ದೇಶ

ದಾವೂದ್ ಇಬ್ರಾಹಿಂ ಕರೆ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸಕ್ಕೆ ಬಿಗಿ ಭದ್ರತೆ

Nagaraja AB

ಮುಂಬೈ: ಭೂಗತ ಪಾತಕಿ ದಾವೂದ್  ಇಬ್ರಾಹಿಂ ನಿಂದ ಎರಡು ಕರೆಗಳು ಬಂದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸಕ್ಕೆ  ಬಿಗಿ ಭದ್ರತೆ ಒದಗಿಸಲಾಗಿದೆ.

ಮುಖ್ಯಮಂತ್ರಿ ಜೊತೆಗೆ ಮಾತನಾಡಬೇಕು ಎಂದು ದಾವುದ್ ಇಬ್ರಾಹಿಂ ಎರಡು ಬಾರಿ ಕರೆ ಮಾಡಿದ ನಂತರ ಮುಂಜಾಗ್ರತಾ 
ಕ್ರಮವಾಗಿ ಉದ್ಧವ್ ಠಾಕ್ರೆ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.

SCROLL FOR NEXT