ಅಹ್ಮದಾಬಾದ್ ನ ಸಮುದಾಯ ಭವನದ ಬಳಿ ಲಸಿಕೆ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ಜನ 
ದೇಶ

ಜೂನ್ 21 ರಿಂದ ಸರಾಸರಿ ದೈನಂದಿನ ಲಸಿಕೆ ನೀಡುವಿಕೆಯಲ್ಲಿ ಕುಸಿತ!

ಕೊರೋನಾ ವೈರಸ್ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಲಸಿಕೆಯ ಅಭಿಯಾನದಲ್ಲಿ ಜೂನ್ 21 ರಿಂದ ದೈನದಿಂದ ಸರಾಸರಿ ಲಸಿಕೆ ನೀಡುವಿಕೆ ಪ್ರಮಾಣ ಕುಸಿತ ಕಂಡಿದೆ. 

ನವದೆಹಲಿ: ಕೊರೋನಾ ವೈರಸ್ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಲಸಿಕೆಯ ಅಭಿಯಾನದಲ್ಲಿ ಜೂನ್ 21 ರಿಂದ ದೈನದಿಂದ ಸರಾಸರಿ ಲಸಿಕೆ ನೀಡುವಿಕೆ ಪ್ರಮಾಣ ಕುಸಿತ ಕಂಡಿದೆ. 

ಕೊರೋನಾ ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತ ಪ್ರಾರಂಭವಾದಾಗಿನಿಂದ ಈ ಕುಸಿತ ದಾಖಲಾಗಿದೆ ಎಂದು ಸರ್ಕಾರಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ. 

ಕೋವಿನ್ ವೇದಿಕೆಯಲ್ಲಿ ಲಭ್ಯವಿರುವ ಡೇಟಾ ಪ್ರಕಾರ, ಜೂನ್ 21-27 ರ ವಾರದಲ್ಲಿ 61.14 ಲಕ್ಷ ಡೋಸ್ ಗಳಷ್ಟು ಲಸಿಕೆ ನೀಡಲಾಗಿತ್ತು. ಜೂ.28 ರಿಂದ ಜುಲೈ.4 ರ ವಾರದಲ್ಲಿ ಲಸಿಕೆ ಡೋಸ್ ಗಳು 41.92 ಲಕ್ಷಕ್ಕೆ ಇಳಿಕೆಯಾಗಿತ್ತು. 

ಜುಲೈ 5 ರಿಂದ ಜುಲೈ 11 ರ ಅವಧಿಯಲ್ಲಿ ಸರಾಸರಿ ಲಸಿಕೆ ಡೋಸ್ ಗಳು 34.32 ಲಕ್ಷಕ್ಕೆ ಇಳಿಕೆಯಾಗಿದೆ.ರಾಜ್ಯಗಳಲ್ಲಿ ಮಿಶ್ರ ಟ್ರೆಂಡ್ ದಾಖಲಾಗಿದ್ದು, ಕೆಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ಅಭಿಯಾನದಲ್ಲಿ ಸ್ಥಿರವಾದ ಟ್ರೆಂಡ್ ದಾಖಲಾಗಿದೆ. 

ಹರ್ಯಾಣ, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್ ಛತ್ತೀಸ್ ಗಢಗಳಲ್ಲಿ ಸರಾಸರರಿ ದೈನಂದಿನ ಲಸಿಕೆ ಪ್ರಮಾಣ ಜೂನ್21-27 ವರೆಗೂ ಇಳಿಕೆಯಾಗಿದ್ದರೆ, ಕೇರಳ, ಅಂಡಮಾನ್ ನಿಕೋಬಾರ್ ದ್ವೀಪ, ದಾದ್ರಾ ಹಾಗೂ ನಗರ್ ಹವೇಲಿ, ಜಮ್ಮು-ಕಾಶ್ಮೀರಗಳಲ್ಲಿ ಲಸಿಕೆ ನೀಡುವಿಕೆ ಪ್ರಮಾಣ ಸ್ಥಿರವಾಗಿದೆ ಎಂದು ಕೋವಿನ್ ಡೇಟಾ ಹೇಳುತ್ತಿದೆ. 

ಇತ್ತೀಚೆಗೆ ಕೋವಿಡ್ ಪ್ರಕರಣಗಳ ಹೆಚ್ಚಳ ಕಂಡಿದ್ದ ಅಸ್ಸಾಂ ಹಾಗೂ ತ್ರಿಪುರಾಗಳಲ್ಲಿಯೂ ಸರಾಸರಿ ದೈನನಿಂದ ಕೋವಿಡ್-19 ಲಸಿಕೆ ನೀಡುವಿಕೆ ಕುಸಿತ ಕಂಡಿದೆ. ಆದಾಗ್ಯೂ ಈ ಹಿಂದಿನ ಹಂತಗಳಲ್ಲಿದ್ದ ದೈನಂದಿನ ಸರಾಸರಿ ಕೋವಿಡ್-19 ಲಸಿಕೆ ನೀಡುವಿಕೆಗಿಂತಲೂ ಈ ಬಾರಿ ಏರುಗತಿಯಲ್ಲಿದೆ. 
 
ಜೂ.14-20 ರ ಅವಧಿಯಲ್ಲಿ 33.97 ಲಕ್ಷ ಡೋಸ್ ಗಳಷ್ಟು ಲಸಿಕೆಯನ್ನು ದಿನನಿತ್ಯ ನೀಡಲಾಗುತಿತ್ತು. ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು, ಖಾಸಗಿ ಆಸ್ಪತ್ರೆಗಳ ಬಳಿ 1.54 ಕೋಟಿ ಲಸಿಕೆ ಬಾಕಿ ಇದ್ದು, ಇನ್ನಷ್ಟೇ ನೀಡಬೇಕಿದೆ. ಒಟ್ಟಾರೆ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಲ್ಲಿ ಈ ವರೆಗೂ 37.73 ಕೋಟಿ ಲಸಿಕೆಗಳನ್ನು ನೀಡಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT