ಕೊರೋನಾ 
ದೇಶ

ಆಗಸ್ಟ್ ತಿಂಗಳಲ್ಲಿ ಕೋವಿಡ್ 3 ನೇ ಅಲೆ, ಅಕ್ಟೋಬರ್ ನಲ್ಲಿ ತೀವ್ರ ಸಾಧ್ಯತೆ: ವರದಿ

ಭಾರತದಲ್ಲಿ ಕೊರೋನಾದ ಹೊಸ ರೂಪಾಂತರಿ ತಳಿ ಸೋಂಕು ಹರಡಲು ಪ್ರಾರಂಭವಾಗಿದ್ದು ಆಗಸ್ಟ್ ನಲ್ಲಿ ಪ್ರಸರಣ ಸಂಖ್ಯೆ ಏರಿಕೆ ಕಾಣಲಿದ್ದು ಅಕ್ಟೋಬರ್ ನಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದೆ.

ನವದೆಹಲಿ: ಭಾರತದಲ್ಲಿ ಕೊರೋನಾದ ಹೊಸ ರೂಪಾಂತರಿ ತಳಿ ಸೋಂಕು ಹರಡಲು ಪ್ರಾರಂಭವಾಗಿದ್ದು ಆಗಸ್ಟ್ ನಲ್ಲಿ ಪ್ರಸರಣ ಸಂಖ್ಯೆ ಏರಿಕೆ ಕಾಣಲಿದ್ದು ಅಕ್ಟೋಬರ್ ನಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇರುವುದನ್ನು ಗಣಿತದ ಮಾಡಲ್ ಆಧಾರದಲ್ಲಿ ಸಂಶೋಧಕರು ಅಂದಾಜಿಸಿದ್ದಾರೆ. 

ಈ ವರ್ಷದ 2ನೇ ಅಲೆ ಭೀಕರವಾಗಿರಲಿದೆ ಎಂಬುದನ್ನೂ ಈ ಸಂಶೋಧಕರು ಎಚ್ಚರಿಸಿದ್ದರು. ಹೈದರಾಬಾದ್ ನ ಐಐಟಿ ಹಾಗೂ ಕಾನ್ಪುರ ಐಐಟಿಯ ಮತ್ತುಕುಮ್ಮಲ್ಲಿ ವಿದ್ಯಾಸಾಗರ್,  ಮಣೀಂದ್ರ ಅಗರ್ವಾಲ್ ಗಣಿತ ಮಾಡಲ್ ನ ಆಧಾರದಲ್ಲಿ ಕೋವಿಡ್-19 3 ನೇ ಅಲೆಯ ಸಾಧ್ಯತೆಯನ್ನು ವಿಶ್ಲೇಶಿಸಿದ್ದು, ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು ಮೂರನೇ ಅಲೆಗೆ ಕಾರಣವಾಗಲಿದ್ದು ಅಕ್ಟೋಬರ್ ತಿಂಗಳಲ್ಲಿ ತೀವ್ರಗೊಳ್ಳಲಿದೆ ಎಂದು ಹೇಳಿದ್ದಾರೆ. 

ಕೊರೋನಾ ಹೆಚ್ಚಿರುವ ರಾಜ್ಯಗಳಾದ ಕೇರಳ, ಮಹಾರಾಷ್ಟ್ರಗಳಲ್ಲಿನ ಪರಿಸ್ಥಿತಿ ಕೋವಿಡ್-19 ಮೂರನೆ ಅಲೆಯ ಅಂದಾಜಿಗೆ ಸಿಗುತ್ತಿದೆ ಎಂದು ಹೇಳಿದ್ದಾರೆ. 

ಎರಡನೇ ಅಲೆಗಿಂತಲೂ ಈ ಅಲೆ ಸಣ್ಣದಾಗಿರಲಿದೆ. ಆದರೂ ಭಾರತ ಲಸಿಕೆ ಅಭಿಯಾನದ ವೇಗವನ್ನು ಹೆಚ್ಚಿಸಬೇಕಿದೆ, ಕಣ್ಗಾವಲು ವಿಧಾನಗಳನ್ನು ಹೆಚ್ಚಿಸಬೇಕಿದೆ, ಮುಂದೆ ಬರಬಹುದಾದ ಹೊಸ ತಳಿಗಳನ್ನು ಪತ್ತೆ ಮಾಡುವುದಕ್ಕೆ ಜಿನೋಮ್ ಸೀಕ್ವೆನ್ಸಿಂಗ್ ಮೂಲಕ ಜಾಗೃತವಾಗಿರಬೇಕಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 

ತಜ್ಞರ ಪ್ರಕಾರ ಡೆಲ್ಟಾ ರೂಪಾಂತರಿ ಕೊರೋನಾ ವೈರಸ್ ಸಿಡುಬು ಹರಡಿದಷ್ಟೇ ವೇಗವಾಗಿ ಹರಡುವ ಸಾಧ್ಯತೆ ಇದ್ದು ಲಸಿಕೆಯ ಮೂಲಕವೇ ನಿಯಂತ್ರಿಸಬೇಕೆಂದು ಸಲಹೆ ನೀಡಿದ್ದಾರೆ. 

ಭಾರತದಲ್ಲಿ ನಡೆದಿರುವ ಜೀನೋಮಿಕ್ ಕನ್ಸೋರ್ಟಿಯಂ ನ ಡೇಟಾದ ಪ್ರಕಾರ ಮೇ, ಜೂನ್, ಜುಲೈಗಳಲ್ಲಿನ ಕೋವಿಡ್-19 ಸೋಂಕು ಪ್ರಕರಣಗಳಲ್ಲಿ ಪ್ರತಿ 10 ಪ್ರಕರಣಗಳಲ್ಲಿ 8 ಪ್ರಕರಣಗಳು ಡೆಲ್ಟಾ ರೂಪಾಂತರಿಯಿಂದ ಹರಡುತ್ತಿತ್ತು ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT