ರಘು ರಾಮ ಕೃಷ್ಣ ರಾಜು 
ದೇಶ

ಗುಂಟೂರು ಜೈಲಿನಲ್ಲಿ ನನ್ನ ಪತಿಯ ಹತ್ಯೆಗೆ ಸಂಚು: ವೈಎಸ್ ಆರ್ ಕಾಂಗ್ರೆಸ್ ಸಂಸದನ ಪತ್ನಿ ಆರೋಪ

ಗುಂಟೂರು ಜೈಲಿನಲ್ಲಿ ನನ್ನ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂದು ವೈಎಸ್ ಆರ್ ಕಾಂಗ್ರೆಸ್ ಬಂಡಾಯ ಸಂಸದ ರಘು ರಾಮ ಕೃಷ್ಣ ರಾಜು ಪತ್ನಿ ರಮಾದೇವಿ ಆರೋಪಿಸಿದ್ದಾರೆ.

ವಿಜಯವಾಡ: ಗುಂಟೂರು ಜೈಲಿನಲ್ಲಿ ನನ್ನ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂದು ವೈಎಸ್ ಆರ್ ಕಾಂಗ್ರೆಸ್ ಬಂಡಾಯ ಸಂಸದ ರಘು ರಾಮ ಕೃಷ್ಣ ರಾಜು ಪತ್ನಿ ರಮಾದೇವಿ ಆರೋಪಿಸಿದ್ದಾರೆ.

ಗುಂಟೂರು ಜನರಲ್ ಆಸ್ಪತ್ರೆಯಲ್ಲಿ ಹೈಕೋರ್ಟ್ ರಚಿಸಿದ ವೈದ್ಯಕೀಯ ಮಂಡಳಿಯು ತಪಾಸಣೆ ನಡೆಸಿದ ನಂತರ ಸಂಸದರನ್ನು ಜೈಲಿಗೆ ಸ್ಥಳಾಂತರಿಸಿದ ಕೂಡಲೇ ರಮಾದೇವಿ ಈ ಆರೋಪ ಮಾಡಿದ್ದಾರೆ. ಸಿಐಡಿ ಕೋರ್ಟ್ ಆದೇಶದಂತೆ ಸಂಸದ ರಮೇಶ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಜೈಲಿನಲ್ಲಿ ನನ್ನ ಪತಿಯನ್ನು ಕೊಲ್ಲಲು ಅವರು ಸಂಚು ರೂಪಿಸಿದ್ದಾರೆ.  ಈಗಾಗಲೇ ಅವರು ನನ್ನ ಪತಿಗೆ ಏನೇನು ಹಾನಿ ಮಾಡಿದರೋ ಗೊತ್ತಿಲ್ಲ. ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧದ ಮೊಕದ್ದಮೆ ವಾಪಸ್ ಪಡೆುವಂತೆ ಸಿಐಡಿ ಅಧಿಕಾರಿಗಳು ನನ್ನ ಪತಿಗೆ ಥರ್ಡ್ ಡಿಗ್ರಿ  ಟ್ರೀಟ್ ಮೆಂಟ್ ನೀಡುತ್ತಿದ್ದಾರೆ ಎಂದು ರಮಾದೇವಿ ಆಪಾದಿಸಿದ್ದಾರೆ.

ಕಡಪ ಮೂಲದ ಹಲವು ಮಂದಿ ಈಗಾಗಲೇ ಗುಂಟೂರು ಜೈಲಿನಲ್ಲಿ ಇರಿಸಲಾಗಿದ್ದು, ಅವರು ತಮ್ಮ ಪತಿಗೆ ಹಾನಿ ಉಂಟುಮಾಡಬಹುದು ಎಂದು ರಮಾ ದೇವಿ ಆರೋಪಿಸಿದ್ದಾರೆ. ನನ್ನ  ಪತಿಗೆ ಏನಾದರೂ ಅಪಾಯ ಸಂಭವಿಸಿದರೇ ಅದಕ್ಕೆ  ಸಿಐಡಿ ಮುಖ್ಯಸ್ಥ ಪಿ.ವಿ.ಸುನೀಲ್ ಕುಮಾರ್ ಮತ್ತು ಮುಖ್ಯಮಂತ್ರಿ ಜವಾಬ್ದಾರರಾಗಿರುತ್ತಾರೆ ಎಂದು ಹೇಳಿದ್ದಾರೆ.

ಅವರು ಭಯೋತ್ಪಾದಕ ಅಥವಾ ಅಪರಾಧಿಯಲ್ಲ,  ಎಲ್ಲಾ ಅಪರಾಧಿಗಳು ನಗರದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದಾರೆ. ನಾವುನ ಪ್ರಜಾಪ್ರಭುತ್ವದಲ್ಲಿದ್ದೇವೆಯೇ? ಇದಕ್ಕೆ ಸಿಎಂ ಉತ್ತರಿಸಬೇಕು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಮತ್ತು ಸಿಐಡಿ ಮುಖ್ಯಸ್ಥರು ಅಪರಾಧಿಗಳು, ಸರ್ಕಾರ ಮತ್ತು ತನಿಖಾ ಎಜೆನ್ಸಿ ಹೈಕೋರ್ಟ್ ಆದೇಶವನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ.

ಶುಕ್ರವಾರ ರಾತ್ರಿ ನನ್ನ ತಂದೆಯನ್ನು ಕಾನೂನು ಬಾಹಿರವಾಗಿ ಅಪಹರಿಸಿದ್ದಾರೆ. ಮತ್ತು ಇಡೀ ರಾತ್ರಿ ನನ್ನ ತಂದೆಗೆ ಕಿರುಕುಳ ನೀಡಿದ್ದಾರೆ ಎಂದು ಸಂಸದರ ಪುತ್ರ ಕನುಮುರಿ ಭರತ್ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT