ದೇಶ

ಹಾಡಹಗಲೇ ಆರು ಬಾರಿ ಚಾಕು ಇರಿದು ಯುವತಿಯನ್ನು ಕೊಂದ ಕಿರಾತಕ!

Nagaraja AB

ಗುಂಟೂರು: ಅಂತಿಮ ವರ್ಷದ ಇಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ 20 ವರ್ಷದ ಯುವತಿಗೆ ಹಾಡಹಗಲೇ ಅಪರಿಚಿತರು ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಹಳೆಯ ಗುಂಟೂರು ಪ್ರದೇಶದ ರಮ್ಯಾಶ್ರೀ ಚಾಕು ಇರಿತಕ್ಕೊಳಗಾಗಿ ಮೃತಪಟ್ಟ ಯುವತಿಯಾಗಿದ್ದಾರೆ. 

ಚೆಬ್ರೊಲಿನ ಸೆಂಟ್ ಮೇರಿಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತೃತೀಯ ವರ್ಷದ ಬಿ ಟೆಕ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ರಮ್ಯಾಶ್ರೀ ಟಿಫ್ಪಿನ್ ಮಾಡಲು ಪೆಡಕಕಾನಿ ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್ ನಲ್ಲಿ  ಅಪರಿಚಿತ ಯುವಕರು ಬೈಕ್ ನಲ್ಲಿ ಅಲ್ಲಿಗೆ ಬಂದಿದ್ದಾರೆ. ತನ್ನೊಂದಿಗೆ ಬರುವಂತೆ ವ್ಯಕ್ತಿಯೊಬ್ಬ ಕೇಳಿದ್ದು, ಅದನ್ನು ಆಕೆ ನಿರಾಕರಿಸಿದ್ದಾಳೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಹಠಾತ್ತನೆ ಹೊಟ್ಟೆ ಹಾಗೂ ಕುತ್ತಿಗೆಗೆ ಆರು ಸಲ ಚಾಕು ಇರಿದು ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ. ನಗರ ಎಸ್ ಪಿ ಅರಿಫ್ ಹಫೀಜ್ ನೇತೃತ್ವದ ಪೊಲೀಸರ ತಂಡವೊಂದು ಸ್ಥಳಕ್ಕೆ ಆಗಮಿಸಿ, ತನಿಖೆಯನ್ನು ಆರಂಭಿಸಿದೆ. 

ಚಾಕು ಇರಿತಕ್ಕೊಳಗಾದ ಯುವತಿ ಸಹೋದರಿ ಕೂಡಲೇ ಸ್ಥಳಕ್ಕೆ ಆಗಮಿಸಿ, ರಮ್ಯಾಶ್ರೀಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕೃಷಿಕರಾಗಿರುವ ರಮ್ಯಾಶ್ರೀ ತಂದೆ ಆಸ್ಪತ್ರೆಗೆ ಬರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು. ಕಾಲೇಜ್ ಆಗಲಿ ಅಥವಾ ಮನೆಯಲ್ಲಿ ಆಗಲೀ ರಮ್ಯಾಶ್ರೀಗೆ ಯಾವುದೇ ಕಿರುಕುಳ ಅಥವಾ ಇನ್ನಿತರ ಸಮಸ್ಯೆಗಳು ಆಗಿರಲಿಲ್ಲ ಎಂದು ಅವರ ತಂದೆ ಸುದ್ದಿಗಾರರಿಗೆ ತಿಳಿಸಿದರು.

 ಈ ಮಧ್ಯೆ ಪೊಲೀಸರು ಆಕೆಯ ಮೊಬೈಲ್ ವಶಕ್ಕೆ ಪಡೆದಿದ್ದು, ಕರೆಗಳ ವಿವರವನ್ನು ಕಲೆಹಾಕಿದ್ದು, ಕೆಲವೊಂದು ಸುಳಿವು ಲಭ್ಯವಾಗಿದೆ ಎಂದು ಡಿಎಸ್ ಪಿ ರಮಣ ಕುಮಾರ್ ತಿಳಿಸಿದ್ದಾರೆ.  ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತಂಡವೊಂದನ್ನು ರಚಿಸಲಾಗಿದ್ದು, ರಮ್ಯಾಶ್ರೀ ಅವರ ಸಂಬಂಧಿಕರು, ಸ್ನೇಹಿತರನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT