ಸಾಂದರ್ಭಿಕ ಚಿತ್ರ 
ದೇಶ

ಅರುಣಾಚಲ ಪ್ರದೇಶದಿಂದ ಕಾಣೆಯಾಗಿದ್ದ ಐವರನ್ನು ಭಾರತಕ್ಕೆ ಹಸ್ತಾಂತರಿಸಿ ಚೀನಾ ಸೇನೆ

ಚೀನಾ ಗಡಿಭಾಗದಲ್ಲಿ ಅರುಣಾಚಲ ಪ್ರದೇಶದ ಕುಗ್ರಾಮವೊಂದರ ಅರಣ್ಯ ಪ್ರದೇಶದಿಂದ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಐವರನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಭಾರತೀಯ ಸೇನೆಗೆ ಹಸ್ತಾಂತರಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಶಿಮ್ಲಾ: ಚೀನಾ ಗಡಿಭಾಗದಲ್ಲಿ ಅರುಣಾಚಲ ಪ್ರದೇಶದ ಕುಗ್ರಾಮವೊಂದರ ಅರಣ್ಯ ಪ್ರದೇಶದಿಂದ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಐವರನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಭಾರತೀಯ ಸೇನೆಗೆ ಹಸ್ತಾಂತರಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಚೀನಾದ ಪ್ರಾಂತ್ಯದಲ್ಲಿ ಇಂದು ವಶಪಡಿಸಿಕೊಂಡಿದ್ದ ಐವರು ಭಾರತೀಯರನ್ನು ಚೀನಾದ ಸೇನೆ ಹಸ್ತಾಂತರಿಸಿದೆ. ಕಳೆದ ಸೆಪ್ಟೆಂಬರ್ 1ರಂದು ಕಾಣೆಯಾಗಿದ್ದ ಅರುಣಾಚಲ ಪ್ರದೇಶದ ಐವರು ಬೇಟೆಗಾರರಾಗಿದ್ದರು ಎಂದು ಭಾರತೀಯ ಸೇನೆ ಹೇಳಿದೆ. ಈ ಸಂಬಂಧ ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಖಚಿತಪಡಿಸಿದ್ದರು.

ಆದರೆ ಸ್ಥಳೀಯರು ಮತ್ತು ಅವರ ಕುಟುಂಬಸ್ಥರು ಹೇಳುವ ಪ್ರಕಾರ ಐವರು ಕೂಲಿಯಾಳುಗಳು. ಬೇಟೆಯಾಡಲು ಹೋಗಿ ಗಡಿ ವಾಸ್ತವ ರೇಖೆನ್ನು ದಾಟಿ ಸುಬನ್ಸಿರಿ ಎಂಬಲ್ಲಿ ಚೀನಾದ ಪ್ರಾಂತ್ಯದೊಳಗೆ ನುಗ್ಗಿದ್ದರು ಎಂಬ ಆರೋಪದ ಮಲೆ ಅವರನ್ನು ಚೀನಾದ ಸೇನೆ ಬಂಧಿಸಿ ಇರಿಸಿಕೊಂಡಿತ್ತು. ಐವರು ತಮ್ಮ ಬಳಿ ಇರುವುದಾಗಿ ಸೆಪ್ಟೆಂಬರ್ 8ರಂದು ಹೇಳಿಕೊಂಡಿತ್ತು.

ನಂತರ ಐವರನ್ನು ವಾಪಸ್ ಪಡೆಯಲು ಭಾರತೀಯ ಸೇನೆ ಸತತ ಪ್ರಯತ್ನಪಟ್ಟಿತ್ತು. ಭಾರತೀಯ ಸೇನೆ, ಇಂಡೊ-ಟಿಬೆಟ್ ಗಡಿ ಭದ್ರತಾ ಪೊಲೀಸರು, ಸ್ಥಳೀಯರು, ಕೂಲಿಯಾಳುಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಗಳ ನೆರವಿನಿಂದ, ಲಾಂಗ್ ರೇಂಜ್ ಕಾವಲುಪಡೆಯಿಂದ ಭಾರತ ಮತ್ತು ಚೀನಾ ಗಡಿಯ ಮೆಕ್ ಮಹೊನ್ ಗಡಿಯ ಮೂಲಕ ಇಂದು ಹಸ್ತಾಂತರ ಮಾಡಲಾಯಿತು.

ಅರುಣಾಚಲ ಪ್ರದೇಶದ ಹಳ್ಳಿಗಳಲ್ಲಿ ಅರಣ್ಯ ಪ್ರದೇಶಗಳೊಳಗೆ ಇಲ್ಲಿನ ಸ್ಥಳೀಯರು ಗಿಡಮೂಲಿಕೆಗಳು ಮತ್ತು ಜಿಂಕೆಗಳ ಬೇಟೆಗಾಗಿ ಕಾಡಿಗೆ ಹೋಗುತ್ತಾರೆ. ಜಿಂಕೆ ಚರ್ಮ ಮತ್ತು ಗಿಡಮೂಲಿಕೆಗಳಿಗೆ ಅಂತಾರಾಷ್ಟ್ರೀಯ ಬೂದು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ.
ಭಾರತ ಮತ್ತು ಚೀನಾ ಪೂರ್ವ ಲಡಾಕ್ ನಲ್ಲಿ ಗಡಿ ಸಂಘರ್ಷ ಹೊಂದಿದ್ದು ಗಲ್ವಾನ್ ಕಣಿವೆಯಿಂದ ಸೇನಾಪಡೆ ನಿಯೋಜನೆ ಹಿಂಪಡೆಯಲು ಮಾತುಕತೆಗಳು ನಡೆಯುತ್ತಲೇ ಇವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕುರ್ಚಿ ಕದನಕ್ಕೆ ಬಿಗ್ ಟ್ವಿಸ್ಟ್‌; ಈ ಬಾರಿಯೂ ನಾನೇ ಬಜೆಟ್ ಮಂಡಿಸುತ್ತೇನೆ, ಸಿದ್ಧತೆ ಆರಂಭ: CM ಸಿದ್ದರಾಮಯ್ಯ

ಕೋಗಿಲು ತೆರವು: ಕೇವಲ 90 ಜನರಿಗೆ ಮಾತ್ರ ಮನೆ ಹಂಚಿಕೆ - ಸಚಿವ ಭೈರತಿ ಸುರೇಶ್

ಬಾಂಗ್ಲಾದೇಶದಲ್ಲಿ ಜೈಶಂಕರ್ ಹ್ಯಾಂಡ್ ಶೇಕ್: ಪಾಕ್ ವರದಿಗಳು ದೊಡ್ಡ "ಜೋಕ್" ಎಂದ ಮಾಜಿ ರಾಯಭಾರಿ!

ಇದು ಗಂಭೀರ ಪಾಪ, ನಿನ್ನ ಕೃತ್ಯಗಳಿಗೆ ಪಶ್ಚಾತ್ತಾಪ ಪಡುತ್ತೀಯಾ: ಮಹಾಕಾಳನ ದರ್ಶನ ಪಡೆದ ಮುಸ್ಲಿಂ ನಟಿ ವಿರುದ್ಧ ಮೌಲಾನ ಗರಂ!

ಕೋಗಿಲು ಅಕ್ರಮ ಮನೆಗಳ ತೆರವು ಪ್ರಕರಣ: ಪರಿಹಾರ ಕೋರಿ ಹೈಕೋರ್ಟ್​​ಗೆ ಪಿಐಎಲ್ ಸಲ್ಲಿಕೆ

SCROLL FOR NEXT