ಸಂಗ್ರಹ ಚಿತ್ರ 
ದೇಶ

ಪ್ರಿಯತಮೆಗೆ ವಿವಾಹ ಸುದ್ದಿ ತಿಳಿದು ಅವಳ ಮನೆಗೆ ಭೇಟಿ ನೀಡಿದ ಯುವಕನನ್ನು ಕಲ್ಲಿಂದ ಜಜ್ಜಿ ಕೊಲೆ!

ಪ್ರಿಯತಮೆಗೆ ಬೇರೊಬ್ಬ ಯುವಕನೊಂದಿಗೆ ವಿವಾಹವಾಗುತ್ತಿದೆ ಎಂದು ತಿಳಿದ ಯುವಪ್ರೇಮಿ ಆಕೆಯ ಮನೆಗೆ ಆಗಮಿಸಿದಾಗ ಯುವತಿಯ ಕುಟುಂಬ ಸದಸ್ಯರು ಆತನನ್ನು ಕಲ್ಲಿನಿಂದ ಥಳಿಸಿ ಕೊಂದಿರುವ ಘಟನೆ  ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ನಡೆದಿದೆ.

ದಿಂಡಿಗಲ್: ಪ್ರಿಯತಮೆಗೆ ಬೇರೊಬ್ಬ ಯುವಕನೊಂದಿಗೆ ವಿವಾಹವಾಗುತ್ತಿದೆ ಎಂದು ತಿಳಿದ ಯುವಪ್ರೇಮಿ ಆಕೆಯ ಮನೆಗೆ ಆಗಮಿಸಿದಾಗ ಯುವತಿಯ ಕುಟುಂಬ ಸದಸ್ಯರು ಆತನನ್ನು ಕಲ್ಲಿನಿಂದ ಥಳಿಸಿ ಕೊಂದಿರುವ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ಸಂಬಂಧ 4 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ

ಭಾರತಿ ರಾಜ್ (21) ಗೆ ತನ್ನ ಪ್ರೇಯಸಿ ಪರಮೇಶ್ವರಿ (20) ಗೆ ಬೇರೆ ಯುವಕನೊಂದಿಗೆ ವಿವಾಹವಾಗುತ್ತದೆ ಎಂದು ತಿಳಿದು ಆಕೆಯನ್ನು ಕಾಣಲು, ಅವಳ ಮದುವೆಯನ್ನು ತಡೆಯಲು ಹಾಗೂ  ಅವಳನ್ನು ತನಗೆ ನೀಡಿ ಮದುವೆ ಮಾಡಿಸುವಂತೆ ಅವಳ ಕುಟುಂಬ ಸದಸ್ಯರನ್ನು ಮನವೊಲಿಸಲು ಅವಳ ಮನೆಗೆ ಆಗಮಿಸಿದ್ದಾನೆ.

ಆದರೆ  ಇದು ಪರಮೇಶ್ವರಿಯ ಕುಟುಂಬವನ್ನು ಕೆರಳಿಸಿತು ಮತ್ತು ಅವರು ಭಾರತಿ ರಾಜ್ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಹೊಡೆದಿದ್ದಾರೆ. ಏತನ್ಮಧ್ಯೆ, ಪರಮೇಶ್ವರಿಯ ಸಹೋದರ ಮಲೈಸಾಮಿ ಭಾರತಿ ರಾಜ್ ನ ತಲೆಗೆ ದೊಡ್ಡ ಕಲ್ಲಿನಿಂದ ಜಜ್ಜಿದ್ದಾನೆ. ಇದರಿಂದ ಯುವಕ ಭಾರತಿ ರಾಜ್  ಪ್ರಜ್ಞೆ ತಪ್ಪಿದನು. ಘಟನೆಯಲ್ಲಿ  ಗಂಭೀರವಾಗಿ ಗಾಯಗೊಂಡಿದ್ದ ಭಾರತಿ ರಾಜ್ ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿಯೂ ಆತ ಬದುಕಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT