ಅಜ್ಮೀರ್ ನ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯುತ್ತಿರುವ ಮಹಿಳೆ 
ದೇಶ

ಮೇ ತಿಂಗಳಲ್ಲಿ ನೀಡಿರುವ ಲಸಿಕೆ ಸಂಖ್ಯೆ ಬಗ್ಗೆ ಮಾಧ್ಯಮಗಳಲ್ಲಿ ತಪ್ಪು ವರದಿ: ಸರ್ಕಾರ 

ಮೇ ತಿಂಗಳಲ್ಲಿ ನೀಡಿರುವ ಲಸಿಕೆ ಸಂಖ್ಯೆ ಬಗ್ಗೆ ಮಾಧ್ಯಮಗಳಲ್ಲಿ ತಪ್ಪು ವರದಿ ಪ್ರಕಟವಾಗಿದ್ದು ಇದಕ್ಕೆ ಯಾವುದೇ ಆಧಾರವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. 

ನವದೆಹಲಿ: ಮೇ ತಿಂಗಳಲ್ಲಿ ನೀಡಿರುವ ಲಸಿಕೆ ಸಂಖ್ಯೆ ಬಗ್ಗೆ ಮಾಧ್ಯಮಗಳಲ್ಲಿ ತಪ್ಪು ವರದಿ ಪ್ರಕಟವಾಗಿದ್ದು ಇದಕ್ಕೆ ಯಾವುದೇ ಆಧಾರವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ 120 ಮಿಲಿಯನ್ ಡೋಸ್ ಗಳ ಕೋವಿಡ್-19 ಲಸಿಕೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಮೇ ತಿಂಗಳಲ್ಲಿ ಲಭ್ಯವಿದ್ದ 79 ಮಿಲಿಯನ್ ಡೋಸ್ ಗಳ ಪೈಕಿ 58 ಮಿಲಿಯನ್  ಡೋಸ್ ಗಳಷ್ಟು ಲಸಿಕೆಯನ್ನು ಮಾತ್ರ ನೀಡಲಾಗಿದೆ ಎಂಬ ಆರೋಪ ಮಾಡಿ ಮಾಧ್ಯಮಗಳು ವರದಿ ಪ್ರಕಟಿಸಿದ್ದವು ಇದು ತಪ್ಪು ಮಾಹಿತಿಯಾಗಿದೆ ಹಾಗೂ ಯಾವುದೇ ಆಧಾರವಿಲ್ಲದ ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಧ್ಯಮಗಳ ವರದಿಯನ್ನು ತಿರಸ್ಕರಿಸಿದೆ. 

ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಜೂ.1 ರಂದು ಬೆಳಿಗ್ಗೆ 7 ಗಂಟೆ ವರೆಗೆ ಸಂಗ್ರಹಿಸಲಾಗಿರುವ ಸಚಿವಾಲಯದ ಡಾಟಾ ಪ್ರಕಾರ ಮೇ.1-31 ವರೆಗೂ ಒಟ್ಟಾರೆ 61.06 ಮಿಲಿಯನ್ ಲಸಿಕೆ ಡೋಸ್ ಗಳನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೀಡಲಾಗಿದೆ. ಒಟ್ಟಾರೆ, 16.22 ಮಿಲಿಯನ್ ಉಳಿದ ಹಾಗೂ ಬಳಕೆ ಮಾಡದ ಡೋಸ್ ಗಳು ರಾಜ್ಯಗಳ ಬಳಿ ಇದೆ. 

ಮೇ ತಿಂಗಳ 1-31 ವರೆಗೆ ಒಟ್ಟಾರೆ 79.45 ಮಿಲಿಯನ್ ಡೋಸ್ ಗಳಷ್ಟು ಲಸಿಕೆ ಲಭ್ಯವಿತ್ತು ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಲಸಿಕೆ ಲಭ್ಯತೆಯನ್ನು ಸುವ್ಯವಸ್ಥಿತಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ಲಸಿಕೆ ಉತ್ಪಾದಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮೇ.1 ರಿಂದಲೇ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ವಿವಿಧ ಸಂಗ್ರಹದ ಆಯ್ಕೆಗಳನ್ನು ನೀಡಲಾಗಿದೆ. 

ಹಲವು ಮಾಧ್ಯಮಗಳ ವರದಿಗಳು ತಪ್ಪು ಮಾಹಿತಿಯನ್ನು ಪ್ರಕಟಿಸಿದ್ದವು, ಈ ವರೆಗೂ ಒಟ್ಟಾರೆ 21,85,46,667 ಲಸಿಕೆಯನ್ನು ನೀಡಲಾಗಿದೆ ಆದರೆ ಕೆಲವು ಮಾಧ್ಯಮಗಳು ಲಸಿಕೆ ನೀತಿಯನ್ನು ಪರಿಶೀಲಿಸದ ಉಲ್ಲೇಖಗಳನ್ನು ಆಧರಿಸಿ ಟೀಕಿಸುತ್ತಾ ಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Asia Cup 20225: Operation Sindoor ಬಳಿಕ ಪಾಕಿಸ್ತಾನಕ್ಕೆ ಮತ್ತೆ ಸೋಲಿನ ರುಚಿ ತೋರಿಸಿದ ಭಾರತ!

ಭಾರತಕ್ಕೆ ಕಷ್ಟದ ದಿನಗಳು ಶುರು: 1.4 ಬಿಲಿಯನ್ ಜನರಿದ್ದರೂ ನಮ್ಮಿಂದ ಜೋಳ ಖರೀದಿಸಲ್ಲ; ಮತ್ತೆ ಕೆಂಡಕಾರಿದ ಅಮೆರಿಕ ಸಚಿವ ಲುಟ್ನಿಕ್!

2025 ಮಹಿಳಾ ಹಾಕಿ ಏಷ್ಯಾ ಕಪ್‌: ಚೀನಾ ವಿರುದ್ಧ ಸೋತ ಭಾರತ ಬೆಳ್ಳಿಗೆ ತೃಪ್ತಿ; ಪ್ರಧಾನಿ ಮೋದಿ ಅಭಿನಂದನೆ!

ಹಣಕ್ಕಾಗಿ ರಾಷ್ಟ್ರೀಯತೆ ಬಲಿ: ಭಾರತ-ಪಾಕಿಸ್ತಾನ ಏಷ್ಯಾ ಕಪ್ ಪಂದ್ಯಕ್ಕೆ BJP ವಿರುದ್ಧ ವಿರೋಧ ಪಕ್ಷಗಳ ಆಕ್ರೋಶ!

ಉತ್ತರ ಪ್ರದೇಶ: ಲಾಠಿ ಚಾರ್ಜ್ ನಲ್ಲಿ ಬಿಜೆಪಿ ಕಾರ್ಯಕರ್ತನ ಸಾವು; ತನಿಖೆಗೆ ಎಸ್‌ಐಟಿ

SCROLL FOR NEXT