ್ಯ" ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. 

ಒಡಿಶಾ: ಭಾರತದ ಅತ್ಯಾಧುನಿಕ ಪರಮಾಣು ಸಾಮರ್ಥ್ಯದ  "ಶೌರ್ಯ" ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. 

ಒಡಿಶಾದ  ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಪರೀಕ್ಷಾರ್ಥ ಉಡಾವಣೆಯನ್ನು ಮಧ್ಯಾಹ್ನ 12:10ಕ್ಕೆ ನಡೆಸಲಾಯಿತು. ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ನೆಗೆಯುವ ಸಾಮರ್ಥ್ಯವಿರುವ ಮಧ್ಯಮ ಶ್ರೇಣಿಯ ಹೈಬ್ರಿಡ್ ಕ್ಷಿಪಣಿ ಇದಾಗಿದೆ. 

ಬಹುಉಪಯೋಗಿ ಅತ್ಯಾಧುನಿಕ ಕಂಪ್ಯೂಟಿಂಗ್ ಟೆಕ್ನಾಲಜಿಯೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಈ ಕ್ಷಿಪಣಿ ಅತ್ಯಂತ ನಿಖರವಾದ ಸಂಚಾರ ಸಾಮರ್ಥ್ಯ, ಪರಿಣಾಮಕಾರಿ ಪ್ರೊಪಲ್ಷನ್, ಅತ್ಯಾಧುನಿಕ ನಿಯಂತ್ರಣ ಮತ್ತು ಮಾರ್ಗದರ್ಶನ ವ್ಯವಸ್ಥೆಗಳು ಹೊಂದಿದೆ, ಈ ಮಿಷನ್ ಮಾದರಿಯಾಗುವಂತಹ ಸಾಧನೆಯಾಗಿದೆ ಎಂದು ಭಾರತೀಯ ರಕ್ಷಣಾ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. 

ಉಡಾವಣೆಗೊಂಡ ಕ್ಷಿಪಣಿಯ ಮೇಲೆ ಅತ್ಯಾಧುನಿಕ ರಡಾರ್ ಗಳ ಇಂಟಿಗ್ರೇಟೆಡ್ ಸಿಸ್ಟಮ್ ಮೂಲಕ ನಿಗಾ ವಹಿಸಲಾಗಿತ್ತು. ಈ ಶ್ರೇಣಿಯಲ್ಲಿ ಈಗ ಭಾರತ ಉಡಾವಣೆ ಮಾಡಿರುವ ಕ್ಷಿಪಣಿ ವಿಶ್ವದ ಟಾಪ್-10 ಕ್ಷಿಪಣಿಗಳ ಸಾಲಿಗೆ ಸೇರಲಿದ್ದು ಭಾರತದ ಬತ್ತಳಿಕೆಗೆ ಮತ್ತಷ್ಟು ಬಲ ತುಂಬಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT