ನೀಲೇಶ್ವರದ ಮಾದರಿ ಆಟೋಚಾಲಕರು 
ದೇಶ

ಕಾಸರಗೋಡು: ಆಟೋ ಚಾಲಕರ ಮಾನವೀಯ ಗುಣ, ಎರಡು ತಿಂಗಳಲ್ಲಿ 200 ಕೋವಿಡ್ ರೋಗಿಗಳ ರವಾನೆ

ಕಳೆದ ಎರಡು ತಿಂಗಳುಗಳಿಂದ ಕೋವಿಡ್ ರೋಗಿಗಳನ್ನು ಪರೀಕ್ಷಾ ಕೇಂದ್ರ ಹಾಗೂ ಪ್ರಥಮ ದರ್ಜೆಯ ಚಿಕಿತ್ಸಾ ಕೇಂದ್ರಗಳಿಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗಳಂತಹ ಆಟೋರಿಕ್ಷಾಗಳನ್ನು ಚಲಾಯಿಸುವ ಮೂಲಕ ಎರಡು ತಿಂಗಳಲ್ಲಿ ಕನಿಷ್ಠ 200 ರೋಗಿಗಳನ್ನು ಚಿಕಿತ್ಸೆಗೂ, ಪರೀಕ್ಷೆಗೆ ತಲುಪಿಸಿದ ಇಬ್ಬರು ಆಟೋಚಾಲಕರು ತಮ್ಮ ಮಾದರಿ ಸೇವೆಯಿಂದಾಗಿ ಜನಮೆಚ್ಚುಗೆಗೆ ಪಾತ್ರವಾಗಿದ್ದಾರೆ. 

ಕಾಸರಗೋಡು: ಕಳೆದ ಎರಡು ತಿಂಗಳುಗಳಿಂದ ಕೋವಿಡ್ ರೋಗಿಗಳನ್ನು ಪರೀಕ್ಷಾ ಕೇಂದ್ರ ಹಾಗೂ ಪ್ರಥಮ ದರ್ಜೆಯ ಚಿಕಿತ್ಸಾ ಕೇಂದ್ರಗಳಿಗೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗಳಂತಹ ಆಟೋರಿಕ್ಷಾಗಳನ್ನು ಚಲಾಯಿಸುವ ಮೂಲಕ ಎರಡು ತಿಂಗಳಲ್ಲಿ ಕನಿಷ್ಠ 200 ರೋಗಿಗಳನ್ನು ಚಿಕಿತ್ಸೆಗೂ, ಪರೀಕ್ಷೆಗೆ ತಲುಪಿಸಿದ ಇಬ್ಬರು ಆಟೋಚಾಲಕರು ತಮ್ಮ ಮಾದರಿ ಸೇವೆಯಿಂದಾಗಿ ಜನಮೆಚ್ಚುಗೆಗೆ ಪಾತ್ರವಾಗಿದ್ದಾರೆ. 

ಕಾಸರಗೋಡಿನ ನೀಲೇಶ್ವರದಲ್ಲಿನ  ಹರೀಶ್ ಕರುವಚೆರಿ(47) ಮತ್ತು ಮಾಯಿಲ್ ರತೀಶ್ (42) ಈ ಮಾದರಿ ಆಟೋ ಚಾಲಕರಾಗಿದ್ದಾರೆ.

"ನಾವು ಯಾವುದೇ ಆಂಬ್ಯುಲೆನ್ಸ್ ಸೇವೆ ನೀಡುತ್ತಿಲ್ಲ. ನೀಲೇಶ್ವರದಲ್ಲಿ  ಆಂಬ್ಯುಲೆನ್ಸ್‌ಗಳ ತೀವ್ರ ಕೊರತೆ ಇರುವುದರಿಂದ ನಾವು ರೋಗಲಕ್ಷಣವಿಲ್ಲದ ರೋಗಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಅಥವಾ ಪ್ರಥಮ ದರ್ಜೆಯ  ಚಿಕಿತ್ಸಾ ಕೇಂದ್ರಗಳಿಗೆ ಕರೆದೊಯ್ಯುತ್ತಿದ್ದೇವೆ ”ಎಂದು ಹರೀಶ್ ಹೇಳಿದರು. ಆದರೂ, ಅವರು ಮಾಡುತ್ತಿರುವ ಈ ಕಾರ್ಯ ಅವರನ್ನು ಅಪರೂಪದ ವ್ಯಕ್ತಿಯನ್ನಾಗಿಸಿದೆ.ಈ ಅವಧಿಯಲ್ಲಿ, ಇವರಿಬ್ಬರು ಕೋವಿಡ್‌ಗಾಗಿ ಎರಡು ಬಾರಿ ಪರೀಕ್ಷೆಗೆ ಒಳಗಾಗಿದ್ದಾರೆ. ಅಲ್ಲದೆ ಅವರಿಗೆ ನೆಗೆಟಿವ್ ವರದಿ ಬಂದಿದೆ. . 108 ಆಂಬ್ಯುಲೆನ್ಸ್ ಸೇವೆಗಳು ಹೆಚ್ಚುತ್ತಿರುವ ಕೋವಿಡ್ ರೋಗಿಗಳು ಮತ್ತು ಶಂಕಿತರ ಸಂಖ್ಯೆಯೊಂದಿಗೆ ಹೊಂದಿಕೊಳ್ಳಲಾಗದೆ ಸಮಸ್ಯೆಯಾದಾಗ ಆಗಸ್ಟ್ ತಿಂಗಳಲ್ಲಿ  ಹರೀಶ್ ಮತ್ತು ರತೀಶ್ ರೋಗಿಗಳನ್ನು ಕರೆದೊಯ್ಯುವ ಕೆಲಸವನ್ನು ನಿರ್ವಹಿಸಲು ನೀಲೇಶ್ವರ ತಾಲ್ಲೂಕು ಆಸ್ಪತ್ರೆ ಕೇಳಿದೆ

ಹರೀಶ್ ಅವರ ಮಾನವೀಯ ಗುಣದ ಬಗ್ಗೆ ಅರಿವಿದ್ದ ಜಿಲ್ಲಾ ಕೋವಿಡ್ ಕಣ್ಗಾವಲು ನೋಡಲ್ ಅಧಿಕಾರಿ ಡಾ.ವಿ.ಸುರೇಶನ್ ಅವರು ಆಸ್ಪತ್ರೆಯ ಅಧೀಕ್ಷಕ ಡಾ.ಜಮಾಲ್ ಅಹ್ಮದ್ ಮತ್ತು ಆರೋಗ್ಯ ನಿರೀಕ್ಷಕ ರಾಜೇಶ್ ತೀರ್ಥಂಕರ ಅವರೊಂದಿಗೆ ಈ ವಿಚಾರವನ್ನು ಚರ್ಚಿಸಿದ್ದಾರೆ. ಇದಕ್ಕೆ ಒಪ್ಪಿಗೆ ದೊರೆತ ಮೇಲೆ . “ಒಂದು ದಿನ ಪಾಸಿಟಿವ್ ಇದ್ದ . ರೋಗಿಯನ್ನು ತಾಲ್ಲೂಕು ಆಸ್ಪತ್ರೆಗೆ ಕರೆತರಬೇಕಾಗಿತ್ತು ಮತ್ತು ಯಾರೂ ಅವರನ್ನುತಮ್ಮ ವಾಹನಕ್ಕೆ ಹತ್ತಿಸಿಕೊಳ್ಳಲು  ಸಿದ್ಧರಿರಲಿಲ್ಲ. ನಾನು ಹರೀಶ್‌ಗೆ ಕರೆ ಮಾಡಿದೆ. ವರು  ತಕ್ಷಣ ಒಪ್ಪಿಕೊಂಡರು"ಡಾ.ಸುರೇಶನ್ ಹೇಳಿದರು.

ಆ ನಂತರದಲ್ಲಿ ಹರೀಶ್ ಈ ಕೆಲಸಕ್ಕಾಗಿ ರತೀಶ್ ಅವರನ್ನೂ ಸೇರಿಸಿಕೊಂಡರು.  ಈಗ ಅವರು ಒಟ್ಟಾಗಿ ಕೆಲಸ ಮಾಡುತ್ತಾರೆ. ತಾಲ್ಲೂಕು ಆಸ್ಪತ್ರೆ ಅವರಿಗೆ ಮಾಸ್ಕ್ ಗಳು, ಗ್ಲೌಸ್, ಸ್ಯಾನಿಟೈಸರ್, ಶಾಂಪೂ ಮತ್ತು ಸ್ಪ್ರೇ ಗನ್‌ಗಳನ್ನು ನೀಡಿದೆ. ಅವರು ಪಿಪಿಇ ಕಿಟ್ ಧರಿಸುವುದಿಲ್ಲ, ಆದರೆ ಅದು ಅಗತ್ಯವಿಲ್ಲ ಎಂದು ರತೀಶ್ ಹೇಳಿದರು.  “ಪ್ರಯಾಣಿಕರ ಕ್ಯಾಬಿನ್ ಮತ್ತು ಚಾಲಕನ ಆಸನವನ್ನು ಬೇರ್ಪಡಿಸುವ ಪಾರದರ್ಶಕ ಪ್ಲಾಸ್ಟಿಕ್ ಶೀಟ್ ಇದೆ,ನಾವು ಅವರೊಂದಿಗೆ ಎಂದಿಗೂ ಸಂಪರ್ಕಕ್ಕೆ ಬರುವುದಿಲ್ಲ, ”ಎಂದು ಅವರು ಹೇಳಿದರು. ಪ್ರತಿ ಪ್ರಯಾಣದ ನಂತರ , ಅವರು ಪ್ರಯಾಣಿಕರ ಕ್ಯಾಬಿನ್ ಅನ್ನು ಸೋಂಕುರಹಿತಗೊಳಿಸಲು ಆಸ್ಪತ್ರೆಯು ನೀಡಿದ ಹತ್ತಿಯಿಂದ ಸೀಟನ್ನು ಒರೆಸುತ್ತಾರೆ ಮತ್ತು ಸ್ಪ್ರೇ ಗನ್ ಅನ್ನು ಬಳಸುತ್ತಾರೆ.

"ನಾನು ಬಳಸಿದ ಗಾಜ್ ಅನ್ನು ಪ್ಲಾಸ್ಟಿಕ್ ಜಿಪ್ಲಾಕ್ ಕವರ್ನಲ್ಲಿ ಸಂಗ್ರಹಿಸುತ್ತೇನೆ ಮತ್ತು ನಾನು ಮನೆಗೆ ಹೋದಾಗ ಅವುಗಳನ್ನು ಸುಡುತ್ತೇನೆ" ಎಂದು ರತೀಶ್ ಹೇಳಿದರು. ಪ್ರತಿದಿನ, ಅವರು ಕೋವಿಡ್ ರೋಗಿಗಳನ್ನು ಅಥವಾ ಶಂಕಿತರನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲು ಕನಿಷ್ಠ ಆರರಿಂದ ಏಳು ಒನ್ ವೇ ಟ್ರಿಪ್ಮಾಡುತ್ತಾರೆ. “ಕೆಲವೊಮ್ಮೆ ನಾವು ಪ್ರಥಮ ದರ್ಜೆ  ಚಿಕಿತ್ಸಾ ಕೇಂದ್ರಗಳಿಂದ ನೆಗೆಟಿವ್ ವರದಿ ಬಂದ ರೋಗಿಗಳನ್ನೂ ಕರೆತರಬೇಕಿದೆ. ನಾವು ರೋಗಿಗಳನ್ನು ರಾವಣೇಶ್ವರನ್  ಮತ್ತು ಚೆರುವಾತೂರ್‌ನಂತಹ ದೂರದ ಸ್ಥಳಗಳಿಗೆ ತಲುಪಿಸಿದ್ದೇವೆ."ಎಂದು ಅವರು ಹೇಳಿದರು.

ಹರೀಶ್ ಮತ್ತು ರತೀಶ್ ಅವರು ಇತರ ಆಟೋರಿಕ್ಷಾ ಚಾಲಕರಿಗಿಂತ ಕಡಿಮೆ ಡೇಂಜರ್ ಹೊಂದಿದ್ದಾರೆ ಎಂದು ಅವರು ನಂಬುತ್ತಾರೆ. ನಮ್ಮ ಪ್ರಯಾಣಿಕರು ಕೋವಿಡ್ ರೋಗಿಗಳು ಅಥವಾ ಶಂಕಿತರು ಎಂದು ನಮಗೆ ತಿಳಿದಿದೆ ಮತ್ತು ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ಈಗ ಕೋವಿಡ್ ಎಷ್ಟು ವ್ಯಾಪಕವಾಗಿ ಹರಡಿದೆ ಎಂದರೆ ಯಾವುದೇ ಪ್ರಯಾಣಿಕರಿಗೆ ಸೋಂಕು ತಗಲುಲು ಸಾಧ್ಯವಾಗುತ್ತದೆ. ಆಟೋ ಡ್ರೈವರ್ ಅಥವಾ ಪ್ರಯಾಣಿಕರಿಗೆ ಅದರ ಅರಿವೇ ಬಾರದಿರಬಹುದು ”ಎಂದು ಕಳೆದ 12 ವರ್ಷಗಳಿಂದ ಆಟೋ ಚಾಲಕರಾಗಿರುವ  ರತೀಶ್ ಹೇಳಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಇಎಂಐ ಪಾವತಿಸಲು ಸಾಧ್ಯವಾಗದ ಕಾರಣ ಅವರು ಏಪ್ರಿಲ್ ನಲ್ಲಿ ತಮ್ಮದೇ ಆದ ಆಟೋರಿಕ್ಷಾವನ್ನು ಮಾರಾಟ ಮಾಡಬೇಕಾಯಿತು. ಈಗ ಅವನು ತನ್ನ ಸ್ನೇಹಿತನ ರಿಕ್ಷಾ ಓಡಿಸುತ್ತಿದ್ದಾರೆ.  ಕಳೆದ ವರ್ಷ ಹರಿಶ್ ಆಟೋರಿಕ್ಷಾ ಬೆಂಕಿಗಾಹುತಿಯಾದಾಗ ಅವರ ಸಹಪಾಠಿಗಳು ಹೊಸ ಆಟೋರಿಕ್ಷಾವನ್ನು ಉಡುಗೊರೆಯಾಗಿ ನೀಡಿದರು. 

ಇಬ್ಬರು ಆಟೋ ಚಾಲಕರು ರೋಗಿಗಳಿಂದ ನಿಯಮಿತ ಶುಲ್ಕವನ್ನು ಮಾತ್ರ ಪಡೆಯುತ್ತಾರೆ. “ನಮ್ಮ ಹೆಚ್ಚಿನ ರೋಗಿಗಳು ಬಡವರು. ಮತ್ತು ನಾವು  ವಿಶೇಷ ಸೇವೆಯನ್ನು ಮಾಡುತ್ತೇವೆಂದು ನಾವು ಭಾವಿಸುವುದಿಲ್ಲ. . ನಾವು ಪ್ರಯಾಣಿಕರನ್ನು ಸಾಗಿಸುತ್ತೇವೆ" ನೀಲೇಶ್ವರ ಸ್ ನಿಲ್ದಾಣದ ಬಳಿಯ ಆಟೋ ಸ್ಟ್ಯಾಂಡ್‌ನಲ್ಲಿ ಸಿಕ್ಕುವ ಹರೀಶ್ ಹೇಳಿದ್ದಾರೆ.ಶನಿವಾರ, ಅವರು ಕುಟುಂಬದ ಆರು ಮಂದಿಯನ್ನು ತಾಲ್ಲೂಕು ಆಸ್ಪತ್ರೆಯ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದು ಎರಡು ಪ್ರಯಾಣಕ್ಕೆ ಅವರು 400 ರು. ಪಡೆದಿದ್ದಾರೆ.. "ಒಂಬತ್ತು ಇತರ ಆಟೋರಿಕ್ಷಾ ಚಾಲಕರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ ನಂತರ ಅವರು ಹರೀಶ್ ಗೆ ಕರೆ ಮಾಡಿದ್ದಾರೆ. " ರತೀಶ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT