ಮುಂಬೈ: ಟೌಕ್ಟೆ ಚಂಡಮಾರುತಕ್ಕೆ ದಿಕ್ಕಾಪಾಲಾಯ್ತು 273 ಮಂದಿ ಇದ್ದ ಬಾರ್ಜ್! 
ದೇಶ

ಮುಂಬೈ: ಟೌಕ್ಟೆ ಚಂಡಮಾರುತಕ್ಕೆ 273 ಮಂದಿ ಇದ್ದ ಬಾರ್ಜ್ ದಿಕ್ಕಾಪಾಲು!

ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕಾಪಾಲಾಗಿ ಚಲಿಸಿದ ಘಟನೆ ವರದಿಯಾಗಿದೆ. 

ಮುಂಬೈ: ಟೌಕ್ಟೆ ಚಂಡಮಾರುತದ ಪರಿಣಾಮ ಮುಂಬೈ ನ ಕಡಲಲ್ಲಿ 273 ಮಂದಿಯನ್ನು ಹೊತ್ತು ಸಂಚರಿಸುತ್ತಿದ್ದ ಬಾರ್ಜ್ ದಿಕ್ಕಾಪಾಲಾಗಿ ಚಲಿಸಿದ ಘಟನೆ ವರದಿಯಾಗಿದೆ. 

ಟೌಕ್ಟೆ  ಚಂಡಮಾರುತ ಮೇ.17 ರಂದು ಸಂಜೆ ಗುಜರಾತ್ ನ್ನು ಪ್ರವೇಶಿಸಲಿದೆ. ಇದಕ್ಕೂ ಮುನ್ನ  ಬಾಂಬೆ ಹೈ ಏರಿಯಾದ ಹೀರಾ ಆಯಿಲ್ ಫೀಲ್ಡ್ಸ್ ನಿಂದ ಬಾರ್ಜ್ P305 ದಿಕ್ಕಾಪಾಲಾಗಿದ್ದು, ಈ ಬಾರ್ಜ್ ನಲ್ಲಿ 273 ಮಂದಿ ಇದ್ದರು. ಬಾರ್ಜ್ ನಲ್ಲಿದ್ದವರ ಶೋಧ, ರಕ್ಷಣೆ ಕಾರ್ಯಾಚರಣೆಗಾಗಿ  ಐಎನ್ಎಸ್ ಕೊಚ್ಚಿಯನ್ನು ಕಳಿಸಲಾಗಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. 

ಆಯಿಲ್ ಫೀಲ್ಡ್ಸ್ ಮುಂಬೈ ನ ನೈರುತ್ಯದಾದ್ಯಂತ 70 ಕಿ.ಮೀ ವರೆಗೂ ಕಾಣಸಿಗುತ್ತದೆ. ಟೌಕ್ಟೆ ಚಂಡಮಾರುತದ ಹಿನ್ನೆಲೆಯಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರಕ್ಕಾಗಿ ಹಲವು ಹಡಗುಗಳನ್ನು ಕಳಿಸಲಾಗಿದೆ. 

ಯುದ್ಧನೌಕೆ ಬಾರ್ಜ್ ನ್ನು ಸಂಜೆ 4 ಗಂಟೆ ವೇಳೆಗೆ ತಲುಪಲಿದೆ. ಇನ್ನು ಚಂಡಮಾರುತದ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ವರೆಗೆ ಸ್ಥಗಿತಗೊಳಿಸಲಾಗಿತ್ತು. ರಾಯ್ ಘಡ ಜಿಲ್ಲೆ ಸೇರಿದಂತೆ ಹಲವೆಡೆ ರೆಡ್ ಅಲರ್ಟ್ ನ್ನು ಘೋಷಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT