ವಿತ್ತ ಸಚಿವಾಲಯ 
ದೇಶ

ಫ್ರೆಂಚ್ ಕೋರ್ಟ್ ನಿಂದ ಯಾವುದೇ ಮಾಹಿತಿ ಬಂದಿಲ್ಲ: ಫ್ರಾನ್ಸ್ ನಲ್ಲಿ ಭಾರತದ ಆಸ್ತಿ ಮುಟ್ಟುಗೋಲು ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ

ಪ್ಯಾರಿಸ್ ನಲ್ಲಿ ಸುಮಾರು 20 ಭಾರತ ಸರ್ಕಾರದ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಫ್ರೆಂಚ್ ನ್ಯಾಯಾಲಯ ನೀಡಿರುವ ಆದೇಶದ ಕುರಿತು ತಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟನೆ ನೀಡಿದೆ.

ನವದೆಹಲಿ: ಪ್ಯಾರಿಸ್ ನಲ್ಲಿ ಸುಮಾರು 20 ಭಾರತ ಸರ್ಕಾರದ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಫ್ರೆಂಚ್ ನ್ಯಾಯಾಲಯ ನೀಡಿರುವ ಆದೇಶದ ಕುರಿತು ತಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟನೆ ನೀಡಿದೆ.

ಬ್ರಿಟನ್‌ನ ಕೈರ್ನ್ ಎನರ್ಜಿ ಪಿಎಲ್‌ಸಿ ಪಡೆದುಕೊಂಡ ಕೆಲವೇ ಗಂಟೆಗಳ ನಂತರ, ಭಾರತ ಸರ್ಕಾರದಿಂದ ಬರಬೇಕಾದ 1.7 ಬಿಲಿಯನ್ ಡಾಲರ್‌ನ ಒಂದು ಭಾಗವನ್ನು ಮರುಪಡೆಯಲು ಮಧ್ಯಸ್ಥಿಕೆ ಸಮಿತಿಯು ಹಿಂದಿನ ತೆರಿಗೆಯನ್ನು ವಿಧಿಸುವುದನ್ನು ರದ್ದುಪಡಿಸಿದೆ ಎಂದು ಮೋದಿ ಸರ್ಕಾರ ಗುರುವಾರ ತಿಳಿಸಿದೆ.  ಈ ನಿಟ್ಟಿನಲ್ಲಿ ಫ್ರೆಂಚ್ ನ್ಯಾಯಾಲಯದಿಂದ ಯಾವುದೇ ಸೂಚನೆ, ಆದೇಶ ಅಥವಾ ಸಂವಹನವನ್ನು ಸ್ವೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

"ಕೈರ್ನ್ ಎನರ್ಜಿ ಪ್ಯಾರಿಸ್ ನಲ್ಲಿ ಭಾರತ ಸರ್ಕಾರದ ಸರ್ಕಾರಿ ಸ್ವಾಮ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂಬ ವರದಿಗಳು ಬಂದಿವೆ. ಆದಾಗ್ಯೂ, ಭಾರತ ಸರ್ಕಾರ ಮಾತ್ರ ಯಾವುದೇ ಫ್ರೆಂಚ್ ನ್ಯಾಯಾಲಯದಿಂದ ಯಾವುದೇ ಸೂಚನೆ, ಆದೇಶ ಅಥವಾ ಸಂವಹನವನ್ನು ತಾವು ಸ್ವೀಕರಿಸಿಲ್ಲ ಎಂದು ಹಣಕಾಸು  ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಸರ್ಕಾರವು ಸತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ, ಅಂತಹ ಆದೇಶವನ್ನು ಪಡೆದಾಗಲೆಲ್ಲಾ, ಭಾರತದ ಹಿತಾಸಕ್ತಿಗಳನ್ನು ಕಾಪಾಡಲು ಸೂಕ್ತ ಸಲಹೆಗಾರರನ್ನು  ಫ್ರಾನ್ಸ್ ಸಲಹೆಗಾರರೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳಲಾಗುವುದು. ಈ ಹಿಂದೆ ಹೇಗ್ ಕೋರ್ಟ್ ಆಫ್ ಅಪೀಲ್‌ನಲ್ಲಿ ಡಿಸೆಂಬರ್ 2020 ರ  ಅಂತಾರಾಷ್ಟ್ರೀಯ ಆರ್ಬಿಟ್ರಲ್ ಆದೇಶವನ್ನು ಬದಿಗಿರಿಸಲು ಸರ್ಕಾರವು ಈಗಾಗಲೇ ಮಾರ್ಚ್ 22, 2021 ರಂದು ಅರ್ಜಿ ಸಲ್ಲಿಸಿದೆ. ಹೇಗ್‌ನಲ್ಲಿ ನಡೆದ ಸೆಟ್ ಅಸೈಡ್ ಪ್ರೊಸೀಡಿಂಗ್ಸ್‌ನಲ್ಲಿ ಭಾರತ ಸರ್ಕಾರ ತನ್ನ ಪ್ರಕರಣವನ್ನು ತೀವ್ರವಾಗಿ ಸಮರ್ಥಿಸುತ್ತದೆ. ಈಗಾಗಲೇ ಕೈರ್ನ್ಸ್ ಪ್ರತಿನಿಧಿಗಳು ಮತ್ತು ಸಂಸ್ಥೆಯ  ಸಿಇಒಗಳು ಈ ವಿಷಯವನ್ನು ಪರಿಹರಿಸಲು ಚರ್ಚೆಗಳಿಗಾಗಿ ಭಾರತ ಸರ್ಕಾರವನ್ನು ಸಂಪರ್ಕಿಸಿದ್ದಾರೆ. ರಚನಾತ್ಮಕ ಚರ್ಚೆಗಳು ನಡೆದಿವೆ ಮತ್ತು ದೇಶದ ಕಾನೂನು ಚೌಕಟ್ಟಿನೊಳಗಿನ ವಿವಾದಕ್ಕೆ ಸೌಹಾರ್ದಯುತ ಪರಿಹಾರಕ್ಕಾಗಿ ಸರ್ಕಾರ ಮುಕ್ತವಾಗಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಪ್ಯಾರಿಸ್ ನಲ್ಲಿ ಭಾರತ ಸರ್ಕಾರಿ ಸ್ವಾಮ್ಯದ ಸುಮಾರು 20 ಮಿಲಿಯನ್ ಯೂರೋಗಳಷ್ಟು ಮೌಲ್ಯದ ಫ್ಲಾಟ್ ಗಳಿದ್ದು, ಇವೆಲ್ಲವೂ ಫ್ರಾನ್ಸ್‌ನಲ್ಲಿನ ಭಾರತ ಸರ್ಕಾರದ ಒಡೆತನ ಮತ್ತು ನಿಯಂತ್ರಣದಲ್ಲಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯದ ಮೂರು ನ್ಯಾಯಾಧೀಶರಿಗೆ ಮಾಹಿತಿ ಇದೆ ಎಂದು ಹೇಳಲಾಗಿದೆ.

ಮಧ್ಯ ಪ್ಯಾರಿಸ್ನಲ್ಲಿ ಭಾರತ ಸರ್ಕಾರದ ಒಡೆತನದ ವಸತಿ ರಿಯಲ್ ಎಸ್ಟೇಟ್ ಅನ್ನು ಸ್ಥಗಿತಗೊಳಿಸುವ (ನ್ಯಾಯಾಂಗ ಅಡಮಾನಗಳ ಮೂಲಕ) ಕೈರ್ನ್ ಅವರ ಅರ್ಜಿಗೆ ಜೂನ್ 11 ರಂದು ಫ್ರೆಂಚ್ ನ್ಯಾಯಾಲಯ, ಟ್ರಿಬ್ಯೂನಲ್ ಜುಡಿಸೈರ್ ಡಿ ಪ್ಯಾರಿಸ್ ಒಪ್ಪಿಗೆ ನೀಡಿತು, ಇದಕ್ಕಾಗಿ ಕಾನೂನು ವಿಧಿವಿಧಾನಗಳನ್ನು  ಸೇರಿಸುವುದು ಬುಧವಾರ ಸಂಜೆ ಪೂರ್ಣಗೊಂಡಿದೆ ಎಂದು ನ್ಯಾಯಾಲಯ ಹೇಳಿತ್ತು. ಆ ಆಸ್ತಿಗಳಲ್ಲಿ ವಾಸಿಸುವ ಭಾರತೀಯ ಅಧಿಕಾರಿಗಳನ್ನು ಕೈರ್ನ್ ಹೊರಹಾಕುವ ಸಾಧ್ಯತೆಯಿಲ್ಲವಾದರೂ, ನ್ಯಾಯಾಲಯದ ಆದೇಶದ ನಂತರ ಸರ್ಕಾರವು ಅವುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ಭಾರತ  ನೇಮಕ ಮಾಡಿದ ಒಬ್ಬ ನ್ಯಾಯಾಧೀಶರನ್ನು ಒಳಗೊಂಡ ಮೂರು ಸದಸ್ಯರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೈರ್ನ್‌ ಮೇಲಿನ ತೆರಿಗೆಯನ್ನು ಹಿಂದಿನ ಬಾರಿ ಸರ್ವಾನುಮತದಿಂದ ರದ್ದುಗೊಳಿಸಿತು ಮತ್ತು ಮಾರಾಟವಾದ ಷೇರುಗಳನ್ನು ಮರುಪಾವತಿ ಮಾಡಲು  ಆದೇಶಿಸಿ, ಲಾಭಾಂಶವನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು ಮತ್ತು ಅಂತಹ ಬೇಡಿಕೆಯನ್ನು ಮರುಪಡೆಯಲು ತೆರಿಗೆ ಮರುಪಾವತಿಯನ್ನು ತಡೆಹಿಡಿಯಲಾಗಿದೆ. 

ಆಸ್ತಿ ಮುಟ್ಟುಗೋಲಿಗೆ ಫ್ರಾನ್ಸ್ ಕೋರ್ಟ್ ಆದೇಶ!
ಇದಕ್ಕೂ ಮೊದಲು 1.7 ಬಿಲಿಯನ್ ಯುಎಸ್ ಡಾಲರ್ ನಷ್ಟವನ್ನು ವಸೂಲಿ ಮಾಡಲು ಭಾರತ ಸರಕಾರದ ಸುಮಾರು 20 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ರಿಟನ್‌ನ ಕೇರ್ನ್ ಎನರ್ಜಿ ಸಂಸ್ಥೆಗೆ ಫ್ರಾನ್ಸ್ ನ್ಯಾಯಾಲಯ ಅವಕಾಶ ನೀಡಿತ್ತು. ಜೂನ್ 11 ರಂದು ಫ್ರಾನ್ಸ್ ಕೋರ್ಟ್‌ ಕೈರ್ನ್ ಎನರ್ಜಿ  ಪಿಲ್‌ಸಿಗೆ ಭಾರತೀಯ ಸರ್ಕಾರಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಆದೇಶಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

SCROLL FOR NEXT