ವಿದೇಶಾಂಗ ಸಚಿವ ಎಸ್ .ಜೈಶಂಕರ್ 
ದೇಶ

ಭಾರತದ ಬಾಗಿಲು ಇತರ ದೇಶಗಳಿಗೆ ತೆರೆದೇ ಇದೆ- ಎಸ್‍ ಜೈಶಂಕರ್

ಇತರ ದೇಶಗಳಿಗೆ ಬಾಗಿಲು ಮುಚ್ಚುವುದಿಲ್ಲ ಎಂದಿರುವ ಭಾರತ, ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಎಲ್ಲ ದೇಶಗಳು ಸಮನಾಗಿ ಲಸಿಕೆಗಳನ್ನು ಪಡೆಯಲು ಜಾಗತಿಕ ನ್ಯಾಯಸಮ್ಮತ ಒಕ್ಕೂಟವನ್ನು ನಿರ್ಮಿಸಲು ಕರೆ ನೀಡಿದೆ.

ನವದೆಹಲಿ: ಇತರ ದೇಶಗಳಿಗೆ ಬಾಗಿಲು ಮುಚ್ಚುವುದಿಲ್ಲ ಎಂದಿರುವ ಭಾರತ, ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಎಲ್ಲ ದೇಶಗಳು ಸಮನಾಗಿ ಲಸಿಕೆಗಳನ್ನು ಪಡೆಯಲು ಜಾಗತಿಕ ನ್ಯಾಯಸಮ್ಮತ ಒಕ್ಕೂಟವನ್ನು ನಿರ್ಮಿಸಲು ಕರೆ ನೀಡಿದೆ.

ರಾಜಧಾನಿಯಲ್ಲಿ ಮಂಗಳವಾರ ವರ್ಚುವಲ್ ವೇದಿಕೆ ಮೂಲಕ ಆರಂಭವಾದ ಭೌಗೋಳಿಕ ರಾಜಕೀಯ ಮತ್ತು ಭೂ-ಭೌತಶಾಸ್ತ್ರದ ಕುರಿತ ಸರ್ಕಾರದ ಪ್ರಮುಖ ಸಮ್ಮೇಳನವಾದ ರೈಸಿನಾ ಸಂವಾದದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್,  ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು ಪ್ರಮುಖವಾಗಿದೆ. ಇಂದು ರಾಜತಾಂತ್ರಿಕತೆಯಲ್ಲಿ, ಒಳ್ಳೆಯದನ್ನು ಮಾಡುವುದು ಪ್ರಮುಖವೆನಿಸಿದೆ. ಭಾರತದ ಲಸಿಕೆ ಮೈತ್ರಿ ನೀತಿಯು ವಸುಧೈವ ಕುಟುಂಬಕಂನ  ದೊಡ್ಡ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತ, ಜನವರಿಯಿಂದ 80ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್‍-19 ಲಸಿಕೆಗಳನ್ನು ಪೂರೈಸಿದೆ. ಕೋವಿಡ್ -19 ಲಸಿಕೆಗಳನ್ನು ತಯಾರಿಸುವ ಭಾರತದ ಸಾಮರ್ಥ್ಯ ಜಾಗತಿಕ ಸಹಕಾರದ ಉದಾಹರಣೆಯಾಗಿದೆ. ಇದನ್ನು "ಏಕಮುಖ ರಸ್ತೆ" ಎಂದು ನೋಡಲಾಗುವುದಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT