ವಂಡಲೂರು ಮೃಗಾಲಯ (ಪಿಟಿಐ ಚಿತ್ರ) 
ದೇಶ

ಕೋವಿಡ್-19: ತಮಿಳುನಾಡು ವಂಡಲೂರು ಮೃಗಾಯಲದ 4 ಸಿಂಹಗಳಿಗೆ ಡೆಲ್ಟಾ ರೂಪಾಂತರಿ ಸೋಂಕು

ತಮಿಳುನಾಡಿನ ಚೆನ್ನೈನಲ್ಲಿರುವ ವಂಡಲೂರಿನಲ್ಲಿರುವ ಮೃಗಾಲಯದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಇದೀಗ ಮೃಗಾಲಯದ ಈ ಪರಿಸ್ಥಿತಿಗೆ ವೈರಸ್ ರೂಪಾಂತರಿ ಡೆಲ್ಟಾ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿರುವ ವಂಡಲೂರಿನಲ್ಲಿರುವ ಮೃಗಾಲಯದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಇದೀಗ ಮೃಗಾಲಯದ ಈ ಪರಿಸ್ಥಿತಿಗೆ ವೈರಸ್ ರೂಪಾಂತರಿ ಡೆಲ್ಟಾ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಹೌದು.. ಪ್ರಸ್ತುತ ಮೃಗಾಲಯದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿರುವ ನಾಲ್ಕು ಸಿಂಹಗಳಲ್ಲಿ ಈ ಡೆಲ್ಟಾ ರೂಪಾಂತರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಮೃಗಾಲಯದಲ್ಲಿ ತಜ್ಞರು ಸೋಂಕು ಪೀಡಿತ ಸಿಂಹಗಳ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಿದ್ದು ಈ ವೇಳೆ ಕೋವಿಡ್-19 ರೂಪಾಂತರ ವೈರಸ್ ಡೆಲ್ಚಾ  (ಬಿ.1.617.2) ಕಂಡುಬಂದಿದೆ. 

ಈ ವರ್ಷ ಮೇ 11 ರಂದು, ವಿಶ್ವ ಆರೋಗ್ಯ ಸಂಸ್ಥೆ ಬಿ .1.617.2 ವಂಶಾವಳಿಯನ್ನು ಕಾಳಜಿಯ ರೂಪಾಂತರಿ ತಳಿ (ವಿಒಸಿ) ಎಂದು ವರ್ಗೀಕರಿಸಿತ್ತು. ಇದು ಹೆಚ್ಚಿನ ಮತ್ತು ವೇಗದ ಪ್ರಸರಣ ಸಾಮರ್ಥ್ಯ ಹೊಂದಿದ್ದು,ಕಡಿಮೆ ತಟಸ್ಥೀಕರಣದ ಪುರಾವೆಗಳನ್ನು ತೋರಿಸಿದೆ ಎಂದು ಮೃಗಾಲಯದ ಉಪ ನಿರ್ದೇಶಕರು  ತಿಳಿಸಿದ್ದಾರೆ.

ಮೃಗಾಲಯದಲ್ಲಿರುವ 11 ಸಿಂಹಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ನಾಲ್ಕು ಸಿಂಹಗಳ ಮಾದರಿಯನ್ನು ಮೇ 24 ರಂದು ಸಂಗ್ರಹಿಸಿ, ಮೇ 29 ರಂದು ಏಳು ಸಿಂಹಗಳ ಮಾದರಿಯನ್ನು ಭೋಪಾಲ್‌ನ ICAR- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಗೆ  ಕಳುಹಿಸಲಾಗಿತ್ತು. ಈ ವರದಿ ಇದೀಗ ಬಂದಿದ್ದು, ಈ ಪೈಕಿ 4 ಸಿಂಹಗಳಲ್ಲಿ ಡೆಲ್ಟಾ ರೂಪಾಂತರಿ ತಳಿ ಪತ್ತೆಯಾಗಿದೆ.   

ಒಂಬತ್ತು ವರ್ಷದ ಸಿಂಹಿಣಿ ನೀಲಾ ಮತ್ತು 12 ವರ್ಷ ವಯಸ್ಸಿನ ಪಾಥ್ಬನಾಥನ್ ಎಂಬ ಗಂಡು ಸಿಂಹ ಈ ತಿಂಗಳ ಆರಂಭದಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT