ದೇಶ

ಐಪಿಎಸ್ ಅಧಿಕಾರಿಗಳಿಗೆ ಯೋಗ, ಪ್ರಾಣಾಯಾಮದ ಸಲಹೆ ನೀಡಿದ ಪ್ರಧಾನಿ

Nagaraja AB

ನವದೆಹಲಿ: ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಐಪಿಎಸ್ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಯೋಗ, ಪ್ರಾಣಾಯಾಮ ಒಳ್ಳೆಯದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹೈದ್ರಾಬಾದಿನ ಸರ್ದಾರ್ ವಲ್ಲಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಪ್ರೊಬೆಷನರಿ ಐಪಿಎಸ್ ಅಧಿಕಾರಿಗಳನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ, ತರಬೇತಿ ಮುಗಿಸಿದ ಯುವ ಐಪಿಎಸ್ ಅಧಿಕಾರಿಗಳೊಂದಿಗೆ ದೆಹಲಿಯಲ್ಲಿ ಪ್ರತಿ ವರ್ಷ ಸಂವಾದ ನಡೆಸುತ್ತಿದೆ. ಆದರೆ, ಈ ಬಾರಿ  ಕೊರೋನಾ ಕಾರಣ ಸಂವಾದ ನಡೆಸಲು ಸಾಧ್ಯವಾಗಲಿಲ್ಲ, ಖಂಡಿತವಾಗಿಯೂ ಒಮ್ಮೆ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ ಎಂದರು.

ಮನಸ್ಸು ಇಟ್ಟು ಕೆಲಸ ಮಾಡಿದರೆ ಯಾವಾಗಲೂ ಲಾಭ ದೊರೆಯಲಿದೆ. ಎಷ್ಟೇ ಕೆಲಸ ಇದ್ದರೂ ನೀವು ಎಂದಿಗೂ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

SCROLL FOR NEXT