ಅಹ್ಮದಾಬಾದ್ ನ ಸಮುದಾಯ ಭವನದ ಬಳಿ ಲಸಿಕೆ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ಜನ 
ದೇಶ

ಜೂನ್ 21 ರಿಂದ ಸರಾಸರಿ ದೈನಂದಿನ ಲಸಿಕೆ ನೀಡುವಿಕೆಯಲ್ಲಿ ಕುಸಿತ!

ಕೊರೋನಾ ವೈರಸ್ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಲಸಿಕೆಯ ಅಭಿಯಾನದಲ್ಲಿ ಜೂನ್ 21 ರಿಂದ ದೈನದಿಂದ ಸರಾಸರಿ ಲಸಿಕೆ ನೀಡುವಿಕೆ ಪ್ರಮಾಣ ಕುಸಿತ ಕಂಡಿದೆ. 

ನವದೆಹಲಿ: ಕೊರೋನಾ ವೈರಸ್ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಲಸಿಕೆಯ ಅಭಿಯಾನದಲ್ಲಿ ಜೂನ್ 21 ರಿಂದ ದೈನದಿಂದ ಸರಾಸರಿ ಲಸಿಕೆ ನೀಡುವಿಕೆ ಪ್ರಮಾಣ ಕುಸಿತ ಕಂಡಿದೆ. 

ಕೊರೋನಾ ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತ ಪ್ರಾರಂಭವಾದಾಗಿನಿಂದ ಈ ಕುಸಿತ ದಾಖಲಾಗಿದೆ ಎಂದು ಸರ್ಕಾರಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ. 

ಕೋವಿನ್ ವೇದಿಕೆಯಲ್ಲಿ ಲಭ್ಯವಿರುವ ಡೇಟಾ ಪ್ರಕಾರ, ಜೂನ್ 21-27 ರ ವಾರದಲ್ಲಿ 61.14 ಲಕ್ಷ ಡೋಸ್ ಗಳಷ್ಟು ಲಸಿಕೆ ನೀಡಲಾಗಿತ್ತು. ಜೂ.28 ರಿಂದ ಜುಲೈ.4 ರ ವಾರದಲ್ಲಿ ಲಸಿಕೆ ಡೋಸ್ ಗಳು 41.92 ಲಕ್ಷಕ್ಕೆ ಇಳಿಕೆಯಾಗಿತ್ತು. 

ಜುಲೈ 5 ರಿಂದ ಜುಲೈ 11 ರ ಅವಧಿಯಲ್ಲಿ ಸರಾಸರಿ ಲಸಿಕೆ ಡೋಸ್ ಗಳು 34.32 ಲಕ್ಷಕ್ಕೆ ಇಳಿಕೆಯಾಗಿದೆ.ರಾಜ್ಯಗಳಲ್ಲಿ ಮಿಶ್ರ ಟ್ರೆಂಡ್ ದಾಖಲಾಗಿದ್ದು, ಕೆಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ಅಭಿಯಾನದಲ್ಲಿ ಸ್ಥಿರವಾದ ಟ್ರೆಂಡ್ ದಾಖಲಾಗಿದೆ. 

ಹರ್ಯಾಣ, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್ ಛತ್ತೀಸ್ ಗಢಗಳಲ್ಲಿ ಸರಾಸರರಿ ದೈನಂದಿನ ಲಸಿಕೆ ಪ್ರಮಾಣ ಜೂನ್21-27 ವರೆಗೂ ಇಳಿಕೆಯಾಗಿದ್ದರೆ, ಕೇರಳ, ಅಂಡಮಾನ್ ನಿಕೋಬಾರ್ ದ್ವೀಪ, ದಾದ್ರಾ ಹಾಗೂ ನಗರ್ ಹವೇಲಿ, ಜಮ್ಮು-ಕಾಶ್ಮೀರಗಳಲ್ಲಿ ಲಸಿಕೆ ನೀಡುವಿಕೆ ಪ್ರಮಾಣ ಸ್ಥಿರವಾಗಿದೆ ಎಂದು ಕೋವಿನ್ ಡೇಟಾ ಹೇಳುತ್ತಿದೆ. 

ಇತ್ತೀಚೆಗೆ ಕೋವಿಡ್ ಪ್ರಕರಣಗಳ ಹೆಚ್ಚಳ ಕಂಡಿದ್ದ ಅಸ್ಸಾಂ ಹಾಗೂ ತ್ರಿಪುರಾಗಳಲ್ಲಿಯೂ ಸರಾಸರಿ ದೈನನಿಂದ ಕೋವಿಡ್-19 ಲಸಿಕೆ ನೀಡುವಿಕೆ ಕುಸಿತ ಕಂಡಿದೆ. ಆದಾಗ್ಯೂ ಈ ಹಿಂದಿನ ಹಂತಗಳಲ್ಲಿದ್ದ ದೈನಂದಿನ ಸರಾಸರಿ ಕೋವಿಡ್-19 ಲಸಿಕೆ ನೀಡುವಿಕೆಗಿಂತಲೂ ಈ ಬಾರಿ ಏರುಗತಿಯಲ್ಲಿದೆ. 
 
ಜೂ.14-20 ರ ಅವಧಿಯಲ್ಲಿ 33.97 ಲಕ್ಷ ಡೋಸ್ ಗಳಷ್ಟು ಲಸಿಕೆಯನ್ನು ದಿನನಿತ್ಯ ನೀಡಲಾಗುತಿತ್ತು. ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು, ಖಾಸಗಿ ಆಸ್ಪತ್ರೆಗಳ ಬಳಿ 1.54 ಕೋಟಿ ಲಸಿಕೆ ಬಾಕಿ ಇದ್ದು, ಇನ್ನಷ್ಟೇ ನೀಡಬೇಕಿದೆ. ಒಟ್ಟಾರೆ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಲ್ಲಿ ಈ ವರೆಗೂ 37.73 ಕೋಟಿ ಲಸಿಕೆಗಳನ್ನು ನೀಡಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT