ಯುವಕನಿಂದ ಆಕ್ಸಿಜನ್ ಕಸಿದುಕೊಂಡಿದ್ದ ಆರೋಪ: ಆರಕ್ಷಕನ ವಿರುದ್ಧ ತನಿಖೆಗೆ ಆದೇಶ 
ದೇಶ

ಯುವಕನಿಂದ ಆಕ್ಸಿಜನ್ ಕಸಿದುಕೊಂಡಿದ್ದ ಆರೋಪ: ಆರಕ್ಷಕನ ವಿರುದ್ಧ ತನಿಖೆಗೆ ಆದೇಶ

ಕೋವಿಡ್-19 ನಿಂದ ಬಳಲುತ್ತಿದ್ದ ತನ್ನ ತಾಯಿಗೆ ಆಕ್ಸಿಜನ್ ಸಿಲೆಂಡರ್ ಕೊಂಡೊಯ್ಯುತ್ತಿದ್ದ ಯುವಕನಿಂದ ಸಿಲೆಂಡರ್ ಕಸಿದುಕೊಂಡ ಆರೋಪದಲ್ಲಿ ಆರಕ್ಷಕನ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಆಗ್ರಾ: ಕೋವಿಡ್-19 ನಿಂದ ಬಳಲುತ್ತಿದ್ದ ತನ್ನ ತಾಯಿಗೆ ಆಕ್ಸಿಜನ್ ಸಿಲೆಂಡರ್ ಕೊಂಡೊಯ್ಯುತ್ತಿದ್ದ ಯುವಕನಿಂದ ಸಿಲೆಂಡರ್ ಕಸಿದುಕೊಂಡ ಆರೋಪದಲ್ಲಿ ಆರಕ್ಷಕನ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಯುವಕನಿಂದ ಒತ್ತಾಯಪೂರ್ವಕವಾಗಿ ಆಕ್ಸಿಜನ್ ಸಿಲೆಂಡರ್ ನ್ನು ಆರಕ್ಷಕ ಕಸಿದುಕೊಂಡು ಹೋಗಿದ್ದ. ಪೊಲೀಸ್ ಅಧಿಕಾರಿಗೆ ಆಕ್ಸಿಜನ್ ಸಿಲೆಂಡರ್ ನೀಡುವಂತೆ ಪಿಪಿಇ ಕಿಟ್ ಧರಿಸಿದ್ದ ಯುವಕ ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗತೊಡಗಿದೆ. 

ಆಕ್ಸಿಜನ್ ಸಿಗದೇ ಇದ್ದರೆ ನನ್ನ ತಾಯಿ ಸಾವನ್ನಪ್ಪುತ್ತಾರೆ ಎಂದು ಯುವಕ ಮನವಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದ್ದು ಆರಕ್ಷಕನ ಕಿರಾತಕ ನಡೆಗೆ ತೀವ್ರ ಟೀಕೆ ವ್ಯಕ್ತವಾಗಿದೆ. 

ಕೊನೆಗೂ ಆಕ್ಸಿಜನ್ ಸಿಗದೇ ಯುವಕನ ತಾಯಿ ಮೃತಪಟ್ಟಿದ್ದಾರೆ. ಯುವಕ ಅಂಶ್ ಗೋಯಲ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, "ವಿಐಪಿ ರೋಗಿಗಾಗಿ ಪೊಲೀಸರು ಕಸಿದುಕೊಂಡು ಹೋದರು. ನಮ್ಮ ತಾಯಿಗೆ ಆಕ್ಸಿಜನ್ ಲಭ್ಯವಾಗದೇ ಸಾವನ್ನಪ್ಪಿದ್ದಾರೆ" ಎಂದು ಹೇಳಿದ್ದಾರೆ. 

ಈ ಘಟನೆ ಬಗ್ಗೆ ಎಡಿಜಿ ರಾಜೀವ್ ಕೃಷ್ಣ ಮಾತನಾಡಿದ್ದು, "ತಪ್ಪಿತಸ್ಥ ಪೊಲೀಸ್ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದ್ದಾರೆ. 

ಆರೋಪ ಕೇಳಿಬಂದ ಪ್ರಾರಂಭದಲ್ಲಿ ಸ್ಥಳೀಯ ಪೊಲೀಸರು ಆರೋಪವನ್ನು ನಿರಾಕರಿಸಿ, ಅದು ಖಾಲಿ ಆಕ್ಸಿಜನ್ ಸಿಲೆಂಡರ್ ಗಳಾಗಿತ್ತು ಎಂದು ಸಮರ್ಥನೆ ನೀಡಿದ್ದಾರೆ. ಎಸ್ ಪಿ ಆರೋಪವನ್ನು ನಿರಾಕರಿಸಿದ್ದು, "ಆಕ್ಸಿಜನ್ ಸಿಲೆಂಡರ್ ನೀಡುವಂತೆ ಯುವಕ ಪೊಲೀಸ್ ಅಧಿಕಾರಿಗೆ ಮನವಿ ಮಾಡಿದರು. ಯಾರೂ ಸಿಲೆಂಡರ್ ನ್ನು ಕಸಿದಿಲ್ಲ, ವಿಡಿಯೋ ದಾರಿತಪ್ಪಿಸುವಂತಿದೆ ಎಂದು ಹೇಳಿದ್ದಾರೆ, ಆದರೆ ಖಾಲಿ ಸಿಲೆಂಡರ್ ನ್ನು ಪೊಲೀಸ್ ನವರು ಏಕೆ ಕಸಿದುಕೊಂಡರು ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!