ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಭಾಗಿಯಾದ ಜನತೆ (ಸಂಗ್ರಹ ಚಿತ್ರ) 
ದೇಶ

ಕೋವಿಡ್-19 ಹೆಚ್ಚಳಕ್ಕೆ ಧಾರ್ಮಿಕ ಕಾರ್ಯಕ್ರಮ, ವಲಸಿಗರು ಕಾರಣ: ಐಸಿಎಂಆರ್

ಧಾರ್ಮಿಕ ಕಾರ್ಯಕ್ರಮಗಳು, ವಲಸೆ ಕೋವಿಡ್-19 ಎರಡನೇ ಅಲೆ ಹೆಚ್ಚಳಕ್ಕೆ ಕಾರಣ ಎಂದು ಐಸಿಎಂಆರ್ ನೇತೃತ್ವದ ಅಧ್ಯಯನ ವರದಿಯೊಂದು ಹೇಳಿದೆ. 

ನವದೆಹಲಿ: ಧಾರ್ಮಿಕ ಕಾರ್ಯಕ್ರಮಗಳು, ವಲಸೆ ಕೋವಿಡ್-19 ಎರಡನೇ ಅಲೆ ಹೆಚ್ಚಳಕ್ಕೆ ಕಾರಣ ಎಂದು ಐಸಿಎಂಆರ್ ನೇತೃತ್ವದ ಅಧ್ಯಯನ ವರದಿಯೊಂದು ಹೇಳಿದೆ. 

ವಿದೇಶಿ ಪ್ರಯಾಣಿಕರು ಹಾಗೂ ದೇಶದ ಆಂತರಿಕವಾಗಿ ವಲಸೆ ಕಾರ್ಮಿಕರು, ಧಾರ್ಮಿಕ ಕಾರ್ಯಕ್ರಮಗಳಿಂದ ಕೋವಿಡ್-19 ಪ್ರಸರಣಗೊಂಡಿದ್ದು ಎರಡನೇ ಅಲೆ ಹೆಚ್ಚಳಕ್ಕೆ ಕಾರಣ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. 

ಮಿಂಟ್ ಅಧ್ಯಯನ ವರದಿಯನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದ್ದು, SARS-CoV-2 ರೂಪಾಂತರಿಗಳಲ್ಲಿ ಕಂಡುಬರುತ್ತಿರುವ ಅಮೀನೋ ಆಸಿಡ್ ರೂಪಾಂತರಗಳು ಈಗ ಪ್ರಸರಣ ಹೊಂದುತ್ತಿರುವ ತಳಿಗಳಲ್ಲಿ ಹೋಸ್ಟ್ ಅಡಾಪ್ಟೇಷನ್ ಗೆ ಸಜ್ಜಾಗಿದ್ದು, ವಿಕಾಸಾತ್ಮಕ ಪ್ರವೃತ್ತಿ ಹೊಂದಿದೆ ಎಂದು ಹೇಳಿದೆ. 

ಮೂರು ರೂಪಾಂತರಿಗಳಾದ B.1.1.7 ವಂಶಾವಳಿ ಆತಂಕಕ್ಕೆ ಕಾರಣವಾಗಿದೆ. B.1.351 ವಂಶಾವಳಿ ಭಾರತದಲ್ಲಿ ವರದಿಯಾಗಿದೆ. ಆಂಟಿಜೆನಿಕ್ ಡ್ರಿಫ್ಟ್, ಹರಡುವಿಕೆ ಮತ್ತು ರೋಗನಿರೋಧಕವನ್ನೂ ಮೀರಿಸುವ ಸಾಮರ್ಥ್ಯದಿಂದಾಗಿ (ಪ್ರಮುಖವಾಗಿ B.1.351) ಇವೆರಡೂ ಆತಂಕಗಳಿಗೆ ಕಾರಣವಾಗಿದೆ ಎಂದು ಐಸಿಎಂಆರ್ ಹೇಳಿದೆ. ಭಾರತದಲ್ಲಿ ಇತ್ತೀಚೆಗೆ ಡಬಲ್ ಮ್ಯುಟೆಂಟ್ (ಡಬಲ್ ರೂಪಾಂತರಿ) ವೈರಾಣು ಎಂದೇ ಕುಖ್ಯಾತವಾಗಿರುವ B.1.617 ವೈರಾಣು ಪತ್ತೆಯಾಗಿದ್ದು ಹೆಚ್ಚಿನ ಪ್ರಸರಣ ಪ್ರಮಾಣದ ಸಾಮರ್ಥ್ಯ ಹೊಂದಿದೆ. ಡಬಲ್ ಮ್ಯುಟೆಂಟ್ ವೈರಾಣುಗಳು ಮಹಾರಾಷ್ಟ್ರ, ತೆಲಂಘಾಣ, ಆಂಧ್ರಪ್ರದೇಶ, ಅಸ್ಸಾಂಗಳಲ್ಲಿ ಮಾರ್ಚ್ ಹಾಗೂ ಜುಲೈ2020 ರಲ್ಲಿ ಪತ್ತೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT