ಆಕ್ಸಿಜನ್ ಸಾಗಣೆ (ಸಂಗ್ರಹ ಚಿತ್ರ) 
ದೇಶ

ಆಕ್ಸಿಜನ್, ಸಂಬಂಧಿಸಿದ ಉಪಕರಣ, ಔಷಧ ಆಮದು ಮೇಲೆ ಸೀಮಾ ಸುಂಕ ತಾತ್ಕಾಲಿಕ ರದ್ದುಗೊಳಿಸಿದ ಕೇಂದ್ರ

ದೇಶಾದ್ಯಂತ ಕೋವಿಡ್-19 ಹೆಚ್ಚಳದ ಪರಿಣಾಮ ಆಕ್ಸಿಜನ್ ಲಭ್ಯತೆ ಸೇರಿದಂತೆ ರೋಗಿಗಳ ಜೀವ ರಕ್ಷಕ ಉಪಕರಣ, ಔಷಧಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಪೂರೈಕೆಯನ್ನು ಖಾತರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಏ.24 ರಂದು ಹಲವಾರು ಕ್ರಮಗಳನ್ನು ಘೋಷಿಸಿದೆ. 

ನವದೆಹಲಿ: ದೇಶಾದ್ಯಂತ ಕೋವಿಡ್-19 ಹೆಚ್ಚಳದ ಪರಿಣಾಮ ಆಕ್ಸಿಜನ್ ಲಭ್ಯತೆ ಸೇರಿದಂತೆ ರೋಗಿಗಳ ಜೀವ ರಕ್ಷಕ ಉಪಕರಣ, ಔಷಧಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಪೂರೈಕೆಯನ್ನು ಖಾತರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಏ.24 ರಂದು ಹಲವಾರು ಕ್ರಮಗಳನ್ನು ಘೋಷಿಸಿದೆ. 

ಆಕ್ಸಿಜನ್ ಹಾಗೂ ಅದಕ್ಕೆ ಸಂಬಂಧಿಸಿದ ಉಪಕರಣಗಳು, ಔಷಧಗಳ ಮೇಲೆ ವಿಧಿಸಲಾಗುವ ಸೀಮಾ ಸುಂಕ, ಹಾಗೂ ಆರೋಗ್ಯ ಸೆಸ್ ನ್ನು ಮೂರು ತಿಂಗಳ ವರೆಗೆ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೋವಿಡ್-19 ಲಸಿಕೆ ಆಮದು ಮಾಡಿಕೊಳ್ಳುವುದಕ್ಕೂ ಮೂರು ತಿಂಗಳ ವರೆಗೆ ಈ ವಿನಾಯಿತಿ ಅನ್ವಯವಾಗಲಿದೆ. 

ಈ ಕ್ರಮಗಳಿಂದಾಗಿ ಅಗತ್ಯವಿರುವ ಆಕ್ಸಿಜನ್  ಹಾಗೂ ಸಂಬಂಧಿತ ಉಪಕರಣಗಳು, ಔಷಧಗಳ ಲಭ್ಯತೆ ಹೆಚ್ಚಳವಾಗುವುದರ ಜೊತೆಗೆ ಅಗ್ಗದ ದರದಲ್ಲಿ ಲಭ್ಯವಾಗುತ್ತವೆ. ಇದೇ ವೇಳೆ ಈ ಆದೇಶದ ವ್ಯಾಪ್ತಿಯಲ್ಲಿ ಬರುವ ಉಪಕರಣಗಳ ಕಸ್ಟಮ್ ಕ್ಲಿಯರೆನ್ಸ್ ತಡೆರಹಿತ ಮತ್ತು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. 

ಆಸ್ಪತ್ರೆ ಹಾಗೂ ಮನೆಗಳಲ್ಲಿ ಕೋವಿಡ್-19 ರೋಗಿಗಳು ಬಳಕೆ ಮಾಡುವ ವೈದ್ಯಕೀಯ ಉಪಕರಣಗಳ ಪೂರೈಕೆ, ವೈದ್ಯಕೀಯ ಶ್ರೇಣಿಯ ಆಕ್ಸಿಜನ್ ನ ಪೂರೈಕೆ ಹೆಚ್ಚಿಸುವ ತುರ್ತು ಅಗತ್ಯವಿದೆ, ಸಂಬಂಧಪಟ್ಟ ಸಚಿವಾಲಯಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಮೋದಿ ಹೇಳಿದ್ದಾರೆ. ರೆಮ್ಡಿಸಿವಿರ್ ಹಾಗೂ ಅದರ ಎಪಿಐ (ಸಕ್ರಿಯ ಔಷಧೀಯ ಘಟಕಾಂಶ)ಗಳ ಮೇಲಿನ ಮೂಲ ಸೀಮಾ ಸುಂಕಕ್ಕೆ ವಿನಾಯ್ತಿ ನೀಡಬೇಕೆಂದು ಮೋದಿ ಹೇಳಿದ್ದಾರೆ. 

ಯಾವುದಕ್ಕೆಲ್ಲಾ ವಿನಾಯಿತಿ? 

ವೈದ್ಯಕೀಯ ದರ್ಜೆ ಆಕ್ಸಿಜನ್ ಕಾನ್ಸಂಟ್ರೇಟರ್, ಫ್ಲೋ ಮೀಟರ್ , ರೆಗ್ಯುಲೇತರ್, ಕನೆಕ್ಟರ್, ಟ್ಯೂಬಿಂಗ್ ವ್ಯಾಕ್ಯೂಂ ಪ್ರೆಷರ್ ಸ್ವಿಂಗ್ ಅಲಾಬ್ಸರ್ಪ್ಷನ್ (ವಿಪಿಎಸ್ಎ) ಪ್ರೆಷರ್ ಸ್ವಿಂಗ್ ಅಬ್ಸಾರ್ಬ್ಷನ್ (ಪಿಎಸ್ಎ) ಆಕ್ಸಿಜನ್ ಘಟಕಗಳು, ಲಿಕ್ವಿಡ್/ ಅನಿಲ ಆಕ್ಸಿಜನ್ ನ್ನು ಉತ್ಪಾದಿಸುವ ಕ್ರಯೋಜನಿಕ್ ಆಕ್ಸಿಜನ್ ಏರ್ ಸಪರೇಷನ್ ಯುನಿಟ್ (ಎಎಸ್ ಯು) ಮುಂತಾದವುಗಳಿಗೆ ವಿನಾಯಿತಿ ಲಭ್ಯವಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ಮತ್ತು ಬಂಗಾಳ ಸೇರಿದಂತೆ 5 ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ!

ಎರಡೆರಡು ಅತ್ಯಾಚಾರ ಆರೋಪ: ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ RCB ವೇಗಿ ಯಶ್ ದಯಾಳ್!

ಕರ್ನಾಟಕ ಉಪ ಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಏಪ್ರಿಲ್ 9ರಂದು ಮತದಾನ, ಮೇ 4 ಫಲಿತಾಂಶ

T20 ವಿಶ್ವಕಪ್: ಸಂಜು ಸ್ಯಾಮ್ಸನ್ ಆರ್ಭಟಕ್ಕೆ "ದೇವರು" ಕಾರಣ; ಮದುವೆಯ ಭರಾಟೆಯಲ್ಲೂ ಟೀಂ ಇಂಡಿಯಾ ಮರೆಯದ God!

ಮಗುವಿನ ಪೋಷಣೆಗಾಗಿ ನಾನು ಯಾರ ಜೊತೆಗಾದರೂ ಮಲಗುತ್ತೇನೆ: ದೆಹಲಿಯ 'ವಡಾ ಪಾವ್ ಗರ್ಲ್' ಖ್ಯಾತಿಯ ಚಂದ್ರಿಕಾ ದೀಕ್ಷಿತ್

SCROLL FOR NEXT