ಐಎಂಎ 
ದೇಶ

ಬಕ್ರಿ-ಈದ್ ಆಚರಣೆ: ಕೋವಿಡ್-19 ನಿರ್ಬಂಧ ಸಡಿಲಿಕೆ ನಿರ್ಧಾರ ಅನಗತ್ಯ, ಅನುಚಿತ: ಕೇರಳ ಸರ್ಕಾರದ ನಡೆ ಬಗ್ಗೆ ಐಎಂಎ

ಬಕ್ರಿ-ಈದ್ ಆಚರಣೆಗೂ ಮುನ್ನ ಕೋವಿಡ್-19 ನಿರ್ಬಂಧ ಸಡಿಲಿಕೆ ಮಾಡಿರುವ ಕೇರಳ ಸರ್ಕಾರದ ಕ್ರಮವನ್ನು ಭಾರತೀಯ ವೈದ್ಯಕೀಯ ಸಂಘ ಅನಗತ್ಯ ಹಾಗೂ ಅನುಚಿತ ನಡೆ ಎಂದು ಹೇಳಿದೆ. 

ನವದೆಹಲಿ: ಬಕ್ರಿ-ಈದ್ ಆಚರಣೆಗೂ ಮುನ್ನ ಕೋವಿಡ್-19 ನಿರ್ಬಂಧ ಸಡಿಲಿಕೆ ಮಾಡಿರುವ ಕೇರಳ ಸರ್ಕಾರದ ಕ್ರಮವನ್ನು ಭಾರತೀಯ ವೈದ್ಯಕೀಯ ಸಂಘ ಅನಗತ್ಯ ಹಾಗೂ ಅನುಚಿತ ನಡೆ ಎಂದು ಹೇಳಿದೆ. 

ವೈದ್ಯಕೀಯ ತುರ್ತು ಇರುವಾಗ ಇಂತಹ ನಿರ್ಧಾರ ಕೈಗೊಂಡಿರುವ ಕೇರಳ ಸರ್ಕಾರದ ನಡೆ ಅನಗತ್ಯ ಹಾಗೂ ಅನುಚಿತವಾಗಿದೆ ಎಂದು ಐಎಂಎ ಹೇಳಿದ್ದು, ನಿರ್ಬಂಧ ಸಡಿಲಿಕೆಯನ್ನು ಹಿಂಪಡೆಯುವಂತೆ ಸಲಹೆ ನೀಡಿದೆ. ಕೇರಳ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದು ಕೋವಿಡ್-19 ತಡೆಗೆ ಸೂಕ್ತವಾದಂತಹ ನಡಾವಳಿಗಳನ್ನು ಜಾರಿಗೊಳಿಸದೇ ಇದ್ದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿಯೂ ಐಎಂಎ ಎಚ್ಚರಿಸಿದೆ.

ಉತ್ತರ ಭಾರತದಲ್ಲಿ ಹಲವು ರಾಜ್ಯಗಳು ಸಾಂಕ್ರಾಮಿಕ ದೃಷ್ಟಿಯಿಂದ ಜನಪ್ರಿಯ ಉತ್ಸವ ಹಾಗೂ ತೀರ್ಥಯಾತ್ರೆಗಳನ್ನು ರದ್ದುಗೊಳಿಸಿವೆ. ಇಂತಹ ಸಂದರ್ಭದಲ್ಲಿ ಕೇರಳ ಸರ್ಕಾರ ಗುಂಪು ಸೇರುವುದಕ್ಕೆ ಅವಕಾಶ ನೀಡಿರುವ ನಿರ್ಧಾರವನ್ನು ತೆಗೆದುಕೊಂಡಿರುವುದು ದುರದೃಷ್ಟಕರ ಎಂದು ಐಎಂಎ ಟೀಕಿಸಿದೆ. 

"ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ಸೆರೋಪಾಸಿಟಿವಿಟಿಯ ನಡುವೆಯೇ ಕೇರಳ ಸರ್ಕಾರ ಬಕ್ರಿ-ಈದ್ ನ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ನಿರ್ಧಾರ ಕೈಗೊಂಡಿರುವುದು ನೋವಿನ ಸಂಗತಿಯಾಗಿದೆ. ದೇಶದ ಹಾಗೂ ಮಾನುಕುಲದ ಒಳಿತಿಗಾಗಿ ಐಎಂಎ ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತದೆ ಹಾಗೂ ಕೋವಿಡ್-19 ನಿರ್ಬಂಧ ಮುರಿಯುವವರೆಡೆಗೆ ಶೂನ್ಯ ಸಹಿಷ್ಣುಗಳಾಗಿರಬೇಕೆಂದು ಒತ್ತಾಯಿಸುತ್ತದೆ" ಎಂದು ಹೇಳಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

SCROLL FOR NEXT