ಸಂಗ್ರಹ ಚಿತ್ರ 
ದೇಶ

2047ರ ಯುವ ಭಾರತೀಯರಿಗೆ ಪತ್ರ ಬರೆದ ರತನ್ ಟಾಟಾ 

2047ರಲ್ಲಿ ಭಾರತ 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತದೆ. ಆ ಪ್ರಯುಕ್ತ ಅಂದಿನವರಿಗೆ ರತನ್ ಟಾಟಾ ತಮ್ಮ ಈ ಮಾತುಗಳನ್ನು ಉಳಿಸಿದ್ದಾರೆ. 

ನವದೆಹಲಿ: ಟಾಟಾ ಸಂಸ್ಥೆಯ ಚೇರ್ ಮೆನ್ ರತನ್ ಟಾಟಾ ಅವರು 2047ರ ಯುವ ಭಾರತೀಯರಿಗೆ ಪತ್ರ ಬರೆದಿದ್ದಾರೆ. 2047ರಲ್ಲಿ ಭಾರತ 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತದೆ. ಆ ಪ್ರಯುಕ್ತ ಅಂದಿನವರಿಗೆ ರತನ್ ಟಾಟಾ ತಮ್ಮ ಈ ಮಾತುಗಳನ್ನು ಉಳಿಸಿದ್ದಾರೆ. 

2047ನೇ ಇಸವಿಯ ನನ್ನ ಯುವ ಮಿತ್ರರೇ,

ಭಾರತವನ್ನು ಇನ್ನೂ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಕಾಪಾಡಿಕೊಂಡಿರುವ ನಿಮ್ಮನ್ನು ನಾನು ಅಭಿನಂದಿಸಬಯಸುತ್ತೇನೆ. ಗಡಿ ಬಿಕ್ಕಟ್ಟುಗಳು, ಧಾರ್ಮಿಕ ವಿವಾದಗಳಿಂದ ಮುಕ್ತವಾದ ರಾಷ್ಟ್ರವನ್ನು ನಿರ್ಮಾಣ ಮಾಡಿದ್ದೀರಾ. ಮುಕ್ತವಾದ ವಾತಾವರಣ ನಿರ್ಮಾಣಗೊಂಡಿದೆಯೆಂದು ನಾನು ಆಶಿಸುತ್ತೇನೆ. 

ಭಾರತದ ಅಭಿವೃದ್ಧಿ, ಭಾರತೀಯರ ಹಿತಾಸಕ್ತಿಗಳನ್ನು ಗೌರವಿಸುವ ಸರ್ಕಾರಕ್ಕೆ ಮತ ಹಾಕುವುದರ ಮೂಲಕ ಜವಾಬ್ದಾರಿಯನ್ನು ನೀವು ತೋರಿರುವುದು ಶ್ಲಾಘನಾರ್ಹ.

ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಭಾರತ ಸದೃಢಗೊಂಡಿರುವುದಷ್ಟೇ ಅಲ್ಲದೆ ಮಹತ್ವಪೂರ್ಣ ಸ್ಥಾನವನ್ನು ಪಡೆದಿದೆ ಎಂದು ನಾನು ತಿಳಿಯುತ್ತೇನೆ. ಸರ್ಕಾರದ ದೂರದೃಷ್ಟಿತ್ವ ಉಳ್ಳ ಉತ್ತಮ ಆರ್ಥಿಕ ನೀತಿಗಳು ಜಾರಿಗೊಂಡಿರುತ್ತದೆ. ಭಾರತ ಸದೃಢಗೊಳ್ಳುವಲ್ಲಿ ಅದರ ಪಾತ್ರವೇ ಹಿರಿದು. 

ಎಲ್ಲಕ್ಕಿಂತ ಮಿಗಿಲಾಗಿ ರಾಷ್ಟ್ರದಲ್ಲಿ ಶಾಂತಿ ಮತ್ತು ಆರ್ಥಿಕ ಸದೃಢತೆ ತರುವ ಸರ್ಕಾರವನ್ನೇ ನನ್ನ ಯುವ ಮಿತ್ರರು ಬೆಂಬಲಿಸಿರುತ್ತಾರೆ. ಅದರಿಂದಾಗಿಯೇ ೨೦೪೭ರ ಭಾರತ ಜಗತ್ತಿನಲ್ಲಿಯೇ ತಲೆಯೆತ್ತಿ ನಿಂತಿದೆ.

- ರತನ್ ಟಾಟಾ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT