ದೇಶ

ಅಮಾನತುಗೊಂಡಿರುವ ಸಂಸದರಿಗಾಗಿ ಶರದ್ ಪವಾರ್ ಒಂದು ದಿನದ ಉಪವಾಸ

Shilpa D

ದೆಹಲಿ: ವಿವಾದಾತ್ಮಕ ಕೃಷಿ ಮಸೂದೆಗಳ ಮತದಾನದ ವೇಳೆ ಕೋಲಾಹಲ ಎಬ್ಬಿಸಿರುವುದಕ್ಕೆ ಅಮಾನತುಗೊಂಡಿರುವ ಎಂಟು ಸಂಸದರಿಗೆ ಬೆಂಬಲ ಸೂಚಿಸಿ  ಮಹಾರಾಷ್ಟ್ರದ ಹಿರಿಯ ನಾಯಕ ಶರದ್ ಪವಾರ್ ಒಂದು ದಿನದ ಉಪವಾಸ ಕುಳಿತಿದ್ದಾರೆ.

ಸಂಸದರ ವಿರುದ್ಧ ವಿಧಿಸಿರುವ ಅಮಾನತು ಆದೇಶವನ್ನು ಹಿಂಪಡೆಯುವತನಕ ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸದೇ ಇರಲು ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ನಿರ್ಧರಿಸಿವೆ.

ಪ್ರತಿಭಟನ ನಿರತ ಸದಸ್ಯರಿಗೆ ಬೆಂಬಲವಾಗಿ ನಾನು ಇಂದು ಏನೂ ಸೇವಿಸಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯ ಶರದ್ ಪವಾರ್ ತಿಳಿಸಿದ್ದಾರೆ. 

ನಾನು ಈ ರೀತಿ ಮಸೂದೆ ಅಂಗೀಕರಿಸುವುದನ್ನು ಈ ತನಕ ನೋಡಿಲ್ಲ, ಸರ್ಕಾರಕ್ಕೆ ನಿಜವಾಗಿಯೂ ರೈತರ ಬಗ್ಗೆ ಆಸಕ್ತಿ ಇದ್ದರೇ ರಫ್ತು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

SCROLL FOR NEXT